<div> <strong>ಬೆಂಗಳೂರು:</strong> ಹಸಿರು ಉಣಿಸುತ್ತಾ ಜನರ ಮನಸ್ಸಿಗೆ ಮುದ ನೀಡುವ ತಾಣವಾಗಿರುವ ಲಾಲ್ಬಾಗ್ ಸಸ್ಯತೋಟದಲ್ಲಿ ನಿರ್ಮಾಣವಾಗುತ್ತಿದೆ ಅಪರೂಪದ ಜಲ ಹಾಗೂ ಜೌಗು ಸಸ್ಯಗಳ ‘ಸಂಕನ್ ಉದ್ಯಾನ’.<br /> <div> ಲಾಲ್ಬಾಗ್ ಪಶ್ಚಿಮ ದ್ವಾರದ ಬಳಿಯ 30 ಎಕರೆ ಪ್ರದೇಶದಲ್ಲಿರುವ ಧನ್ವಂತರಿ ವನದಲ್ಲಿ ಈ ಉದ್ಯಾನ ರೂಪಗೊಳ್ಳುತ್ತಿದೆ. 2.5 ಎಕರೆ ಪ್ರದೇಶದ ತುಂಬ ಹಸಿರು ಹುಲ್ಲಿನ ಹಾಸು, ಕಲ್ಲಿನ ಪೀಠಗಳು, ಕಣ್ಸೆಳೆವ ತಾವರೆಕೊಳ, ಪುಟ್ಟದಾದ ಕಲ್ಯಾಣಿ ಇವುಗಳಿಂದ ಸಂಕನ್ ಉದ್ಯಾನ ಕಂಗೊಳಿಸಲಿದೆ.<br /> </div><div> ನೆಲಮಟ್ಟದಿಂದ ಕೆಳಗೆ ಈ ಉದ್ಯಾನವನ್ನು ನಿರ್ಮಿಸುತ್ತಿರುವುದರಿಂದ ಇದನ್ನು ‘ಸಂಕನ್ ಉದ್ಯಾನ’ ಎಂದು ಕರೆಯಲಾಗುತ್ತದೆ. ಈ ಉದ್ಯಾನ ಸಂಪೂರ್ಣ ತೇವಾಂಶ ಭರಿತವಾಗಿದ್ದು, ಅಲ್ಲಿನ ವಾತಾವರಣವನ್ನು ಮತ್ತಷ್ಟು ತಂಪುಗೊಳಿಸಲಿದೆ.</div><div> </div><div> ‘2016ರ ಸೆಪ್ಟೆಂಬರ್ನಲ್ಲಿ ಉದ್ಯಾನ ಕಾಮಗಾರಿ ಪ್ರಾರಂಭಗೊಂಡಿದ್ದು, ಶೇ 80ರಷ್ಟು ಕೆಲಸ ಪೂರ್ಣಗೊಂಡಿದೆ. ಆಗಸ್ಟ್ ವೇಳೆಗೆ ಉದ್ಯಾನ ಸಿದ್ಧಗೊಳ್ಳುವುದರಿಂದ ಈ ಬಾರಿ ಸ್ವಾತಂತ್ರ್ಯೋತ್ಸವದ ಫಲಪುಷ್ಪ ಪ್ರದರ್ಶನದಲ್ಲಿ ‘ಸಂಕನ್ ಉದ್ಯಾನ’ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಲಿದೆ’ ಎಂದು ರಾಜ್ಯ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ. ಎಂ. ಜಗದೀಶ್ ಹೇಳಿದರು.</div><div> </div><div> ‘ಲಾಲ್ಬಾಗ್ನಲ್ಲಿ ಕೆರೆಯೊಂದರಲ್ಲಿ ಬಿಟ್ಟರೆ ಉದ್ಯಾನದಲ್ಲಿ ಎಲ್ಲಿಯೂ ನೀರು ನಿಲ್ಲಿಸಲು ಅವಕಾಶವಿಲ್ಲ. ಹಾಗಾಗಿ ತೇವಾಂಶ ಭರಿತ ವಾತಾವರಣ ರೂಪಿಸಲು ಈ ಉದ್ಯಾನ ನಿರ್ಮಿಸುತ್ತಿದ್ದೇವೆ. 400ರಿಂದ 500 ಜಾತಿಯ ಜೌಗು ಸಸ್ಯಗಳು ಹಾಗೂ ಸುಮಾರು 250 ಜಾತಿಯ ಜಲಸಸ್ಯಗಳನ್ನು ಈ ಉದ್ಯಾನದಲ್ಲಿ ಬೆಳೆಯುತ್ತೇವೆ’ ಎಂದು ಮಾಹಿತಿ ನೀಡಿದರು.</div><div> </div><div> ‘ಉದ್ಯಾನದಲ್ಲಿನ ಸಸ್ಯಗಳ ಬಳಿ ಅವುಗಳ ವೈಜ್ಞಾನಿಕ ಹೆಸರಿರುವ ಫಲಕಗಳನ್ನು ಹಾಕಲಾಗುತ್ತದೆ. ಪ್ರವಾಸಿಗರು ಎಲ್ಲಾ ಸಸ್ಯಗಳ ಬಳಿ ಹೋಗಿ ಅವುಗಳನ್ನು ವೀಕ್ಷಿಸಲು ಅನುವಾಗಲು ದಾರಿಯನ್ನೂ ನಿರ್ಮಿಸಲಾಗುತ್ತದೆ. ಒಟ್ಟು ₹65 ಲಕ್ಷ ವೆಚ್ಚದಲ್ಲಿ ಈ ಉದ್ಯಾನ ನಿರ್ಮಿಸಲಾಗುತ್ತಿದೆ. ಬೊಟಾನಿಕಲ್, ಬೋನ್ಸಾಯ್, ಟ್ರೋಪಿಕಲ್ ಉದ್ಯಾನದ ಜತೆಗೆ ಲಾಲ್ಬಾಗ್ಗೆ ಈ ಉದ್ಯಾನವೂ ಸೇರಿಕೊಳ್ಳಲಿದೆ’ ಎಂದು ಹೇಳಿದರು.</div><div> </div><div> ‘ಲಾಲ್ಬಾಗ್ಗೆ ವಿವಿಧ ಕಡೆಗಳಿಂದ ಸಸ್ಯಗಳನ್ನು ತರಿಸಿಕೊಂಡಿದ್ದೇವೆ. ಸಂಕನ್ ಉದ್ಯಾನಕ್ಕೂ ಸಸ್ಯಗಳ ಶೋಧ ನಡೆಸುತ್ತಿದ್ದೇವೆ. ಕೆಲವು ಅಪರೂಪದ ಜಲಸಸ್ಯಗಳನ್ನು ಇತರೆ ಉದ್ಯಾನಗಳೊಂದಿಗೆ ವಿನಿಮಯ ಮಾಡಿಕೊಳ್ಳುತ್ತೇವೆ.</div><div> </div><div> ಖಾಸಗಿ ನರ್ಸರಿಗಳಿಂದ ಕೆಲವು ಸಸ್ಯಗಳನ್ನು ತರುತ್ತೇವೆ. ಹೀಗೆ ಎಲ್ಲೆಲ್ಲಿ ಯಾವ ಯಾವ ಸಸ್ಯಗಳು ದೊರೆಯುತ್ತವೆ ಎಂಬ ಪಟ್ಟಿಯನ್ನು ತಯಾರಿಸಲಾಗುತ್ತಿದೆ’ ಎಂದು ತಿಳಿಸಿದರು. <br /> </div><div> ‘ಲಾಲ್ಬಾಗ್ನ ಸಸ್ಯತಜ್ಞರ ತಂಡ ಪ್ರತಿವರ್ಷವೂ ಮಳೆಗಾಲದಲ್ಲಿ ಪಶ್ಚಿಮ ಘಟ್ಟಕ್ಕೆ ಭೇಟಿ ನೀಡುತ್ತದೆ. ಅಲ್ಲಿನ ಅಪರೂಪದ ಸಸ್ಯಗಳನ್ನು ತಂದು ಲಾಲ್ಬಾಗ್ನಲ್ಲಿ ಬೆಳೆಸುವುದು ಈ ಪ್ರವಾಸದ ಉದ್ದೇಶ. ಪಶ್ಚಿಮಘಟ್ಟ, ಲಾಲ್ಬಾಗ್ ಸಸ್ಯತೋಟದ ಪ್ರಮುಖ ಆಕರ. </div><div> </div><div> ಪ್ರತಿವರ್ಷವೂ ಅಲ್ಲಿನ ಅನೇಕ ಅಪರೂಪದ ಸಸ್ಯತಳಿಗಳು ಲಾಲ್ಬಾಗ್ ಸಸ್ಯ ಜಗತ್ತಿಗೆ ಸೇರ್ಪಡೆಯಾಗುತ್ತಿರುತ್ತದೆ. ಹಾಗಾಗಿ ಸಸ್ಯಗಳನ್ನು ಹುಡುಕುವುದು ಕಷ್ಟದ ಕೆಲಸವಲ್ಲ’ ಎಂದು ಅವರು ಹೇಳಿದರು.</div><div> ***</div><div> <strong>ಯಾವ ಯಾವ ಸಸ್ಯಗಳು ಇರಲಿವೆ?</strong><br /> ಜೌಗು ಪ್ರದೇಶದಲ್ಲಿ ಬೆಳೆಯುವ ಬಜೆ, ಅಲೋಶಿಯ, ಜಲ ಸಸ್ಯಗಳಾದ ನಿಂಫಿಯಾ ಆಲ್ಬಾ (ನೀರಿನಲ್ಲಿ ಬೆಳೆಯುವ ಲಿಲಿ ಹೂವಿನ ಒಂದು ಜಾತಿ), ಫ್ಲೋಟಿಂಗ್ ಹಾರ್ಟ್ , ತಾವರೆ, ಯೆಲ್ಲೋ ಪಾಂಡ್ ಲಿಲ್ಲಿ (ನೀರ ಮೇಲೆ ತೇಲುವ ಹಳದಿ ಹೂ), ಟೈಫಾ ಹುಲ್ಲನ್ನು ಇಲ್ಲಿ ಕಾಣಬಹುದು.<br /> ***</div><div> <strong>ನೀರಿನ ನಿರ್ವಹಣೆ</strong><br /> 240 ಎಕರೆ ವಿಸ್ತೀರ್ಣದ ಈ ಉದ್ಯಾನಕ್ಕೆ ಸಮರ್ಪಕವಾಗಿ ನೀರಿನ ನಿರ್ವಹಣೆ ದೊಡ್ಡ ಸವಾಲು. ಇಲ್ಲಿರುವ ಕೆರೆ, ಒಂಬತ್ತು ಕೊಳವೆ ಬಾವಿಗಳು ಹಾಗೂ ಶುದ್ಧೀಕರಿಸಿದ ನೀರನ್ನು ಉದ್ಯಾನಕ್ಕೆ ಉಣಿಸಲಾಗುತ್ತಿದೆ. </div><div> </div><div> ‘ಬೇಸಿಗೆಯಲ್ಲೂ ಲಾಲ್ಬಾಗ್ನಲ್ಲಿನ ಸಸ್ಯಗಳಿಗೆ, ಪಕ್ಷಿಗಳಿಗೆ ಯಾವುದೇ ರೀತಿಯ ನೀರಿನ ಅಭಾವ ಉಂಟಾಗಿಲ್ಲ. ಉದ್ಯಾನಕ್ಕೆ ಬೇಕಾದಷ್ಟು ನೀರು ಲಭ್ಯವಿದೆ’ ಎಂದು ಜಗದೀಶ್ ತಿಳಿಸಿದರು.</div><div> </div></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<div> <strong>ಬೆಂಗಳೂರು:</strong> ಹಸಿರು ಉಣಿಸುತ್ತಾ ಜನರ ಮನಸ್ಸಿಗೆ ಮುದ ನೀಡುವ ತಾಣವಾಗಿರುವ ಲಾಲ್ಬಾಗ್ ಸಸ್ಯತೋಟದಲ್ಲಿ ನಿರ್ಮಾಣವಾಗುತ್ತಿದೆ ಅಪರೂಪದ ಜಲ ಹಾಗೂ ಜೌಗು ಸಸ್ಯಗಳ ‘ಸಂಕನ್ ಉದ್ಯಾನ’.<br /> <div> ಲಾಲ್ಬಾಗ್ ಪಶ್ಚಿಮ ದ್ವಾರದ ಬಳಿಯ 30 ಎಕರೆ ಪ್ರದೇಶದಲ್ಲಿರುವ ಧನ್ವಂತರಿ ವನದಲ್ಲಿ ಈ ಉದ್ಯಾನ ರೂಪಗೊಳ್ಳುತ್ತಿದೆ. 2.5 ಎಕರೆ ಪ್ರದೇಶದ ತುಂಬ ಹಸಿರು ಹುಲ್ಲಿನ ಹಾಸು, ಕಲ್ಲಿನ ಪೀಠಗಳು, ಕಣ್ಸೆಳೆವ ತಾವರೆಕೊಳ, ಪುಟ್ಟದಾದ ಕಲ್ಯಾಣಿ ಇವುಗಳಿಂದ ಸಂಕನ್ ಉದ್ಯಾನ ಕಂಗೊಳಿಸಲಿದೆ.<br /> </div><div> ನೆಲಮಟ್ಟದಿಂದ ಕೆಳಗೆ ಈ ಉದ್ಯಾನವನ್ನು ನಿರ್ಮಿಸುತ್ತಿರುವುದರಿಂದ ಇದನ್ನು ‘ಸಂಕನ್ ಉದ್ಯಾನ’ ಎಂದು ಕರೆಯಲಾಗುತ್ತದೆ. ಈ ಉದ್ಯಾನ ಸಂಪೂರ್ಣ ತೇವಾಂಶ ಭರಿತವಾಗಿದ್ದು, ಅಲ್ಲಿನ ವಾತಾವರಣವನ್ನು ಮತ್ತಷ್ಟು ತಂಪುಗೊಳಿಸಲಿದೆ.</div><div> </div><div> ‘2016ರ ಸೆಪ್ಟೆಂಬರ್ನಲ್ಲಿ ಉದ್ಯಾನ ಕಾಮಗಾರಿ ಪ್ರಾರಂಭಗೊಂಡಿದ್ದು, ಶೇ 80ರಷ್ಟು ಕೆಲಸ ಪೂರ್ಣಗೊಂಡಿದೆ. ಆಗಸ್ಟ್ ವೇಳೆಗೆ ಉದ್ಯಾನ ಸಿದ್ಧಗೊಳ್ಳುವುದರಿಂದ ಈ ಬಾರಿ ಸ್ವಾತಂತ್ರ್ಯೋತ್ಸವದ ಫಲಪುಷ್ಪ ಪ್ರದರ್ಶನದಲ್ಲಿ ‘ಸಂಕನ್ ಉದ್ಯಾನ’ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಲಿದೆ’ ಎಂದು ರಾಜ್ಯ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ. ಎಂ. ಜಗದೀಶ್ ಹೇಳಿದರು.</div><div> </div><div> ‘ಲಾಲ್ಬಾಗ್ನಲ್ಲಿ ಕೆರೆಯೊಂದರಲ್ಲಿ ಬಿಟ್ಟರೆ ಉದ್ಯಾನದಲ್ಲಿ ಎಲ್ಲಿಯೂ ನೀರು ನಿಲ್ಲಿಸಲು ಅವಕಾಶವಿಲ್ಲ. ಹಾಗಾಗಿ ತೇವಾಂಶ ಭರಿತ ವಾತಾವರಣ ರೂಪಿಸಲು ಈ ಉದ್ಯಾನ ನಿರ್ಮಿಸುತ್ತಿದ್ದೇವೆ. 400ರಿಂದ 500 ಜಾತಿಯ ಜೌಗು ಸಸ್ಯಗಳು ಹಾಗೂ ಸುಮಾರು 250 ಜಾತಿಯ ಜಲಸಸ್ಯಗಳನ್ನು ಈ ಉದ್ಯಾನದಲ್ಲಿ ಬೆಳೆಯುತ್ತೇವೆ’ ಎಂದು ಮಾಹಿತಿ ನೀಡಿದರು.</div><div> </div><div> ‘ಉದ್ಯಾನದಲ್ಲಿನ ಸಸ್ಯಗಳ ಬಳಿ ಅವುಗಳ ವೈಜ್ಞಾನಿಕ ಹೆಸರಿರುವ ಫಲಕಗಳನ್ನು ಹಾಕಲಾಗುತ್ತದೆ. ಪ್ರವಾಸಿಗರು ಎಲ್ಲಾ ಸಸ್ಯಗಳ ಬಳಿ ಹೋಗಿ ಅವುಗಳನ್ನು ವೀಕ್ಷಿಸಲು ಅನುವಾಗಲು ದಾರಿಯನ್ನೂ ನಿರ್ಮಿಸಲಾಗುತ್ತದೆ. ಒಟ್ಟು ₹65 ಲಕ್ಷ ವೆಚ್ಚದಲ್ಲಿ ಈ ಉದ್ಯಾನ ನಿರ್ಮಿಸಲಾಗುತ್ತಿದೆ. ಬೊಟಾನಿಕಲ್, ಬೋನ್ಸಾಯ್, ಟ್ರೋಪಿಕಲ್ ಉದ್ಯಾನದ ಜತೆಗೆ ಲಾಲ್ಬಾಗ್ಗೆ ಈ ಉದ್ಯಾನವೂ ಸೇರಿಕೊಳ್ಳಲಿದೆ’ ಎಂದು ಹೇಳಿದರು.</div><div> </div><div> ‘ಲಾಲ್ಬಾಗ್ಗೆ ವಿವಿಧ ಕಡೆಗಳಿಂದ ಸಸ್ಯಗಳನ್ನು ತರಿಸಿಕೊಂಡಿದ್ದೇವೆ. ಸಂಕನ್ ಉದ್ಯಾನಕ್ಕೂ ಸಸ್ಯಗಳ ಶೋಧ ನಡೆಸುತ್ತಿದ್ದೇವೆ. ಕೆಲವು ಅಪರೂಪದ ಜಲಸಸ್ಯಗಳನ್ನು ಇತರೆ ಉದ್ಯಾನಗಳೊಂದಿಗೆ ವಿನಿಮಯ ಮಾಡಿಕೊಳ್ಳುತ್ತೇವೆ.</div><div> </div><div> ಖಾಸಗಿ ನರ್ಸರಿಗಳಿಂದ ಕೆಲವು ಸಸ್ಯಗಳನ್ನು ತರುತ್ತೇವೆ. ಹೀಗೆ ಎಲ್ಲೆಲ್ಲಿ ಯಾವ ಯಾವ ಸಸ್ಯಗಳು ದೊರೆಯುತ್ತವೆ ಎಂಬ ಪಟ್ಟಿಯನ್ನು ತಯಾರಿಸಲಾಗುತ್ತಿದೆ’ ಎಂದು ತಿಳಿಸಿದರು. <br /> </div><div> ‘ಲಾಲ್ಬಾಗ್ನ ಸಸ್ಯತಜ್ಞರ ತಂಡ ಪ್ರತಿವರ್ಷವೂ ಮಳೆಗಾಲದಲ್ಲಿ ಪಶ್ಚಿಮ ಘಟ್ಟಕ್ಕೆ ಭೇಟಿ ನೀಡುತ್ತದೆ. ಅಲ್ಲಿನ ಅಪರೂಪದ ಸಸ್ಯಗಳನ್ನು ತಂದು ಲಾಲ್ಬಾಗ್ನಲ್ಲಿ ಬೆಳೆಸುವುದು ಈ ಪ್ರವಾಸದ ಉದ್ದೇಶ. ಪಶ್ಚಿಮಘಟ್ಟ, ಲಾಲ್ಬಾಗ್ ಸಸ್ಯತೋಟದ ಪ್ರಮುಖ ಆಕರ. </div><div> </div><div> ಪ್ರತಿವರ್ಷವೂ ಅಲ್ಲಿನ ಅನೇಕ ಅಪರೂಪದ ಸಸ್ಯತಳಿಗಳು ಲಾಲ್ಬಾಗ್ ಸಸ್ಯ ಜಗತ್ತಿಗೆ ಸೇರ್ಪಡೆಯಾಗುತ್ತಿರುತ್ತದೆ. ಹಾಗಾಗಿ ಸಸ್ಯಗಳನ್ನು ಹುಡುಕುವುದು ಕಷ್ಟದ ಕೆಲಸವಲ್ಲ’ ಎಂದು ಅವರು ಹೇಳಿದರು.</div><div> ***</div><div> <strong>ಯಾವ ಯಾವ ಸಸ್ಯಗಳು ಇರಲಿವೆ?</strong><br /> ಜೌಗು ಪ್ರದೇಶದಲ್ಲಿ ಬೆಳೆಯುವ ಬಜೆ, ಅಲೋಶಿಯ, ಜಲ ಸಸ್ಯಗಳಾದ ನಿಂಫಿಯಾ ಆಲ್ಬಾ (ನೀರಿನಲ್ಲಿ ಬೆಳೆಯುವ ಲಿಲಿ ಹೂವಿನ ಒಂದು ಜಾತಿ), ಫ್ಲೋಟಿಂಗ್ ಹಾರ್ಟ್ , ತಾವರೆ, ಯೆಲ್ಲೋ ಪಾಂಡ್ ಲಿಲ್ಲಿ (ನೀರ ಮೇಲೆ ತೇಲುವ ಹಳದಿ ಹೂ), ಟೈಫಾ ಹುಲ್ಲನ್ನು ಇಲ್ಲಿ ಕಾಣಬಹುದು.<br /> ***</div><div> <strong>ನೀರಿನ ನಿರ್ವಹಣೆ</strong><br /> 240 ಎಕರೆ ವಿಸ್ತೀರ್ಣದ ಈ ಉದ್ಯಾನಕ್ಕೆ ಸಮರ್ಪಕವಾಗಿ ನೀರಿನ ನಿರ್ವಹಣೆ ದೊಡ್ಡ ಸವಾಲು. ಇಲ್ಲಿರುವ ಕೆರೆ, ಒಂಬತ್ತು ಕೊಳವೆ ಬಾವಿಗಳು ಹಾಗೂ ಶುದ್ಧೀಕರಿಸಿದ ನೀರನ್ನು ಉದ್ಯಾನಕ್ಕೆ ಉಣಿಸಲಾಗುತ್ತಿದೆ. </div><div> </div><div> ‘ಬೇಸಿಗೆಯಲ್ಲೂ ಲಾಲ್ಬಾಗ್ನಲ್ಲಿನ ಸಸ್ಯಗಳಿಗೆ, ಪಕ್ಷಿಗಳಿಗೆ ಯಾವುದೇ ರೀತಿಯ ನೀರಿನ ಅಭಾವ ಉಂಟಾಗಿಲ್ಲ. ಉದ್ಯಾನಕ್ಕೆ ಬೇಕಾದಷ್ಟು ನೀರು ಲಭ್ಯವಿದೆ’ ಎಂದು ಜಗದೀಶ್ ತಿಳಿಸಿದರು.</div><div> </div></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>