<p><strong>ಬೆಂಗಳೂರು: </strong>ತುರ್ತು ಸಂದರ್ಭದಲ್ಲಿ ಗಾಜುಗಳನ್ನು ಒಡೆಯಲು ವೋಲ್ವೊ ಬಸ್ಗಳಲ್ಲಿ ಅಳವಡಿಸಲಾಗಿದ್ದ ಸುತ್ತಿಗೆಗಳು ಕಳುವಾಗುತ್ತಿವೆ ಎಂದು ಬಿಎಂಟಿಸಿ ಕೈಗೊಂಡಿದ್ದ ಸಮೀಕ್ಷೆಯ ವರದಿ ಬಹಿರಂಗಪಡಿಸಿದೆ.<br /> <br /> ಇತ್ತೀಚೆಗೆ ಆಂಧ್ರ ಪ್ರದೇಶದ ಮೆಹಬೂಬ್ ನಗರದಲ್ಲಿ ನಡೆದ ವೋಲ್ವೊ ಬಸ್ ದುರಂತದ ನಂತರ ತನ್ನ ವೋಲ್ವೊ ಬಸ್ಗಳಲ್ಲಿನ ಸುರಕ್ಷಾ ಕ್ರಮಗಳನ್ನು ಉತ್ತಮ ಪಡಿಸುವ ಸಲುವಾಗಿ ಬಿಎಂಟಿಸಿಯು ಕಳೆದ ನವೆಂಬರ್ನಲ್ಲಿ ಸಮೀಕ್ಷೆಯನ್ನು ಕೈಗೊಂಡಿತ್ತು.<br /> <br /> ಅಪಘಾತ ಮತ್ತು ಬೆಂಕಿ ಅವಘಡದಂತಹ ಸಂದರ್ಭದಲ್ಲಿ ಗಾಜುಗಳನ್ನು ಒಡೆಯಲು ವೋಲ್ವೊ ಬಸ್ಗಳಲ್ಲಿ ಅಳವಡಿಸಲಾಗಿದ್ದ 186 ಸುತ್ತಿಗೆಗಳು ಪ್ರಯಾಣಿಕರಿಂದಲೇ ಕಳುವಾಗಿರುವುದು ಬೆಳಕಿಗೆ ಬಂತು.<br /> <br /> ಸುತ್ತಿಗೆಗಳ ಕಳ್ಳತನ ಮಾಡಿದ ಪ್ರಯಾಣಿಕರಿಗೆ ಆ ಬಗ್ಗೆ ಪಶ್ಚಾತಾಪ ಇರಲಿಲ್ಲ. ‘ಬಸ್ಗಳು ಸಾರ್ವಜನಿಕ ಆಸ್ತಿ.<br /> <br /> ಬಸ್ಸಿನಲ್ಲಿರುವ ಸುತ್ತಿಗೆಯೂ ಸಾರ್ವಜನಿಕರದೆ’ ಎಂಬ ಉತ್ತರ ಪ್ರಯಾಣಿಕನೊಬ್ಬನಿಂದ ಸಮೀಕ್ಷೆ ಯಲ್ಲಿ ಪಾಲ್ಗೊಂಡಿದ್ದ ಸಂಸ್ಥೆಯ ಸಿಬ್ಬಂದಿಯೊಬ್ಬರಿಗೆ ಲಭ್ಯವಾಗಿದೆ. ಇಂತಹ ಮನೋಭಾವದ ಕಾರಣದಿಂದಲೆ ಬಸ್ಗಳಲ್ಲಿನ ಸುತ್ತಿಗೆಗಳು, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಮತ್ತು ಅಗ್ನಿಶಾಮಕ ಸಾಧನಗಳು ಕಾಣೆಯಾಗುತ್ತಿರಬಹುದು ಎಂದು ಸಂಸ್ಥೆಯ ಸಿಬ್ಬಂದಿ ಹೇಳುತ್ತಾರೆ.<br /> <br /> ನಿಯಮದ ಪ್ರಕಾರ ವೋಲ್ವೊ ಬಸ್ಗಳಲ್ಲಿ ಕನಿಷ್ಠ 5 ಸುತ್ತಿಗೆಗಳು, ತಲಾ ಒಂದು ಅಗ್ನಿಶಾಮಕ ಸಾಧನ ಹಾಗೂ ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳಿರಬೇಕು. ಡಿಪೋಗಳಿಗೆ ಹಿಂದಿರುಗಿದ ಪ್ರತಿ ಬಾರಿಯೂ ಬಸ್ಗಳನ್ನು ಪರೀಕ್ಷಿಸಬೇಕು.<br /> <br /> ಆದರೆ ಕಳೆದ ಕೆಲವು ತಿಂಗಳುಗಳಿಂದ ಬಸ್ಗಳನ್ನು ಪರೀಕ್ಷಿಸುತ್ತಿಲ್ಲ. ಹೀಗಾಗಿ ಸಾವಿರಾರು ಬಸ್ಗಳು ಯಾವುದೇ ಸುರಕ್ಷಾ ಸಾಧನಗಳಿಲ್ಲದೆ ಸಂಚರಿಸುತ್ತಿವೆ ಎಂದು ಸಂಸ್ಥೆಯ ಮೂಲಗಳು ತಿಳಿಸುತ್ತವೆ.<br /> <br /> ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್, ‘ಕಳುವಾಗಿರುವ ಸುತ್ತಿಗೆಗಳನ್ನು ಪುನಃ ಅಳವಡಿಸುವಂತೆ ಸೂಚನೆ ನೀಡಲಾಗಿದೆ.<br /> <br /> ರೂ 180 ಮೌಲ್ಯದ ಸುತ್ತಿಗೆಯನ್ನು ಪ್ರತಿ ಬಾರಿಯೂ ಅಳವಡಿಸುವುದು ಹೆಚ್ಚಿನ ಹೊರೆಯಾಗುತ್ತದೆ. ಇನ್ನು ಮುಂದೆ ಬಸ್ಗಳು ಡಿಪೋಗಳಿಗೆ ಹಿಂದಿರುಗಿದಾಗಲೆಲ್ಲ ಪರೀಕ್ಷಿಸುವಂತೆ ಸೂಚನೆ ನೀಡಲಾಗುವುದು’ ಎನ್ನುತ್ತಾರೆ.<br /> <br /> ‘ಅವಘಡಗಳ ಸಂದರ್ಭದಲ್ಲಿ ಜೀವರಕ್ಷಣೆಗೆ ನೆರವಾಗುವ ಸಣ್ಣ ಸಾಧ್ಯತೆಯನ್ನೂ ಪ್ರಯಾಣಿಕರೆ ಇಲ್ಲವಾಗಿಸುತ್ತಿರುವುದು ಬೇಸರದ ಸಂಗತಿ. ದುರಂತಗಳು ಸಂಭವಿಸದಂತೆ ಎಚ್ಚರ ವಹಿಸುವಲ್ಲಿ ಸಾರ್ವಜನಿಕರ ಸಹಕಾರವನ್ನೂ ಬಿಎಂಟಿಸಿ ನಿರೀಕ್ಷಿಸುತ್ತಿದೆ’ ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ತುರ್ತು ಸಂದರ್ಭದಲ್ಲಿ ಗಾಜುಗಳನ್ನು ಒಡೆಯಲು ವೋಲ್ವೊ ಬಸ್ಗಳಲ್ಲಿ ಅಳವಡಿಸಲಾಗಿದ್ದ ಸುತ್ತಿಗೆಗಳು ಕಳುವಾಗುತ್ತಿವೆ ಎಂದು ಬಿಎಂಟಿಸಿ ಕೈಗೊಂಡಿದ್ದ ಸಮೀಕ್ಷೆಯ ವರದಿ ಬಹಿರಂಗಪಡಿಸಿದೆ.<br /> <br /> ಇತ್ತೀಚೆಗೆ ಆಂಧ್ರ ಪ್ರದೇಶದ ಮೆಹಬೂಬ್ ನಗರದಲ್ಲಿ ನಡೆದ ವೋಲ್ವೊ ಬಸ್ ದುರಂತದ ನಂತರ ತನ್ನ ವೋಲ್ವೊ ಬಸ್ಗಳಲ್ಲಿನ ಸುರಕ್ಷಾ ಕ್ರಮಗಳನ್ನು ಉತ್ತಮ ಪಡಿಸುವ ಸಲುವಾಗಿ ಬಿಎಂಟಿಸಿಯು ಕಳೆದ ನವೆಂಬರ್ನಲ್ಲಿ ಸಮೀಕ್ಷೆಯನ್ನು ಕೈಗೊಂಡಿತ್ತು.<br /> <br /> ಅಪಘಾತ ಮತ್ತು ಬೆಂಕಿ ಅವಘಡದಂತಹ ಸಂದರ್ಭದಲ್ಲಿ ಗಾಜುಗಳನ್ನು ಒಡೆಯಲು ವೋಲ್ವೊ ಬಸ್ಗಳಲ್ಲಿ ಅಳವಡಿಸಲಾಗಿದ್ದ 186 ಸುತ್ತಿಗೆಗಳು ಪ್ರಯಾಣಿಕರಿಂದಲೇ ಕಳುವಾಗಿರುವುದು ಬೆಳಕಿಗೆ ಬಂತು.<br /> <br /> ಸುತ್ತಿಗೆಗಳ ಕಳ್ಳತನ ಮಾಡಿದ ಪ್ರಯಾಣಿಕರಿಗೆ ಆ ಬಗ್ಗೆ ಪಶ್ಚಾತಾಪ ಇರಲಿಲ್ಲ. ‘ಬಸ್ಗಳು ಸಾರ್ವಜನಿಕ ಆಸ್ತಿ.<br /> <br /> ಬಸ್ಸಿನಲ್ಲಿರುವ ಸುತ್ತಿಗೆಯೂ ಸಾರ್ವಜನಿಕರದೆ’ ಎಂಬ ಉತ್ತರ ಪ್ರಯಾಣಿಕನೊಬ್ಬನಿಂದ ಸಮೀಕ್ಷೆ ಯಲ್ಲಿ ಪಾಲ್ಗೊಂಡಿದ್ದ ಸಂಸ್ಥೆಯ ಸಿಬ್ಬಂದಿಯೊಬ್ಬರಿಗೆ ಲಭ್ಯವಾಗಿದೆ. ಇಂತಹ ಮನೋಭಾವದ ಕಾರಣದಿಂದಲೆ ಬಸ್ಗಳಲ್ಲಿನ ಸುತ್ತಿಗೆಗಳು, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಮತ್ತು ಅಗ್ನಿಶಾಮಕ ಸಾಧನಗಳು ಕಾಣೆಯಾಗುತ್ತಿರಬಹುದು ಎಂದು ಸಂಸ್ಥೆಯ ಸಿಬ್ಬಂದಿ ಹೇಳುತ್ತಾರೆ.<br /> <br /> ನಿಯಮದ ಪ್ರಕಾರ ವೋಲ್ವೊ ಬಸ್ಗಳಲ್ಲಿ ಕನಿಷ್ಠ 5 ಸುತ್ತಿಗೆಗಳು, ತಲಾ ಒಂದು ಅಗ್ನಿಶಾಮಕ ಸಾಧನ ಹಾಗೂ ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳಿರಬೇಕು. ಡಿಪೋಗಳಿಗೆ ಹಿಂದಿರುಗಿದ ಪ್ರತಿ ಬಾರಿಯೂ ಬಸ್ಗಳನ್ನು ಪರೀಕ್ಷಿಸಬೇಕು.<br /> <br /> ಆದರೆ ಕಳೆದ ಕೆಲವು ತಿಂಗಳುಗಳಿಂದ ಬಸ್ಗಳನ್ನು ಪರೀಕ್ಷಿಸುತ್ತಿಲ್ಲ. ಹೀಗಾಗಿ ಸಾವಿರಾರು ಬಸ್ಗಳು ಯಾವುದೇ ಸುರಕ್ಷಾ ಸಾಧನಗಳಿಲ್ಲದೆ ಸಂಚರಿಸುತ್ತಿವೆ ಎಂದು ಸಂಸ್ಥೆಯ ಮೂಲಗಳು ತಿಳಿಸುತ್ತವೆ.<br /> <br /> ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್, ‘ಕಳುವಾಗಿರುವ ಸುತ್ತಿಗೆಗಳನ್ನು ಪುನಃ ಅಳವಡಿಸುವಂತೆ ಸೂಚನೆ ನೀಡಲಾಗಿದೆ.<br /> <br /> ರೂ 180 ಮೌಲ್ಯದ ಸುತ್ತಿಗೆಯನ್ನು ಪ್ರತಿ ಬಾರಿಯೂ ಅಳವಡಿಸುವುದು ಹೆಚ್ಚಿನ ಹೊರೆಯಾಗುತ್ತದೆ. ಇನ್ನು ಮುಂದೆ ಬಸ್ಗಳು ಡಿಪೋಗಳಿಗೆ ಹಿಂದಿರುಗಿದಾಗಲೆಲ್ಲ ಪರೀಕ್ಷಿಸುವಂತೆ ಸೂಚನೆ ನೀಡಲಾಗುವುದು’ ಎನ್ನುತ್ತಾರೆ.<br /> <br /> ‘ಅವಘಡಗಳ ಸಂದರ್ಭದಲ್ಲಿ ಜೀವರಕ್ಷಣೆಗೆ ನೆರವಾಗುವ ಸಣ್ಣ ಸಾಧ್ಯತೆಯನ್ನೂ ಪ್ರಯಾಣಿಕರೆ ಇಲ್ಲವಾಗಿಸುತ್ತಿರುವುದು ಬೇಸರದ ಸಂಗತಿ. ದುರಂತಗಳು ಸಂಭವಿಸದಂತೆ ಎಚ್ಚರ ವಹಿಸುವಲ್ಲಿ ಸಾರ್ವಜನಿಕರ ಸಹಕಾರವನ್ನೂ ಬಿಎಂಟಿಸಿ ನಿರೀಕ್ಷಿಸುತ್ತಿದೆ’ ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>