<p>ಬೆಂಗಳೂರು: ನೇಷನ್ ವೈಡ್ ಪ್ರೈಮರಿ ಹೆಲ್ತ್ಕೇರ್ ಸರ್ವೀಸ್ (ನೇಷನ್ ವೈಡ್) ಮತ್ತು ರೋಟರಿ ಕ್ಲಬ್ ಇಂದಿರಾನಗರ ಘಟಕದ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಬಿ.ನಾರಾಯಣಪುರ ಮತ್ತು ಗರುಡಾಚಾರ್ಪಾಳ್ಯದ 800ಕ್ಕೂ ಅಧಿಕ ಸರ್ಕಾರಿ ಶಾಲೆಯ ಮಕ್ಕಳಿಗಾಗಿ ಆರೋಗ್ಯ ತಪಾಸಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.<br /> <br /> ನೇಷನ್ ವೈಡ್ ಮತ್ತು ನಿಯೋನೇಟಲ್ ಕೇರ್ ಅಂಡ್ ರೀಸರ್ಚ್ ಇನ್ಸ್ಟಿಟ್ಯೂಟ್ ಸಂಸ್ಥೆಯ (ಎನ್ಸಿಆರ್ಐ) ಏಳು ಮಂದಿ ವೈದ್ಯರು 6 ರಿಂದ 14 ವರ್ಷ ವಯಸ್ಸಿನ ಮಕ್ಕಳಲ್ಲಿ ಸ್ವಚ್ಛತೆಯ ಅರಿವು, ಕಬ್ಬಿಣಾಂಶದ ಕೊರತೆ, ಕಲಿಕೆಯಲ್ಲಿನ ತೊಡಕುಗಳು, ದಂತ ಮತ್ತು ದೃಷ್ಟಿ ದೋಷ ಸಮಸ್ಯೆಗಳ ಜೊತೆಗೆ ಸಾಮಾನ್ಯ ಆರೋಗ್ಯ ಪರೀಕ್ಷೆ, ಮಾನಸಿಕ ಪ್ರಗತಿ, ಬೆಳವಣಿಗೆ (ಎತ್ತರ, ತೂಕ, ಎದೆಯ ಅಳತೆ) ಬಗ್ಗೆ ತಪಾಸಣೆ ನಡೆಸಿದರು.<br /> <br /> ಈ ಸಂದರ್ಭದಲ್ಲಿ ಶೇ 15ರಷ್ಟು ಮಕ್ಕಳು ಸರಾಸರಿಗಿಂತಲೂ ಕಡಿಮೆ ತೂಕ ಇದ್ದರೆ, ಇಬ್ಬರು ಮಕ್ಕಳು ಮಾತ್ರವೇ ಹೆಚ್ಚಿನ ತೂಕ ಇರುವುದು ಪತ್ತೆಯಾಯಿತು. ಶೇ 50ರಷ್ಟು ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದು, ಶೇ 35 ರಷ್ಟು ಮಕ್ಕಳು ವಿಟಮಿನ್ `ಎ~ ಕೊರತೆಯಿಂದ ಬಳಲುತ್ತಿರುವುದು ಕಂಡು ಬಂದಿತು ಎಂದು ನೇಷನ್ವೈಡ್ ಪ್ರಾಥಮಿಕ ಹೆಲ್ತ್ಕೇರ್ ಸರ್ವೀಸಸ್ನ ಡಾ. ಆದರ್ಶ್ ಸೋಮಶೇಖರ್ ಮಾಹಿತಿ ನೀಡಿದರು.<br /> <br /> ಶೇ 10ರಷ್ಟು ಮಕ್ಕಳಿಗೆ ಹೆಚ್ಚಿನ ನೇತ್ರ ತಪಾಸಣೆ ಅಗತ್ಯವಿದ್ದು, ಈ ಮಕ್ಕಳಿಗೆ ಶಾಲಾ ಕೊಠಡಿಯಲ್ಲಿನ ಕಪ್ಪು ಹಲಗೆ ಮೇಲಿನ ಅಕ್ಷರಗಳನ್ನು ಓದಲು ಆಗುತ್ತಿರಲಿಲ್ಲ. ಇಬ್ಬರು ಮಕ್ಕಳಿಗೆ ಹೃದಯದಲ್ಲಿ ರಂಧ್ರ ಇರುವುದು ಪತ್ತೆಯಾಗಿದ್ದು, ಇವರನ್ನು ನಗರದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಶಿಫಾರಸು ಮಾಡಲಾಯಿತು. ಈ ಮಕ್ಕಳ ಚಿಕಿತ್ಸಾ ವೆಚ್ಚವನ್ನು ಇಂದಿರಾನಗರದ ರೋಟರಿ ಕ್ಲಬ್ ಘಟಕ ಭರಿಸಲಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ನೇಷನ್ ವೈಡ್ ಪ್ರೈಮರಿ ಹೆಲ್ತ್ಕೇರ್ ಸರ್ವೀಸ್ (ನೇಷನ್ ವೈಡ್) ಮತ್ತು ರೋಟರಿ ಕ್ಲಬ್ ಇಂದಿರಾನಗರ ಘಟಕದ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಬಿ.ನಾರಾಯಣಪುರ ಮತ್ತು ಗರುಡಾಚಾರ್ಪಾಳ್ಯದ 800ಕ್ಕೂ ಅಧಿಕ ಸರ್ಕಾರಿ ಶಾಲೆಯ ಮಕ್ಕಳಿಗಾಗಿ ಆರೋಗ್ಯ ತಪಾಸಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.<br /> <br /> ನೇಷನ್ ವೈಡ್ ಮತ್ತು ನಿಯೋನೇಟಲ್ ಕೇರ್ ಅಂಡ್ ರೀಸರ್ಚ್ ಇನ್ಸ್ಟಿಟ್ಯೂಟ್ ಸಂಸ್ಥೆಯ (ಎನ್ಸಿಆರ್ಐ) ಏಳು ಮಂದಿ ವೈದ್ಯರು 6 ರಿಂದ 14 ವರ್ಷ ವಯಸ್ಸಿನ ಮಕ್ಕಳಲ್ಲಿ ಸ್ವಚ್ಛತೆಯ ಅರಿವು, ಕಬ್ಬಿಣಾಂಶದ ಕೊರತೆ, ಕಲಿಕೆಯಲ್ಲಿನ ತೊಡಕುಗಳು, ದಂತ ಮತ್ತು ದೃಷ್ಟಿ ದೋಷ ಸಮಸ್ಯೆಗಳ ಜೊತೆಗೆ ಸಾಮಾನ್ಯ ಆರೋಗ್ಯ ಪರೀಕ್ಷೆ, ಮಾನಸಿಕ ಪ್ರಗತಿ, ಬೆಳವಣಿಗೆ (ಎತ್ತರ, ತೂಕ, ಎದೆಯ ಅಳತೆ) ಬಗ್ಗೆ ತಪಾಸಣೆ ನಡೆಸಿದರು.<br /> <br /> ಈ ಸಂದರ್ಭದಲ್ಲಿ ಶೇ 15ರಷ್ಟು ಮಕ್ಕಳು ಸರಾಸರಿಗಿಂತಲೂ ಕಡಿಮೆ ತೂಕ ಇದ್ದರೆ, ಇಬ್ಬರು ಮಕ್ಕಳು ಮಾತ್ರವೇ ಹೆಚ್ಚಿನ ತೂಕ ಇರುವುದು ಪತ್ತೆಯಾಯಿತು. ಶೇ 50ರಷ್ಟು ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದು, ಶೇ 35 ರಷ್ಟು ಮಕ್ಕಳು ವಿಟಮಿನ್ `ಎ~ ಕೊರತೆಯಿಂದ ಬಳಲುತ್ತಿರುವುದು ಕಂಡು ಬಂದಿತು ಎಂದು ನೇಷನ್ವೈಡ್ ಪ್ರಾಥಮಿಕ ಹೆಲ್ತ್ಕೇರ್ ಸರ್ವೀಸಸ್ನ ಡಾ. ಆದರ್ಶ್ ಸೋಮಶೇಖರ್ ಮಾಹಿತಿ ನೀಡಿದರು.<br /> <br /> ಶೇ 10ರಷ್ಟು ಮಕ್ಕಳಿಗೆ ಹೆಚ್ಚಿನ ನೇತ್ರ ತಪಾಸಣೆ ಅಗತ್ಯವಿದ್ದು, ಈ ಮಕ್ಕಳಿಗೆ ಶಾಲಾ ಕೊಠಡಿಯಲ್ಲಿನ ಕಪ್ಪು ಹಲಗೆ ಮೇಲಿನ ಅಕ್ಷರಗಳನ್ನು ಓದಲು ಆಗುತ್ತಿರಲಿಲ್ಲ. ಇಬ್ಬರು ಮಕ್ಕಳಿಗೆ ಹೃದಯದಲ್ಲಿ ರಂಧ್ರ ಇರುವುದು ಪತ್ತೆಯಾಗಿದ್ದು, ಇವರನ್ನು ನಗರದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಶಿಫಾರಸು ಮಾಡಲಾಯಿತು. ಈ ಮಕ್ಕಳ ಚಿಕಿತ್ಸಾ ವೆಚ್ಚವನ್ನು ಇಂದಿರಾನಗರದ ರೋಟರಿ ಕ್ಲಬ್ ಘಟಕ ಭರಿಸಲಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>