‘15 ವರ್ಷಗಳ ಹಿಂದೆಯೂ ಇದೇ ರೀತಿ ಗ್ರಾಮದಲ್ಲಿ ಸರಣಿ ಸಾವುಗಳು ಸಂಭವಿಸಿದ್ದವು. ವೈದ್ಯರು, ವಿಜ್ಞಾನಿಗಳು ಆಗಮಿಸಿ ಗ್ರಾಮದಲ್ಲಿಯ ನೀರು ತಪಾಸಣೆ ಮಾಡಿ, ಗ್ರಾಮದಲ್ಲಿ ಸೋಡಿಯಂ ಮಿಶ್ರಿತ ನೀರು ಕುಡಿದು ಜನರು ಸಾಯುತ್ತಿದ್ದಾರೆ ಎಂದು ವರದಿ ನೀಡಿದ್ದರು. ಈಗ ಕೊರೊನಾದಿಂದಾಗಿ ಸರಣಿ ಸಾವಿನ ಬಗ್ಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ’ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯೆ ಭಾಗಮ್ಮಾ ಈರಪ್ಪಾ ಬಿರಾದಾರ.