<p>ಔರಾದ್: ತಾಲ್ಲೂಕಿನ ಎಕಂಬಾ, ಲಿಂಗಿ ಹಾಗೂ ಯನಗುಂದಾ ಶಾಲೆಯಲ್ಲಿನ ಬಿಸಿಯೂಟ ಸಾಮಗ್ರಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.</p>.<p>ವಿಲಾಸ ರಾಠೋಡ್, ದೀಪಕ್ ಗುಂಗೆ, ಅಂಕುಶ ಬಿರಾದಾರ, ಸಾಯಿನಾಥ ಸಿಂಧೆ ಬಂಧಿತರು. ಅವರಿಂದ ಜೀಪ್ ವಶಪಡಿಸಿಕೊಳ್ಳಲಾಗಿದೆ.</p>.<p>ಗುರುವಾರ ಬೀದರ್ ಉದಗಿರ್ ರಸ್ತೆ ಬಳಿ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರೆಲ್ಲ ಎಕಂಬಾ ಹಾಗೂ ಸುತ್ತಲಿನ ತಾಂಡಾ ಹಾಗೂ ಗ್ರಾಮದವರಾಗಿದ್ದಾರೆ.</p>.<p>ಸಿಲಿಂಡರ್, ಸ್ಟೌವ್, ಟಿವಿ ಹಾಗೂ ಇತರ ಬಿಸಿಯೂಟದ ಸಾಮಗ್ರಿಗಳನ್ನು ಜಪ್ತಿ ಮಾಡಲಾಗಿದೆ.</p>.<p>ಔರಾದ್ ಸಿಪಿಐ ಮಲ್ಲಿಕಾರ್ಜುನ, ಪಿಎಸ್ಐ ಕುಪೇಂದ್ರ, ಕಾಶಿನಾಥ, ಬಸವರಾಜ, ಸಿದ್ದಣ್ಣ ಗಿರಿಗೌಡ್ ಅವರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p>ಔರಾದ್: ತಾಲ್ಲೂಕಿನ ಎಕಂಬಾ, ಲಿಂಗಿ ಹಾಗೂ ಯನಗುಂದಾ ಶಾಲೆಯಲ್ಲಿನ ಬಿಸಿಯೂಟ ಸಾಮಗ್ರಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.</p>.<p>ವಿಲಾಸ ರಾಠೋಡ್, ದೀಪಕ್ ಗುಂಗೆ, ಅಂಕುಶ ಬಿರಾದಾರ, ಸಾಯಿನಾಥ ಸಿಂಧೆ ಬಂಧಿತರು. ಅವರಿಂದ ಜೀಪ್ ವಶಪಡಿಸಿಕೊಳ್ಳಲಾಗಿದೆ.</p>.<p>ಗುರುವಾರ ಬೀದರ್ ಉದಗಿರ್ ರಸ್ತೆ ಬಳಿ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರೆಲ್ಲ ಎಕಂಬಾ ಹಾಗೂ ಸುತ್ತಲಿನ ತಾಂಡಾ ಹಾಗೂ ಗ್ರಾಮದವರಾಗಿದ್ದಾರೆ.</p>.<p>ಸಿಲಿಂಡರ್, ಸ್ಟೌವ್, ಟಿವಿ ಹಾಗೂ ಇತರ ಬಿಸಿಯೂಟದ ಸಾಮಗ್ರಿಗಳನ್ನು ಜಪ್ತಿ ಮಾಡಲಾಗಿದೆ.</p>.<p>ಔರಾದ್ ಸಿಪಿಐ ಮಲ್ಲಿಕಾರ್ಜುನ, ಪಿಎಸ್ಐ ಕುಪೇಂದ್ರ, ಕಾಶಿನಾಥ, ಬಸವರಾಜ, ಸಿದ್ದಣ್ಣ ಗಿರಿಗೌಡ್ ಅವರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>