ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್ | ಬಿಸಿಯೂಟ ಅಡುಗೆ ಸಾಮಗ್ರಿ ಕಳವು: ನಾಲ್ವರ ಬಂಧನ

Last Updated 3 ಡಿಸೆಂಬರ್ 2022, 8:24 IST
ಅಕ್ಷರ ಗಾತ್ರ

ಔರಾದ್: ತಾಲ್ಲೂಕಿನ ಎಕಂಬಾ, ಲಿಂಗಿ ಹಾಗೂ ಯನಗುಂದಾ ಶಾಲೆಯಲ್ಲಿನ ಬಿಸಿಯೂಟ ಸಾಮಗ್ರಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

ವಿಲಾಸ ರಾಠೋಡ್, ದೀಪಕ್ ಗುಂಗೆ, ಅಂಕುಶ ಬಿರಾದಾರ, ಸಾಯಿನಾಥ ಸಿಂಧೆ ಬಂಧಿತರು. ಅವರಿಂದ ಜೀಪ್‌ ವಶಪಡಿಸಿಕೊಳ್ಳಲಾಗಿದೆ.

ಗುರುವಾರ ಬೀದರ್ ಉದಗಿರ್ ರಸ್ತೆ ಬಳಿ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರೆಲ್ಲ ಎಕಂಬಾ ಹಾಗೂ ಸುತ್ತಲಿನ ತಾಂಡಾ ಹಾಗೂ ಗ್ರಾಮದವರಾಗಿದ್ದಾರೆ.

ಸಿಲಿಂಡರ್, ಸ್ಟೌವ್‌, ಟಿವಿ ಹಾಗೂ ಇತರ ಬಿಸಿಯೂಟದ ಸಾಮಗ್ರಿಗಳನ್ನು ಜಪ್ತಿ ಮಾಡಲಾಗಿದೆ.

ಔರಾದ್ ಸಿಪಿಐ ಮಲ್ಲಿಕಾರ್ಜುನ, ಪಿಎಸ್‌ಐ ಕುಪೇಂದ್ರ, ಕಾಶಿನಾಥ, ಬಸವರಾಜ, ಸಿದ್ದಣ್ಣ ಗಿರಿಗೌಡ್ ಅವರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT