‘ಪತ್ರಕರ್ತನ ಮೇಲೆ ಕತ್ತೆಕಿರುಬದಾಳಿ ಮಾಡಿರುವ ಸಾಧ್ಯತೆ ಇದೆ. ಈ ಪ್ರದೇಶದಲ್ಲಿ ಚಿರತೆ ಇಲ್ಲ. ಸ್ಥಳ ಪರಿಶೀಲನೆ ನಡೆಸಿದಾಗ ಚಿರತೆ ಹೆಜ್ಜೆ ಗುರುತುಗಳು ಕಂಡು ಬಂದಿಲ್ಲ. ಆದರೂ, ದಾಳಿ ಮಾಡಿದ ಕಾಡು ಪ್ರಾಣಿಯ ಅರಿತುಕೊಳ್ಳಲು ಪಂಪ್ಹೌಸ್ ಬಳಿ ಮೂರು ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಸುತ್ತಮುತ್ತ ಯಾವುದೇ ಕಾಡು ಪ್ರಾಣಿ ಕಂಡು ಬಂದರೂ ಮಾಹಿತಿ ನೀಡುವಂತೆ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಸೂಚಿಸಲಾಗಿದೆ’ ಎಂದು ವಲಯ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ ಮೋರೆ ತಿಳಿಸಿದರು.