ಯಾವುದೇ ಕಾರಣಕ್ಕೂ ಅಂಬೇಡ್ಕರ್ ಭಾವಚಿತ್ರ ತೆರವುಗೊಳಿಸಬಾರದು. ಒಂದು ವೇಳೆ ತೆರವು ಮಾಡಬೇಕಿದ್ದರೆ ಊರಲ್ಲಿಯ ಎಲ್ಲ ಧಾರ್ಮಿಕ ಅನಧಿಕೃತ ಕಟ್ಟಡಗಳು ತೆರವು ಮಾಡುವಂತೆ ಗ್ರಾಮದ ಒಂದು ಸಮುದಾಯ ಪಟ್ಟು ಹಿಡಿದಿದೆ. ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸೋಮವಾರ ಅಧಿಕಾರಿಗಳು ನಡೆಸಿದ ಪ್ರಯತ್ನ ಫಲ ನೀಡಿಲ್ಲ. ಹೀಗಾಗಿ ವಿವಾದ ಯಥಾಸ್ಥಿತಿ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ.