ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔರಾದ್‍: ಏಡ್ಸ್ ಜಾಗೃತಿ ಜಾಥಾ

Last Updated 3 ಡಿಸೆಂಬರ್ 2021, 12:58 IST
ಅಕ್ಷರ ಗಾತ್ರ

ಔರಾದ್: ‘ಏಡ್ಸ್ ರೋಗದ ಕುರಿತು ಜಾಗೃತಿ ಅಗತ್ಯ’ ಎಂದು ಡಾ. ಕಿರಣ ತಿಳಿಸಿದರು.

ಇಲ್ಲಿಯ ಅಮರೇಶ್ವರ ಕಾಲೇಜಿನಲ್ಲಿ ನಡೆದ ಏಡ್ಸ್ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ,‘ಏಡ್ಸ್ ಮಾರಣಾಂತಿಕ ರೋಗ. ಯುವ ಜನಾಂಗ ಈ ಕುರಿತು ತಿಳವಳಿಕೆ ಅಗತ್ಯ’ ಎಂದು ಸಲಹೆ ನೀಡಿದರು.

ಪ್ರಾಂಶುಪಾಲ ಶರಣಪ್ಪ ಬಿರಾದಾರ ಮಾತನಾಡಿ,‘ದಶಕದ ಹಿಂದೆ ಏಡ್ಸ್ ರೋಗ ಸಾಕಷ್ಟು ಅಪಾಯ ತಂದೊಡ್ಡಿತ್ತು. ಸೂಕ್ತ ತಿಳವಳಿಕೆಯಿಂದ ನಿಯಂತ್ರಣಕ್ಕೆ ಬಂದಿದೆ’ ಎಂದರು.

ಮಹಾಂತೇಶ ಪಾಟೀಲ, ಉಷ್ಪಾಂಜಲಿ ಪಾಟೀಲ ಉಪಸ್ಥಿತರಿದ್ದರು. ಉಪನ್ಯಾಸಕ ರೇವಣಯ್ಯ ಮಠ, ಲೋಕೇಶ ಮಾಳೆಗಾಂವ್ ಮತ್ತಿತರರು ಪಾಲ್ಗೊಂಡರು. ನಂತರ ಪಟ್ಟಣದಲ್ಲಿ ಜಾಗೃತಿ ಜಾಥಾ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT