<p><strong>ಔರಾದ್</strong>: ಮಾಸಾಶನ ಸ್ಥಗಿತವಾದ ಹಿನ್ನೆಲೆಯಲ್ಲಿ ಅನಾಥ ಮಹಿಳೆಯೊಬ್ಬರು ಶಾಸಕ ಪ್ರಭು ಚವಾಣ್ ಹಾಗೂ ಅಧಿಕಾರಿಗಳ ಎದುರು ಕಣ್ಣೀರಿಟ್ಟಿದ್ದಾರೆ. </p>.<p>ತಾಲ್ಲೂಕಿನ ಸಂತಪೂರನಲ್ಲಿ ಈಚೆಗೆ ನಡೆದ ಗ್ರಾಮ ಸಂಚಾರ ಸಭೆಯಲ್ಲಿ ಉಮಾದೇವಿ ಸುಭಾಷ ಎನ್ನುವ ವಿಧವೆ ತಹಶೀಲ್ದಾರ್ ಮಹೇಶ ಪಾಟೀಲ ಎದುರು ಕಣ್ಣೀರಿಟ್ಟು, ‘ನನಗೆ ಮಾಸಾಶನ ಬರುತ್ತಿಲ್ಲ. ಉಣ್ಣಲು ಏನು ಇಲ್ಲ. ಅಲ್ಲಿ ಇಲ್ಲಿ ಬೇಡಿಕೊಂಡು ತ್ತಿನ್ನುತ್ತಿದ್ದೇನೆ’ ಎಂದು ಅಳಲು ತೋಡಿಕೊಂಡರು.</p>.<p>ಉಮಾದೇವಿ ಅವರ ಮೂವರು ಹೆಣ್ಣು ಮಕ್ಕಳ ಮದುವೆಯಾಗಿದ್ದು ಅವರು ಗಂಡನ ಮನೆಯಲ್ಲಿದ್ದಾರೆ. ಪತಿ ಮೃತಟ್ಟಿದ್ದರಿಂದ ಕೆಲಕಾಲ ವಡಗಾಂವ್ ಅನಾಥಶ್ರಮದಲ್ಲಿ ಇದ್ದರು. ಮತ್ತೆ ವಾಪಸ್ ಬಂದಿದ್ದಾರೆ. ಮಾಸಾಶನ ಬರುವುದಿಲ್ಲ, ಪಡಿತರ ಚೀಟಿಯೂ ಇಲ್ಲ. ಈ ಕುರಿತು ನಾಡ ಕಚೇರಿ ಅಧಿಕಾರಿಗಳ ಗಮನಕ್ಕೂ ತರಲಾಗಿದೆ ಎಂದು ಸಂತಪೂರನ ಗಣಪತಿ ದೇಶಪಾಂಡೆ ತಿಳಿಸಿದ್ದಾರೆ.</p>.<p>ಈ ಮಹಿಳೆಗೆ ಮಾಸಾಶನ ಸ್ಥಗಿತವಾಗಿರುವುದು ನನಗೆ ಗ್ರಾಮ ಸಂಚಾರದಲ್ಲಿ ಗೊತ್ತಾಗಿದೆ. ಸಂಬಂಧಿತರನ್ನು ಕರೆಸಿ ಇವರಿಗೆ ಆದಷ್ಟು ಬೇಗ ಮಾಸಾಶನ ಹಾಗೂ ಪಡಿತರ ಚೀಟಿ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ತಹಶೀಲ್ದಾರ್ ಮಹೇಶ ಪಾಟೀಲ ಪ್ರಜಾವಾಣಿಗೆ ತಿಳಿಸಿದ್ದಾರೆ.<br /><br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಔರಾದ್</strong>: ಮಾಸಾಶನ ಸ್ಥಗಿತವಾದ ಹಿನ್ನೆಲೆಯಲ್ಲಿ ಅನಾಥ ಮಹಿಳೆಯೊಬ್ಬರು ಶಾಸಕ ಪ್ರಭು ಚವಾಣ್ ಹಾಗೂ ಅಧಿಕಾರಿಗಳ ಎದುರು ಕಣ್ಣೀರಿಟ್ಟಿದ್ದಾರೆ. </p>.<p>ತಾಲ್ಲೂಕಿನ ಸಂತಪೂರನಲ್ಲಿ ಈಚೆಗೆ ನಡೆದ ಗ್ರಾಮ ಸಂಚಾರ ಸಭೆಯಲ್ಲಿ ಉಮಾದೇವಿ ಸುಭಾಷ ಎನ್ನುವ ವಿಧವೆ ತಹಶೀಲ್ದಾರ್ ಮಹೇಶ ಪಾಟೀಲ ಎದುರು ಕಣ್ಣೀರಿಟ್ಟು, ‘ನನಗೆ ಮಾಸಾಶನ ಬರುತ್ತಿಲ್ಲ. ಉಣ್ಣಲು ಏನು ಇಲ್ಲ. ಅಲ್ಲಿ ಇಲ್ಲಿ ಬೇಡಿಕೊಂಡು ತ್ತಿನ್ನುತ್ತಿದ್ದೇನೆ’ ಎಂದು ಅಳಲು ತೋಡಿಕೊಂಡರು.</p>.<p>ಉಮಾದೇವಿ ಅವರ ಮೂವರು ಹೆಣ್ಣು ಮಕ್ಕಳ ಮದುವೆಯಾಗಿದ್ದು ಅವರು ಗಂಡನ ಮನೆಯಲ್ಲಿದ್ದಾರೆ. ಪತಿ ಮೃತಟ್ಟಿದ್ದರಿಂದ ಕೆಲಕಾಲ ವಡಗಾಂವ್ ಅನಾಥಶ್ರಮದಲ್ಲಿ ಇದ್ದರು. ಮತ್ತೆ ವಾಪಸ್ ಬಂದಿದ್ದಾರೆ. ಮಾಸಾಶನ ಬರುವುದಿಲ್ಲ, ಪಡಿತರ ಚೀಟಿಯೂ ಇಲ್ಲ. ಈ ಕುರಿತು ನಾಡ ಕಚೇರಿ ಅಧಿಕಾರಿಗಳ ಗಮನಕ್ಕೂ ತರಲಾಗಿದೆ ಎಂದು ಸಂತಪೂರನ ಗಣಪತಿ ದೇಶಪಾಂಡೆ ತಿಳಿಸಿದ್ದಾರೆ.</p>.<p>ಈ ಮಹಿಳೆಗೆ ಮಾಸಾಶನ ಸ್ಥಗಿತವಾಗಿರುವುದು ನನಗೆ ಗ್ರಾಮ ಸಂಚಾರದಲ್ಲಿ ಗೊತ್ತಾಗಿದೆ. ಸಂಬಂಧಿತರನ್ನು ಕರೆಸಿ ಇವರಿಗೆ ಆದಷ್ಟು ಬೇಗ ಮಾಸಾಶನ ಹಾಗೂ ಪಡಿತರ ಚೀಟಿ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ತಹಶೀಲ್ದಾರ್ ಮಹೇಶ ಪಾಟೀಲ ಪ್ರಜಾವಾಣಿಗೆ ತಿಳಿಸಿದ್ದಾರೆ.<br /><br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>