<p><strong>ಬಸವಕಲ್ಯಾಣ:</strong> ತಾಲ್ಲೂಕಿನ ಹೋಬಳಿ ಕೇಂದ್ರವಾದ ಮಂಠಾಳದಲ್ಲಿ ಆ26 ರಂದು ಗುರುಲಿಂಗೇಶ್ವರ ಚೌಕಿಮಠದ ಜಾತ್ರೆ ವಿಜೃಂಭಣೆಯಿಂದ ಜರುಗಲಿದೆ. ಈ ನಿಮಿತ್ತವಾಗಿ ಪಲ್ಲಕ್ಕಿ ಮೆರವಣಿಗೆ ಸೇರಿ ಇತರೆ ಚಟುವಟಿಕೆಗಳು ನಡೆಯಲಿವೆ.</p>.<p>12ನೇ ಶತಮಾನದಲ್ಲಿ ಈ ತಾಲ್ಲೂಕಿನ ಅನೇಕ ಕಡೆ ಶರಣ ಕ್ಷೇತ್ರಗಳಿದ್ದವು. ಮಂಠಾಳದಲ್ಲಿಯೂ ವಿವಿಧ ಶರಣರ ನೂರೊಂದು ಮಠಗಳಿದ್ದವು. ಈ ಕಾರಣಕ್ಕೇ ಗ್ರಾಮವನ್ನು ಮಠಾಲಯ ಎಂದು ಕರೆಯುವುದು ರೂಢಿಯಾಗಿ ಮುಂದೆ ಮಂಠಾಳ ಎಂದು ಹೆಸರಾಗಿದೆ. ಆದರೆ, ಕಾಲಾನಂತರದಲ್ಲಿ ಅನೇಕ ಮಠಗಳು ನಶಿಸಿದ್ದು ಕೆಲವು ಮಾತ್ರ ಸುಸ್ಥಿತಿಯಲ್ಲಿವೆ. ಹೀಗೆ ಉತ್ತಮವಾಗಿರುವ ಮಠಗಳಲ್ಲಿ ಗುರುಲಿಂಗೇಶ್ವರರ ಮಠ ಒಂದಾಗಿದೆ.</p>.<p>ಈ ಮಠ ಗ್ರಾಮದ ಉತ್ತರ ಭಾಗದಲ್ಲಿ ಮಹಾದೇವ ಮಂದಿರದ ಸಮೀಪದಲ್ಲಿದ್ದು ಆಕರ್ಷಕವಾದ ಶೈಲಿಯಲ್ಲಿ ನಿರ್ಮಾಣಗೊಂಡಿದೆ. ಪೂರ್ವಾಭಿಮುಖವಾದ ದೊಡ್ಡ ಪ್ರವೇಶದ್ವಾರ ಹಾಗೂ ಆವರಣಗೋಡೆ ಇದ್ದು ಒಳ ಭಾಗದಲ್ಲಿ ಗುರುಲಿಂಗೇಶ್ವರರ ಗದ್ದುಗೆಯ ಕಟ್ಟಡವಿದೆ. ಎದುರಲ್ಲಿ ವಿವಿಧ ಕಾರ್ಯಗಳಿಗಾಗಿರುವ ಕಮಾನುಗಳ ಕೊಠಡಿಗಳು ಇವೆ. ಆರು ಜನ ಪೀಠಾಧಿಪತಿಗಳು ಸ್ಥಾನ ವಹಿಸಿಕೊಂಡು ಧರ್ಮಕಾರ್ಯ ನಿರ್ವಹಿಸಿದ್ದಾರೆ. ಎರಡು ವರ್ಷಗಳ ಹಿಂದೆ ಅಭಿನವ ಚನ್ನಬಸವ ಸ್ವಾಮೀಜಿ ಪೀಠಾಧಿಪತಿಗಳಾಗಿದ್ದಾರೆ. </p>.<p>‘ಆಗಸ್ಟ್ 26 ರಂದು ಬೆಳಿಗ್ಗೆ ಮಠದಲ್ಲಿ ಪೂಜೆ ನೆರವೆರಲಿದ್ದು ನಂತರದಲ್ಲಿ ಮಧ್ಯಾಹ್ನದಿಂದ ಮಧ್ಯರಾತ್ರಿಯವರೆಗೆ ಪಲ್ಲಕ್ಕಿ ಮೆರವಣಿಗೆ ನಡೆಯುವುದು. ಅನ್ನದಾಸೋಹ ಸಹ ಏರ್ಪಡಿಸಲಾಗುತ್ತದೆ. ಗ್ರಾಮಸ್ಥರು ತಪ್ಪದೇ ಭಾಗವಹಿಸುವರು. ಸುತ್ತಲಿನ ಗ್ರಾಮಸ್ಥರು ಸಹ ಬರುವರು’ ಎಂದು ಅಭಿನವ ಚನ್ನಬಸವ ಸ್ವಾಮೀಜಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಸವಕಲ್ಯಾಣ:</strong> ತಾಲ್ಲೂಕಿನ ಹೋಬಳಿ ಕೇಂದ್ರವಾದ ಮಂಠಾಳದಲ್ಲಿ ಆ26 ರಂದು ಗುರುಲಿಂಗೇಶ್ವರ ಚೌಕಿಮಠದ ಜಾತ್ರೆ ವಿಜೃಂಭಣೆಯಿಂದ ಜರುಗಲಿದೆ. ಈ ನಿಮಿತ್ತವಾಗಿ ಪಲ್ಲಕ್ಕಿ ಮೆರವಣಿಗೆ ಸೇರಿ ಇತರೆ ಚಟುವಟಿಕೆಗಳು ನಡೆಯಲಿವೆ.</p>.<p>12ನೇ ಶತಮಾನದಲ್ಲಿ ಈ ತಾಲ್ಲೂಕಿನ ಅನೇಕ ಕಡೆ ಶರಣ ಕ್ಷೇತ್ರಗಳಿದ್ದವು. ಮಂಠಾಳದಲ್ಲಿಯೂ ವಿವಿಧ ಶರಣರ ನೂರೊಂದು ಮಠಗಳಿದ್ದವು. ಈ ಕಾರಣಕ್ಕೇ ಗ್ರಾಮವನ್ನು ಮಠಾಲಯ ಎಂದು ಕರೆಯುವುದು ರೂಢಿಯಾಗಿ ಮುಂದೆ ಮಂಠಾಳ ಎಂದು ಹೆಸರಾಗಿದೆ. ಆದರೆ, ಕಾಲಾನಂತರದಲ್ಲಿ ಅನೇಕ ಮಠಗಳು ನಶಿಸಿದ್ದು ಕೆಲವು ಮಾತ್ರ ಸುಸ್ಥಿತಿಯಲ್ಲಿವೆ. ಹೀಗೆ ಉತ್ತಮವಾಗಿರುವ ಮಠಗಳಲ್ಲಿ ಗುರುಲಿಂಗೇಶ್ವರರ ಮಠ ಒಂದಾಗಿದೆ.</p>.<p>ಈ ಮಠ ಗ್ರಾಮದ ಉತ್ತರ ಭಾಗದಲ್ಲಿ ಮಹಾದೇವ ಮಂದಿರದ ಸಮೀಪದಲ್ಲಿದ್ದು ಆಕರ್ಷಕವಾದ ಶೈಲಿಯಲ್ಲಿ ನಿರ್ಮಾಣಗೊಂಡಿದೆ. ಪೂರ್ವಾಭಿಮುಖವಾದ ದೊಡ್ಡ ಪ್ರವೇಶದ್ವಾರ ಹಾಗೂ ಆವರಣಗೋಡೆ ಇದ್ದು ಒಳ ಭಾಗದಲ್ಲಿ ಗುರುಲಿಂಗೇಶ್ವರರ ಗದ್ದುಗೆಯ ಕಟ್ಟಡವಿದೆ. ಎದುರಲ್ಲಿ ವಿವಿಧ ಕಾರ್ಯಗಳಿಗಾಗಿರುವ ಕಮಾನುಗಳ ಕೊಠಡಿಗಳು ಇವೆ. ಆರು ಜನ ಪೀಠಾಧಿಪತಿಗಳು ಸ್ಥಾನ ವಹಿಸಿಕೊಂಡು ಧರ್ಮಕಾರ್ಯ ನಿರ್ವಹಿಸಿದ್ದಾರೆ. ಎರಡು ವರ್ಷಗಳ ಹಿಂದೆ ಅಭಿನವ ಚನ್ನಬಸವ ಸ್ವಾಮೀಜಿ ಪೀಠಾಧಿಪತಿಗಳಾಗಿದ್ದಾರೆ. </p>.<p>‘ಆಗಸ್ಟ್ 26 ರಂದು ಬೆಳಿಗ್ಗೆ ಮಠದಲ್ಲಿ ಪೂಜೆ ನೆರವೆರಲಿದ್ದು ನಂತರದಲ್ಲಿ ಮಧ್ಯಾಹ್ನದಿಂದ ಮಧ್ಯರಾತ್ರಿಯವರೆಗೆ ಪಲ್ಲಕ್ಕಿ ಮೆರವಣಿಗೆ ನಡೆಯುವುದು. ಅನ್ನದಾಸೋಹ ಸಹ ಏರ್ಪಡಿಸಲಾಗುತ್ತದೆ. ಗ್ರಾಮಸ್ಥರು ತಪ್ಪದೇ ಭಾಗವಹಿಸುವರು. ಸುತ್ತಲಿನ ಗ್ರಾಮಸ್ಥರು ಸಹ ಬರುವರು’ ಎಂದು ಅಭಿನವ ಚನ್ನಬಸವ ಸ್ವಾಮೀಜಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>