<p><strong>ಶಮಶೇರ್ನಗರ(ಜನವಾಡ):</strong> ಸಿಂದಿಗೇರಿ ನಂದಿ ಬಸವಣ್ಣ ಜಾತ್ರಾ ಮಹೋತ್ಸವ ಬೀದರ್ ತಾಲ್ಲೂಕಿನ ಶಮಶೇರ್ನಗರದಲ್ಲಿ ಈಚೆಗೆ ಸಂಭ್ರಮ, ಸಡಗರದಿಂದ ನಡೆಯಿತು.</p>.<p>ಜಾತ್ರೆ ನಿಮಿತ್ತ ಸರ್ವ ಧರ್ಮ ಸಮ್ಮೇಳನ, ಹೇಮರಡ್ಡಿ ಮಲ್ಲಮ್ಮ ಪುರಾಣ, ಪ್ರವಚನ, ಅಗ್ನಿ ಪೂಜೆ, ರುದ್ರಾಭಿಷೇಕ, ಭಜನೆ, ನಂದಿ ಬಸವಣ್ಣ ಪಲ್ಲಕ್ಕಿ ಮೆರವಣಿಗೆ, ರಥೋತ್ಸವ ಮೊದಲಾದ ಕಾರ್ಯಕ್ರಮ ಜರುಗಿದವು.</p>.<p>ಜಾತ್ರೆ ಸೌಹಾರ್ದಕ್ಕೆ ಸಹಕಾರಿ: ಜಾತ್ರೆಗಳು ಸಮಾಜದಲ್ಲಿ ಶಾಂತಿ, ನೆಮ್ಮದಿ ಹಾಗೂ ಸೌಹಾರ್ದ ನೆಲೆಗೊಳ್ಳಲು ಸಹಕಾರಿಯಾಗುತ್ತವೆ ಎಂದು ಸರ್ವ ಧರ್ಮ ಸಮ್ಮೇಳನದಲ್ಲಿ ಮಾತನಾಡಿದ ಜಹೀರಾಬಾದ್ ತಾಲ್ಲೂಕಿನ ಮಲ್ಲಯ್ಯಗಿರಿ ಆಶ್ರಮದ ಪೀಠಾಧಿಪತಿ ಬಸವಲಿಂಗ ಅವಧೂತರು ನುಡಿದರು.</p>.<p>ಆಧ್ಯಾತ್ಮ ಜ್ಞಾನದಿಂದ ಸುಂದರ ಬದುಕು ರೂಪಿಸಿಕೊಳ್ಳಬಹುದು ಎಂದು ಬೇಮಳಖೇಡ ಹಿರೇಮಠದ ರಾಜಶೇಖರ ಶಿವಾಚಾರ್ಯ ಹೇಳಿದರು.</p>.<p>ಚನ್ನಮಲ್ಲಯ್ಯ ಸ್ವಾಮೀಜಿ, ನಂದಿ ಬಸವಣ್ಣ ದೇವಸ್ಥಾನ ಪಂಚ ಕಮಿಟಿಯ ಅಧ್ಯಕ್ಷ ಶಿವರಾಜ ಪಾಟೀಲ, ಪ್ರಮುಖರಾದ ವೀರಶೆಟ್ಟಿ ಪಾಟೀಲ, ಸೋಮನಾಥ ಮೈಲೂರ, ಶಾಂತಕುಮಾರ ಸ್ವಾಮಿ ಬಾವಗಿ, ಭೀಮರಾವ್ ಹೂಗಾರೆ, ಯೋಗೇಂದ್ರ ಯದಲಾಪುರೆ, ಧೂಳಪ್ಪ ತೋರಣ, ರಾಜು ಗುನ್ನಳ್ಳಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಮಶೇರ್ನಗರ(ಜನವಾಡ):</strong> ಸಿಂದಿಗೇರಿ ನಂದಿ ಬಸವಣ್ಣ ಜಾತ್ರಾ ಮಹೋತ್ಸವ ಬೀದರ್ ತಾಲ್ಲೂಕಿನ ಶಮಶೇರ್ನಗರದಲ್ಲಿ ಈಚೆಗೆ ಸಂಭ್ರಮ, ಸಡಗರದಿಂದ ನಡೆಯಿತು.</p>.<p>ಜಾತ್ರೆ ನಿಮಿತ್ತ ಸರ್ವ ಧರ್ಮ ಸಮ್ಮೇಳನ, ಹೇಮರಡ್ಡಿ ಮಲ್ಲಮ್ಮ ಪುರಾಣ, ಪ್ರವಚನ, ಅಗ್ನಿ ಪೂಜೆ, ರುದ್ರಾಭಿಷೇಕ, ಭಜನೆ, ನಂದಿ ಬಸವಣ್ಣ ಪಲ್ಲಕ್ಕಿ ಮೆರವಣಿಗೆ, ರಥೋತ್ಸವ ಮೊದಲಾದ ಕಾರ್ಯಕ್ರಮ ಜರುಗಿದವು.</p>.<p>ಜಾತ್ರೆ ಸೌಹಾರ್ದಕ್ಕೆ ಸಹಕಾರಿ: ಜಾತ್ರೆಗಳು ಸಮಾಜದಲ್ಲಿ ಶಾಂತಿ, ನೆಮ್ಮದಿ ಹಾಗೂ ಸೌಹಾರ್ದ ನೆಲೆಗೊಳ್ಳಲು ಸಹಕಾರಿಯಾಗುತ್ತವೆ ಎಂದು ಸರ್ವ ಧರ್ಮ ಸಮ್ಮೇಳನದಲ್ಲಿ ಮಾತನಾಡಿದ ಜಹೀರಾಬಾದ್ ತಾಲ್ಲೂಕಿನ ಮಲ್ಲಯ್ಯಗಿರಿ ಆಶ್ರಮದ ಪೀಠಾಧಿಪತಿ ಬಸವಲಿಂಗ ಅವಧೂತರು ನುಡಿದರು.</p>.<p>ಆಧ್ಯಾತ್ಮ ಜ್ಞಾನದಿಂದ ಸುಂದರ ಬದುಕು ರೂಪಿಸಿಕೊಳ್ಳಬಹುದು ಎಂದು ಬೇಮಳಖೇಡ ಹಿರೇಮಠದ ರಾಜಶೇಖರ ಶಿವಾಚಾರ್ಯ ಹೇಳಿದರು.</p>.<p>ಚನ್ನಮಲ್ಲಯ್ಯ ಸ್ವಾಮೀಜಿ, ನಂದಿ ಬಸವಣ್ಣ ದೇವಸ್ಥಾನ ಪಂಚ ಕಮಿಟಿಯ ಅಧ್ಯಕ್ಷ ಶಿವರಾಜ ಪಾಟೀಲ, ಪ್ರಮುಖರಾದ ವೀರಶೆಟ್ಟಿ ಪಾಟೀಲ, ಸೋಮನಾಥ ಮೈಲೂರ, ಶಾಂತಕುಮಾರ ಸ್ವಾಮಿ ಬಾವಗಿ, ಭೀಮರಾವ್ ಹೂಗಾರೆ, ಯೋಗೇಂದ್ರ ಯದಲಾಪುರೆ, ಧೂಳಪ್ಪ ತೋರಣ, ರಾಜು ಗುನ್ನಳ್ಳಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>