<p><strong>ಬೀದರ್:</strong> ‘ಬಸವಣ್ಣನವರು ಮನುಕುಲದ ಕಲ್ಯಾಣಕ್ಕೆ ಅವಿರತ ಶ್ರಮಿಸಿದ್ದರು. ಬಸವತತ್ವ ಮನುಕುಲಕ್ಕೆ ದಾರಿದೀಪವಾಗಿದೆ’ ಎಂದು ಸಾಹಿತಿ ರಜಿಯಾ ಬಳಬಟ್ಟಿ ತಿಳಿಸಿದರು.</p>.<p>ವಚನಾಮೃತ ಕನ್ನಡ ಸಂಘದಿಂದ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಬಸವೇಶ್ವರರು ಪ್ರತಿಪಾದಿಸಿದ ಜೀವನ ಮೌಲ್ಯಗಳು’ ಕುರಿತ ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಬಸವಣ್ಣನವರು ಸಕಲ ಜೀವಿಗೂ ಲೇಸು ಬಯಸಿದ್ದರು. ಬಸವಣ್ಣ ಮಹಾ ಮಾನವತಾವಾದಿ ಆಗಿದ್ದರು. ಸಮಾನತೆ ತತ್ವ ಪ್ರತಿಪಾದಿಸಿದ್ದರು. ಬಸವಣ್ಣನವರ ತತ್ವಗಳ ಆಚರಣೆ ಇಂದಿನ ಅವಶ್ಯಕತೆಯಾಗಿದೆ ಎಂದರು.</p>.<p>ವಚನಾಮೃತ ಕನ್ನಡ ಸಂಘದ ಅಧ್ಯಕ್ಷ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಮಾತನಾಡಿ, ಬಸವಣ್ಣನವರ ವಚನಗಳು ಜೀವನ ಸೂತ್ರವನ್ನು ಒಳಗೊಂಡಿವೆ. ಜಗತ್ತು ಕಟ್ಟುವ, ಜನರ ಜ್ಞಾನದ ಹಸಿವು ನೀಗಿಸುವಂತಹ ಸಾಹಿತ್ಯ ರಚನೆ ಆಗಬೇಕಿದೆ ಎಂದು ಹೇಳಿದರು.</p>.<p>ನಿವೃತ್ತ ಪ್ರಾಚಾರ್ಯ ಸೂರ್ಯಕಾಂತ ಚಿದ್ರೆ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ರಾಜಶೇಖರ ಮಂಗಲಗಿ, ಶಿಕ್ಷಕ ಶ್ರೀಕಾಂತ ಪಾಟೀಲ, ಜಯದೇವಿ ಯದಲಾಪುರೆ, ಜೀಜಾಮಾತಾ ಕನ್ಯಾ ಪ್ರೌಢಶಾಲೆಯ ಮುಖ್ಯಶಿಕ್ಷಕ ಪರಮೇಶ್ವರ ಬಿರಾದಾರ, ಬಸವರಾಜ ಮೂಲಗೆ ಹಾಜರಿದ್ದರು.</p>.<p>ಸೂರ್ಯಕಾಂತ ಹೊಡಮನಿ, ವಿದ್ಯಾವತಿ ಬಲ್ಲೂರ, ಪಾರ್ವತಿ ಸೋನಾರೆ, ಸುನಿತಾ ದಾಡಗೆ, ಜಗದೇವಿ ಮೈನಾಳೆ, ರೇಣುಕಾ ಎನ್.ಬಿ, ಸ್ವರೂಪರಾಣಿ ನಾಗೂರೆ, ರೇಣುಕಾ ಮಳ್ಳಿ, ಶ್ರೇಯಾ ಮಹೇಂದ್ರಕರ್ ಹಾಗೂ ಶ್ರೀದೇವಿ ಸೋಮಶೆಟ್ಟಿ ಸ್ವರಚಿತ ಕವನ ವಾಚಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್:</strong> ‘ಬಸವಣ್ಣನವರು ಮನುಕುಲದ ಕಲ್ಯಾಣಕ್ಕೆ ಅವಿರತ ಶ್ರಮಿಸಿದ್ದರು. ಬಸವತತ್ವ ಮನುಕುಲಕ್ಕೆ ದಾರಿದೀಪವಾಗಿದೆ’ ಎಂದು ಸಾಹಿತಿ ರಜಿಯಾ ಬಳಬಟ್ಟಿ ತಿಳಿಸಿದರು.</p>.<p>ವಚನಾಮೃತ ಕನ್ನಡ ಸಂಘದಿಂದ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಬಸವೇಶ್ವರರು ಪ್ರತಿಪಾದಿಸಿದ ಜೀವನ ಮೌಲ್ಯಗಳು’ ಕುರಿತ ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಬಸವಣ್ಣನವರು ಸಕಲ ಜೀವಿಗೂ ಲೇಸು ಬಯಸಿದ್ದರು. ಬಸವಣ್ಣ ಮಹಾ ಮಾನವತಾವಾದಿ ಆಗಿದ್ದರು. ಸಮಾನತೆ ತತ್ವ ಪ್ರತಿಪಾದಿಸಿದ್ದರು. ಬಸವಣ್ಣನವರ ತತ್ವಗಳ ಆಚರಣೆ ಇಂದಿನ ಅವಶ್ಯಕತೆಯಾಗಿದೆ ಎಂದರು.</p>.<p>ವಚನಾಮೃತ ಕನ್ನಡ ಸಂಘದ ಅಧ್ಯಕ್ಷ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಮಾತನಾಡಿ, ಬಸವಣ್ಣನವರ ವಚನಗಳು ಜೀವನ ಸೂತ್ರವನ್ನು ಒಳಗೊಂಡಿವೆ. ಜಗತ್ತು ಕಟ್ಟುವ, ಜನರ ಜ್ಞಾನದ ಹಸಿವು ನೀಗಿಸುವಂತಹ ಸಾಹಿತ್ಯ ರಚನೆ ಆಗಬೇಕಿದೆ ಎಂದು ಹೇಳಿದರು.</p>.<p>ನಿವೃತ್ತ ಪ್ರಾಚಾರ್ಯ ಸೂರ್ಯಕಾಂತ ಚಿದ್ರೆ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ರಾಜಶೇಖರ ಮಂಗಲಗಿ, ಶಿಕ್ಷಕ ಶ್ರೀಕಾಂತ ಪಾಟೀಲ, ಜಯದೇವಿ ಯದಲಾಪುರೆ, ಜೀಜಾಮಾತಾ ಕನ್ಯಾ ಪ್ರೌಢಶಾಲೆಯ ಮುಖ್ಯಶಿಕ್ಷಕ ಪರಮೇಶ್ವರ ಬಿರಾದಾರ, ಬಸವರಾಜ ಮೂಲಗೆ ಹಾಜರಿದ್ದರು.</p>.<p>ಸೂರ್ಯಕಾಂತ ಹೊಡಮನಿ, ವಿದ್ಯಾವತಿ ಬಲ್ಲೂರ, ಪಾರ್ವತಿ ಸೋನಾರೆ, ಸುನಿತಾ ದಾಡಗೆ, ಜಗದೇವಿ ಮೈನಾಳೆ, ರೇಣುಕಾ ಎನ್.ಬಿ, ಸ್ವರೂಪರಾಣಿ ನಾಗೂರೆ, ರೇಣುಕಾ ಮಳ್ಳಿ, ಶ್ರೇಯಾ ಮಹೇಂದ್ರಕರ್ ಹಾಗೂ ಶ್ರೀದೇವಿ ಸೋಮಶೆಟ್ಟಿ ಸ್ವರಚಿತ ಕವನ ವಾಚಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>