‘ನಮ್ಮ ಭಾಗದಲ್ಲಿ ಈ ನರಿಗಳು ಸಿಗುವುದು ಅಪರೂಪ. ಕಾಡು ನಾಶ, ಕಾಡಿಗೆ ಬೆಂಕಿ ಬೀಳುವಂತಹ ಘಟನೆಯಿಂದ ಈ ನರಿಗಳ ಸಂತತಿ ಅಳಿವಿನ ಅಂಚಿನಲ್ಲಿವೆ. ಭೂಮಿಯಲ್ಲಿ ರಂಧ್ರ ಕೊರೆದು ಮನೆ ಮಾಡಿಕೊಂಡು ವಾಸಿಸುವ ಈ ನರಿಗಳು ವಿಚಿತ್ರ ಧ್ವನಿಯಿಂದ ಕೂಗು ಹಾಕುತ್ತವೆ’ ಎಂದು ವಲಯ ಅರಣ್ಯಾಧಿಕಾರಿ ಪ್ರೇಮಶೇಖರ್ ಚಾಂದೋರಿ ತಿಳಿಸಿದ್ದಾರೆ.