ಜನವಾಡ: ಭದ್ರೇಶ್ವರರ ಪುಣ್ಯಸ್ಮರಣೆ ಪ್ರಯುಕ್ತ ಬೀದರ್ ತಾಲ್ಲೂಕಿನ ಬಾವಗಿ ಗ್ರಾಮದ ಭದ್ರೇಶ್ವರ ದೇಗುಲದಲ್ಲಿ ಮಂಗಳವಾರ ಶ್ರದ್ಧೆ, ಭಕ್ತಿಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಭದ್ರೇಶ್ವರ ಗದ್ದುಗೆಗೆ ವಿಶೇಷ ಪೂಜೆ, ರುದ್ರಾಭಿಷೇಕ ಪೂಜೆ, ಧ್ವಜಾರೋಹಣ, ಸಂಗೀತ ಕಾರ್ಯಕ್ರಮಗಳು ನೆರವೇರಿದವು.
ಭದ್ರೇಶ್ವರರು ನೊಂದವರ ಸಂಕಷ್ಟ ಪರಿಹರಿಸುತ್ತಿದ್ದರು. ಭಕ್ತರ ಪಾಲಿನ ಆರಾಧ್ಯ ದೈವವಾಗಿದ್ದರು ಎಂದು ಶಿವಕುಮಾರ ಸ್ವಾಮಿ ಸ್ಮರಿಸಿದರು. ಭದ್ರೇಶ್ವರ ಪುಣ್ಯಸ್ಮರಣೆಯನ್ನು ಜಾತಿ, ಮತ, ಪಂಥಗಳ ಭೇದವಿಲ್ಲದೆ ಎಲ್ಲರೂ ಒಗ್ಗೂಡಿ ಆಚರಿಸಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ ಶಾಂತವೀರ ಹಜ್ಜರಗಿ ಹೇಳಿದರು.
ಗ್ರಾಮದ ಮುಖಂಡರಾದ ರೇವಣಪ್ಪ ಭದ್ರಣ್ಣ, ಚನ್ನಮಲ್ಲಪ್ಪ ಹಜ್ಜರಗಿ, ಗುಂಡಯ್ಯ ಸ್ವಾಮಿ, ಭದ್ರಯ್ಯ ಸ್ವಾಮಿ, ಶಾಂತಕುಮಾರ ಸ್ವಾಮಿ, ರಾಜಕುಮಾರ ಅತಿವಾಳ, ಕಿರಣ ಹಿರೇಮಠ, ಬಸವರಾಜ ಪಾಟೀಲ ಹೊಸಳ್ಳಿ ಇದ್ದರು.