ಗುರುವಾರ, 1 ಜನವರಿ 2026
×
ADVERTISEMENT
ADVERTISEMENT

ಮಳೆಯಾದರೆ ಮುಳುಗುವ ದಾಡಗಿ ಸೇತುವೆ: 15ಕ್ಕೂ ಹೆಚ್ಚು ಹಳ್ಳಿಗಳ ಸಂಪರ್ಕ ಕಡಿತ

ಬಸವರಾಜ್ ಎಸ್. ಪ್ರಭಾ
Published : 1 ಅಕ್ಟೋಬರ್ 2025, 7:57 IST
Last Updated : 1 ಅಕ್ಟೋಬರ್ 2025, 7:57 IST
ಫಾಲೋ ಮಾಡಿ
Comments
ಭಾರಿ ಮಳೆಯಾದಾಗ, ಕಾರಂಜಾ ಜಲಾಶಯದಿಂದ ನದಿಗೆ ನೀರು ಹರಿಸಿದಾಗ ಸೇತುವೆ ಮುಳುಗಡೆ ಆಗುತ್ತಿದ್ದು ತಾಲ್ಲೂಕು ಕೇಂದ್ರದೊಂದಿಗೆ ಸಾಕಷ್ಟು ಹಳ್ಳಿಗಳ ಸಂಪರ್ಕ ಕಡಿತಗೊಳ್ಳುತ್ತಿದೆ
ರೇವಣಸಿದ್ದ ಜಾಡರ್, ಎಬಿವಿಪಿ ಮುಖಂಡ
ದಾಡಗಿ ಸೇತುವೆ ಅಕ್ಕಪಕ್ಕ ರಕ್ಷಣಾ ತಡೆಗೋಡೆ ಇಲ್ಲದಿರುವುದರಿಂದ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ವಾಹನ ಚಾಲನೆ ಮಾಡಬೇಕಾಗಿದೆ
ಉಮಾಕಾಂತ ತಳವಾಡೆ ಏಣಕೂರು ಗ್ರಾಮಸ್ಥ
ಹೊಸ ಸೇತುವೆ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಕೆ
ಕಾರಂಜಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ದಾಡಗಿ ಸೇತುವೆ ಬಳಿ ಹೊಸ ಸೇತುವೆ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಇಲಾಖೆಯ ಸಚಿವರಿಗೆ ಮನವಿ ಮಾಡಿದ್ದಾರೆ. ‘ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಅನುಮೋದನೆ ಸಿಕ್ಕ ನಂತರ ಸೇತುವೆ ನಿರ್ಮಾಣದ ಕೆಲಸ ಆರಂಭಿಸಲಾಗುವುದು. ತಾತ್ಕಾಲಿಕವಾಗಿ ಸೇತುವೆ ಅಕ್ಕಪಕ್ಕದ ಗಾರ್ಡ್ ಸ್ಟೋನ್‌ಗಳ ಎತ್ತರ ಹೆಚ್ಚಿಸಲು ಈಗಾಗಲೇ ಸೂಚಿಸಲಾಗಿದೆ. ಮಳೆಯ ಕಾರಣದಿಂದ ಕೆಲಸ ವಿಳಂಬವಾಗಿದ್ದು ಒಂದು ವಾರದಲ್ಲಿ ಗಾರ್ಡ್ ಸ್ಟೋನ್‌ಗಳ ಎತ್ತರ ಹೆಚ್ಚಳ ಕಾರ್ಯ ಪೂರ್ಣಗೊಳಿಸಲಾಗುವುದು. ಲಖನಗಾಂವ್ ಬ್ರಿಜ್ ಕಂ ಬ್ಯಾರೇಜ್ ಪಕ್ಕದಲ್ಲಿ ಇನ್ನೊಂದು ಹೊಸ ಸೇತುವೆ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಅಲ್ತಾಫ್ ಮಿಯಾ ‘ಪ್ರಜಾವಾಣಿ’ ಗೆ ತಿಳಿಸಿದರು.
ಸೇತುವೆ ತುಂಬಾ ಹಳೆಯದಾಗಿದ್ದು, ಸಾರ್ವಜನಿಕರ, ವಿದ್ಯಾರ್ಥಿಗಳ, ವ್ಯಾಪಾರಿಗಳ ಸುರಕ್ಷಿತ ಸಂಪರ್ಕದ ದೃಷ್ಟಿಯಿಂದ ಹೊಸದಾದ ಸೇತುವೆ ನಿರ್ಮಿಸುವುದು ಒಳಿತು
ನಾಗಶೆಟ್ಟಿ ಚೋಳಾ, ದಾಡಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT