<p><strong>ಗುಮ್ಮಾ(ಅಷ್ಟೂರ):</strong> ರೈತರಿಗಾಗಿಯೇ ಸರ್ಕಾರದ ಹಲವು ಯೋಜನೆಗಳಿವೆ. ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡರೆ, ರೈತರು ಆರ್ಥಿಕವಾಗಿ ಪ್ರಗತಿ ಸಾಧಿಸಬಹದು ಎಂಬುದಕ್ಕೆ ಬೀದರ್ ತಾಲ್ಲೂಕಿನ ಗುಮ್ಮಾ ಗ್ರಾಮದ ರೈತ ಕುಶಾಲರಾವ ಘಾಳೆಪ್ಪ ಉತ್ತಮ ನಿದರ್ಶನವಾಗಿದ್ದಾರೆ.</p>.<p>ಕುಶಾಲಾರಾವ ಅವರು, ನರೇಗಾ ಯೋಜನೆ ಅಡಿಯಲ್ಲಿ ₹57 ಸಾವಿರ ಧನಸಹಾಯ ಹಾಗೂ ಒಂದಿಷ್ಟು ವೈಯಕ್ತಿಕ ಹಣ ಖರ್ಚು ಮಾಡಿ, ಹೊಲದಲ್ಲಿ ದನದ ಕೊಟ್ಟಿಗೆಯನ್ನು ನಿರ್ಮಿಸಿಕೊಂಡಿದ್ದಾರೆ. ಇದರಿಂದಾಗಿ ಅವರಿಗೆ ಕೃಷಿಯೊಂದಿಗೆ ಹೈನುಗಾರಿಕೆಯನ್ನು ಉತ್ತಮವಾಗಿ ನಿರ್ವಹಿಸಲು ಅನುಕೂಲವಾಗಿದೆ. </p>.<p>ಸದ್ಯ ಅವರು 6 ಎಮ್ಮೆಗಳನ್ನು ಸಾಕಾಣಿಕೆ ಮಾಡುತ್ತಿದ್ದು, ನಿತ್ಯ 40 ಲೀಟರ್ ಹಾಲು ಸಂಗ್ರಹಿಸುತ್ತಾರೆ. ಜತೆಗೆ ಹಾಲನ್ನು ತಾವೇ ಮಾರಾಟ ಮಾಡುವ ಮೂಲಕ ಹೆಚ್ಚಿನ ಆದಾಯ ಪಡೆಯುತ್ತಿದ್ದು, ಇತರ ರೈತರಿಗೆ ಮಾದರಿಯಾಗಿದ್ದಾರೆ.</p>.<p>‘ನನ್ನ ಮನೆ ಹೊಲದಲ್ಲಿಯೇ ಇದೆ. ಮೊದಲು ಹೈನುರಾಸುಗಳನ್ನು ಬಯಲಲ್ಲಿಯೇ ಕಟ್ಟಬೇಕಿತ್ತು. ಬೇಸಿಗೆ ಹಾಗೂ ಮಳೆಗಾಲದಲ್ಲಿ ಅವುಗಳಿಗೆ ಬಿಸಿಲು ಮತ್ತು ಮಳೆಯಿಂದ ಸಮಸ್ಯೆಯಾಗುತ್ತಿತ್ತು. ಅಷ್ಟೂರ ಗ್ರಾಮ ಪಂಚಾಯಿತಿಯಿಂದ ನರೇಗಾದಡಿ ದನದ ಕೊಟ್ಟಿಗೆ ನಿರ್ಮಿಸಿಕೊಟ್ಟಿದ್ದರಿಂದ ಹೈನುಗಾರಿಕೆಗೆ ಸಹಾಯವಾಗಿದೆ ಎಂದು ಕುಶಾಲರಾವ ತಿಳಿಸಿದರು.</p>.<p>‘ನಾಲ್ಕು ಎಕರೆ ಜಮೀನಿದ್ದು, ಕೃಷಿ ಜತೆಗೆ ಹದಿನೈದು ವರ್ಷಗಳಿಂದ ಹೈನುಗಾರಿಕೆಯಲ್ಲೂ ತೊಡಗಿಸಿಕೊಂಡಿದ್ದೇನೆ. ಹೈನುಗಾರಿಕೆ ನಿರಂತರ ನನ್ನ ಕೈಹಿಡಿದಿದೆ. ಸದ್ಯ 6 ಎಮ್ಮೆಗಳಿದ್ದು, ಬೆಳಿಗ್ಗೆ ಹಾಗೂ ಸಂಜೆ ಸೇರಿ ಪ್ರತಿ ದಿನ 40 ಲೀಟರ್ ಹಾಲು ಸಂಗ್ರಹ ಆಗುತ್ತದೆ. ಬೀದರ್ನಲ್ಲಿ ನಾನೇ ಮನೆ ಮನೆಗೆ ತೆರಳಿ ಹಾಲು ಮಾರಾಟ ಮಾಡುತ್ತೇನೆ. ನಿತ್ಯ ಬರುವ ₹ 2,400 ರಲ್ಲಿ ₹ 800 ಖರ್ಚು ತೆಗೆದರೂ, ₹ 1,600 ಉಳಿಯುತ್ತದೆ. ಮಾಸಿಕ ₹ 48 ಸಾವಿರ ಆದಾಯ ಬರುತ್ತಿದೆ. ರೈತರು ಆರ್ಥಿಕ ಅಭಿವೃದ್ಧಿಗಾಗಿ ಕೃಷಿಯೊಂದಿಗೆ ಹೈನುಗಾರಿಕೆಯನ್ನೂ ಕೈಗೊಳ್ಳಬೇಕು. ಇದರಿಂದ ಆರ್ಥಿಕವಾಗಿ ಅಭಿವೃದ್ಧಿ ಸಾಧಿಸಬಹುದು’ ಎಂದು ಸಲಹೆ ಮಾಡಿದರು.</p>.<p>ನರೇಗಾದಡಿ ರೈತರು ದನದ ಕೊಟ್ಟಿಗೆ, ಕುರಿ, ಕೋಳಿ ಶೆಡ್, ಎರೆಹುಳು ಗೊಬ್ಬರ ತೊಟ್ಟಿ ನಿರ್ಮಿಸಿಕೊಂಡು, ತೋಟಗಾರಿಕೆ ಬೆಳೆ ಸಹ ಬೆಳೆದು ಆದಾಯ ಪಡೆಯಬಹುದು ಎಂದು ಬೀದರ್ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕಿರಣ ಪಾಟೀಲ ತಿಳಿಸಿದರು.</p>.<p> ದನದ ಕೊಟ್ಟಿಗೆಗೆ ₹57 ಸಾವಿರ ಸಹಾಯಧನ 6 ಎಮ್ಮೆ ಸಾಕುತ್ತಿರುವ ರೈತ ಕುಶಾಲರಾವ ಘಾಳೆಪ್ಪ ನಿತ್ಯ 40 ಲೀಟರ್ ಹಾಲು ಸಂಗ್ರಹ, ಮಾರಾಟ</p>.<div><blockquote>ಮಳೆಗಾಲದಲ್ಲಿ ಹೈನುಗಾರಿಕೆ ರಾಸುಗಳ ಸಂರಕ್ಷಣೆ ಕಷ್ಟವಾಗುತ್ತಿತ್ತು. ವಿಷ ಜಂತುಗಳ ಭಯ ಕಾಡುತ್ತಿತ್ತು. ನರೇಗಾದಡಿ ನಿರ್ಮಿಸಿದ ದನದ ಕೊಟ್ಟಿಗೆ ಜಾನುವಾರು ನಿರ್ವಹಣೆಗೆ ಅನುಕೂಲವಾಗಿದೆ </blockquote><span class="attribution">ಕುಶಾಲರಾವ ಘಾಳೆಪ್ಪ ಗುಮ್ಮಾದ ರೈತ</span></div>.<div><blockquote>ಜಾಬ್ ಕಾರ್ಡ್ ಹೊಂದಿರುವ ರೈತರು ಮನೆಯಲ್ಲಿ ದನ ಕರುಗಳಿದ್ದಲ್ಲಿ ತಮ್ಮ ಖಾಲಿ ನಿವೇಶನದಲ್ಲಿ ನರೇಗಾದಡಿ ದನದ ಕೊಟ್ಟಿಗೆ ನಿರ್ಮಿಸಿಕೊಳ್ಳಬಹುದು </blockquote><span class="attribution">ಕಿರಣ ಪಾಟೀಲ ಬೀದರ್ ತಾ.ಪಂ. ಇ.ಒ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಮ್ಮಾ(ಅಷ್ಟೂರ):</strong> ರೈತರಿಗಾಗಿಯೇ ಸರ್ಕಾರದ ಹಲವು ಯೋಜನೆಗಳಿವೆ. ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡರೆ, ರೈತರು ಆರ್ಥಿಕವಾಗಿ ಪ್ರಗತಿ ಸಾಧಿಸಬಹದು ಎಂಬುದಕ್ಕೆ ಬೀದರ್ ತಾಲ್ಲೂಕಿನ ಗುಮ್ಮಾ ಗ್ರಾಮದ ರೈತ ಕುಶಾಲರಾವ ಘಾಳೆಪ್ಪ ಉತ್ತಮ ನಿದರ್ಶನವಾಗಿದ್ದಾರೆ.</p>.<p>ಕುಶಾಲಾರಾವ ಅವರು, ನರೇಗಾ ಯೋಜನೆ ಅಡಿಯಲ್ಲಿ ₹57 ಸಾವಿರ ಧನಸಹಾಯ ಹಾಗೂ ಒಂದಿಷ್ಟು ವೈಯಕ್ತಿಕ ಹಣ ಖರ್ಚು ಮಾಡಿ, ಹೊಲದಲ್ಲಿ ದನದ ಕೊಟ್ಟಿಗೆಯನ್ನು ನಿರ್ಮಿಸಿಕೊಂಡಿದ್ದಾರೆ. ಇದರಿಂದಾಗಿ ಅವರಿಗೆ ಕೃಷಿಯೊಂದಿಗೆ ಹೈನುಗಾರಿಕೆಯನ್ನು ಉತ್ತಮವಾಗಿ ನಿರ್ವಹಿಸಲು ಅನುಕೂಲವಾಗಿದೆ. </p>.<p>ಸದ್ಯ ಅವರು 6 ಎಮ್ಮೆಗಳನ್ನು ಸಾಕಾಣಿಕೆ ಮಾಡುತ್ತಿದ್ದು, ನಿತ್ಯ 40 ಲೀಟರ್ ಹಾಲು ಸಂಗ್ರಹಿಸುತ್ತಾರೆ. ಜತೆಗೆ ಹಾಲನ್ನು ತಾವೇ ಮಾರಾಟ ಮಾಡುವ ಮೂಲಕ ಹೆಚ್ಚಿನ ಆದಾಯ ಪಡೆಯುತ್ತಿದ್ದು, ಇತರ ರೈತರಿಗೆ ಮಾದರಿಯಾಗಿದ್ದಾರೆ.</p>.<p>‘ನನ್ನ ಮನೆ ಹೊಲದಲ್ಲಿಯೇ ಇದೆ. ಮೊದಲು ಹೈನುರಾಸುಗಳನ್ನು ಬಯಲಲ್ಲಿಯೇ ಕಟ್ಟಬೇಕಿತ್ತು. ಬೇಸಿಗೆ ಹಾಗೂ ಮಳೆಗಾಲದಲ್ಲಿ ಅವುಗಳಿಗೆ ಬಿಸಿಲು ಮತ್ತು ಮಳೆಯಿಂದ ಸಮಸ್ಯೆಯಾಗುತ್ತಿತ್ತು. ಅಷ್ಟೂರ ಗ್ರಾಮ ಪಂಚಾಯಿತಿಯಿಂದ ನರೇಗಾದಡಿ ದನದ ಕೊಟ್ಟಿಗೆ ನಿರ್ಮಿಸಿಕೊಟ್ಟಿದ್ದರಿಂದ ಹೈನುಗಾರಿಕೆಗೆ ಸಹಾಯವಾಗಿದೆ ಎಂದು ಕುಶಾಲರಾವ ತಿಳಿಸಿದರು.</p>.<p>‘ನಾಲ್ಕು ಎಕರೆ ಜಮೀನಿದ್ದು, ಕೃಷಿ ಜತೆಗೆ ಹದಿನೈದು ವರ್ಷಗಳಿಂದ ಹೈನುಗಾರಿಕೆಯಲ್ಲೂ ತೊಡಗಿಸಿಕೊಂಡಿದ್ದೇನೆ. ಹೈನುಗಾರಿಕೆ ನಿರಂತರ ನನ್ನ ಕೈಹಿಡಿದಿದೆ. ಸದ್ಯ 6 ಎಮ್ಮೆಗಳಿದ್ದು, ಬೆಳಿಗ್ಗೆ ಹಾಗೂ ಸಂಜೆ ಸೇರಿ ಪ್ರತಿ ದಿನ 40 ಲೀಟರ್ ಹಾಲು ಸಂಗ್ರಹ ಆಗುತ್ತದೆ. ಬೀದರ್ನಲ್ಲಿ ನಾನೇ ಮನೆ ಮನೆಗೆ ತೆರಳಿ ಹಾಲು ಮಾರಾಟ ಮಾಡುತ್ತೇನೆ. ನಿತ್ಯ ಬರುವ ₹ 2,400 ರಲ್ಲಿ ₹ 800 ಖರ್ಚು ತೆಗೆದರೂ, ₹ 1,600 ಉಳಿಯುತ್ತದೆ. ಮಾಸಿಕ ₹ 48 ಸಾವಿರ ಆದಾಯ ಬರುತ್ತಿದೆ. ರೈತರು ಆರ್ಥಿಕ ಅಭಿವೃದ್ಧಿಗಾಗಿ ಕೃಷಿಯೊಂದಿಗೆ ಹೈನುಗಾರಿಕೆಯನ್ನೂ ಕೈಗೊಳ್ಳಬೇಕು. ಇದರಿಂದ ಆರ್ಥಿಕವಾಗಿ ಅಭಿವೃದ್ಧಿ ಸಾಧಿಸಬಹುದು’ ಎಂದು ಸಲಹೆ ಮಾಡಿದರು.</p>.<p>ನರೇಗಾದಡಿ ರೈತರು ದನದ ಕೊಟ್ಟಿಗೆ, ಕುರಿ, ಕೋಳಿ ಶೆಡ್, ಎರೆಹುಳು ಗೊಬ್ಬರ ತೊಟ್ಟಿ ನಿರ್ಮಿಸಿಕೊಂಡು, ತೋಟಗಾರಿಕೆ ಬೆಳೆ ಸಹ ಬೆಳೆದು ಆದಾಯ ಪಡೆಯಬಹುದು ಎಂದು ಬೀದರ್ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕಿರಣ ಪಾಟೀಲ ತಿಳಿಸಿದರು.</p>.<p> ದನದ ಕೊಟ್ಟಿಗೆಗೆ ₹57 ಸಾವಿರ ಸಹಾಯಧನ 6 ಎಮ್ಮೆ ಸಾಕುತ್ತಿರುವ ರೈತ ಕುಶಾಲರಾವ ಘಾಳೆಪ್ಪ ನಿತ್ಯ 40 ಲೀಟರ್ ಹಾಲು ಸಂಗ್ರಹ, ಮಾರಾಟ</p>.<div><blockquote>ಮಳೆಗಾಲದಲ್ಲಿ ಹೈನುಗಾರಿಕೆ ರಾಸುಗಳ ಸಂರಕ್ಷಣೆ ಕಷ್ಟವಾಗುತ್ತಿತ್ತು. ವಿಷ ಜಂತುಗಳ ಭಯ ಕಾಡುತ್ತಿತ್ತು. ನರೇಗಾದಡಿ ನಿರ್ಮಿಸಿದ ದನದ ಕೊಟ್ಟಿಗೆ ಜಾನುವಾರು ನಿರ್ವಹಣೆಗೆ ಅನುಕೂಲವಾಗಿದೆ </blockquote><span class="attribution">ಕುಶಾಲರಾವ ಘಾಳೆಪ್ಪ ಗುಮ್ಮಾದ ರೈತ</span></div>.<div><blockquote>ಜಾಬ್ ಕಾರ್ಡ್ ಹೊಂದಿರುವ ರೈತರು ಮನೆಯಲ್ಲಿ ದನ ಕರುಗಳಿದ್ದಲ್ಲಿ ತಮ್ಮ ಖಾಲಿ ನಿವೇಶನದಲ್ಲಿ ನರೇಗಾದಡಿ ದನದ ಕೊಟ್ಟಿಗೆ ನಿರ್ಮಿಸಿಕೊಳ್ಳಬಹುದು </blockquote><span class="attribution">ಕಿರಣ ಪಾಟೀಲ ಬೀದರ್ ತಾ.ಪಂ. ಇ.ಒ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>