ಬೈಕ್ ಮೇಲೆ ಹೋಗುತ್ತಿದ್ದಾಗ ಎದುರಿನಿಂದ ಬಂದ್ ಬುಲೇರೋ ವಾಹನ ಡಿಕ್ಕಿ ಆಗಿದ್ದರಿಂದ ಅಪಘಾತವಾಗಿದೆ. ಬೈಕ್ ಮೇಲೆ ಇಬ್ಬರು ಸಮೀಪದ ಬೆಳಮಗಿ ಗ್ರಾಮಕ್ಕೆ ಹಾಲು ಕೊಡುವುದಕ್ಕಾಗಿ ಹೋಗುತ್ತಿದ್ದರು ಎನ್ನಲಾಗಿದ್ದು, ಬೈಕ್ನಲ್ಲಿದ್ದ ಹಣಮಂತ ಎಂಬುವರಿಗೆ ಗಾಯವಾದ ಕಾರಣ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಈ ಬಗ್ಗೆ ಮಂಠಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.