ಜನವಾಡ(ಬೀದರ್ ತಾಲ್ಲೂಕು): ಬೀರಲಿಂಗೇಶ್ವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮ ನಿಮಿತ್ತ ಸೋಲಪುರ ಗ್ರಾಮದಲ್ಲಿ ಶುಕ್ರವಾರ ಅಲಂಕೃತ ರಥದಲ್ಲಿ ಬೀರಲಿಂಗೇಶ್ವರ ಮೂರ್ತಿ, ಕಳಸ ಹಾಗೂ ಮಾತೆ ಜಗದೀಶ್ವರಿ ಅವರ ಮೆರವಣಿಗೆ ನಡೆಯಿತು.
ಹನುಮಾನ ಮಂದಿರದಿಂದ ಆರಂಭವಾದ ಮೆರವಣಿಗೆ ಬೀರಲಿಂಗೇಶ್ವರ ದೇಗುಲಕ್ಕೆ ತಲುಪಿ ಸಮಾರೋಪಗೊಂಡಿತು.
ಕುಂಭ ಕಳಸ ಹೊತ್ತ ಮಹಿಳೆಯರು, ಡೊಳ್ಳು ಕುಣಿತ, ಭಜನೆ ಮೊದಲಾದ ಕಲಾ ತಂಡಗಳು ಮೆರವಣಿಗೆಯ ಮೆರುಗು ಹೆಚ್ಚಿಸಿದವು.
ಬಳಿಕ ಬೀರಲಿಂಗೇಶ್ವರ ಮಂದಿರದಲ್ಲಿ ವಿಶೇಷ ಪೂಜೆ, ಪ್ರಸಾದ ವಿತರಣೆ, ಗೋಪಾಲ್ ಮುತ್ತ್ಯಾ ಉಚ್ಚಾ ಅವರ ಸಾನಿಧ್ಯದಲ್ಲಿ ಪ್ರವಚನ ಕಾರ್ಯಕ್ರಮ ಜರುಗಿತು.
ಸಾಹಿತಿಗಳಾದ ಬಿ.ಎಂ. ಅಮರವಾಡಿ, ಸಂಜೀವಕುಮಾರ ಅತಿವಾಳೆ, ಮುಖಂಡರಾದ ರಮೇಶ ಪಾಟೀಲ ಸೋಲಪುರ, ವೀರಶೆಟ್ಟಿ ಪಾಟೀಲ ಮೊದಲಾದವರು ಇದ್ದರು.