ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಮೀಸಲಾತಿ ಕುರಿತ ರಾಹುಲ್‌ ಹೇಳಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ: ಪ್ರತಿಕೃತಿ ದಹನ

Published : 15 ಸೆಪ್ಟೆಂಬರ್ 2024, 13:18 IST
Last Updated : 15 ಸೆಪ್ಟೆಂಬರ್ 2024, 13:18 IST
ಫಾಲೋ ಮಾಡಿ
Comments
‘ನಾಲಿಗೆ ಮೇಲೆ ಹಿಡಿತ ಇರಲಿ’
‘ನಾಲಿಗೆ ಮೇಲೆ ಹಿಡಿತ ಇಡಬೇಕು. ಹುಮನಾಬಾದ್ ವಿಧಾನಸಭಾ ಕ್ಷೇತ್ರದ ಮತದಾರರಿಗೆ ಮಾಡಿರುವ ಅಪಮಾನವಿದು. ಶಾಸಕರು ಮನೆಯ ಆಳಲ್ಲ. ಸಂವಿದಾನಬದ್ಧವಾಗಿ ಆಯ್ಕೆಯಾದ‌ ಶಾಸಕನ ವಿರುದ್ಧ ಅಪಮಾನಕಾರಿ ಮಾತನಾಡಿದ್ದು ಸರಿಯಲ್ಲ. ಇದೇ ರೀತಿ ಮಾತನಾಡಿದಕ್ಕೆ ನಿಮ್ಮ ಸಹೋದರನನ್ನು (ರಾಜಶೇಖರ ಪಾಟೀಲ ಹುಮನಾಬಾದ್‌) ಮನೆಯಲ್ಲಿ ಕೂರಿಸಿದ್ದಾರೆ. ಮುಂದಿನ ದಿನಗಳಲ್ಲಿ ನಿಮಗೂ ಜನ ಮನೆಯಲ್ಲಿ ಕೂರಿಸುತ್ತಾರೆ’ ಎಂದು ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ ಅವರು ವಿಧಾನ ಪರಿಷತ್‌ ಸದಸ್ಯ ಡಾ. ಚಂದ್ರಶೇಖರ ಪಾಟೀಲ ವಿರುದ್ಧ ಹರಿಹಾಯ್ದರು.
‘ಖಂಡ್ರೆಯವರೇ ಸಹೋದರನ ಅರಣ್ಯ ಒತ್ತುವರಿ ತೆರವುಗೊಳಿಸಿ’
‘ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆಯವರು ರಾಜ್ಯದ ಅರಣ್ಯ ಭೂಮಿ ಒತ್ತುವರಿ ತೆರವಿಗೂ ಮುನ್ನ ಅವರ ಸಹೋದರನ ಅರಣ್ಯ ಭೂಮಿ ಒತ್ತುವರಿ ತೆರವುಗೊಳಿಸಬೇಕು. ಎಲ್ಲ ಕಡೆ ಸುಳ್ಳು ಹೇಳುತ್ತಾರೆ. ಅರಣ್ಯ ಭೂಮಿ ಒತ್ತುವರಿ ತೆರವುಗೊಳಿಸದಿದ್ದರೆ ನಿಮ್ಮ ವಿರುದ್ಧ ಕಾಲ್ನಡಿಗೆ ಹೋರಾಟ ನಡೆಸಲಾಗುವುದು. ಬಿಜೆಪಿಯಿಂದ ಖಂಡ್ರೆಯವರ ಮಾನ ಮರಾಜು ಹಾಕಲಾಗುವುದು’ ಎಂದು ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಎಚ್ಚರಿಕೆ ನೀಡಿದರು.
‘ರಸ್ತೆ ಗುಂಡಿ ಮುಚ್ಚದಿದ್ದರೆ ಗಿಡ ನೆಡಲಾಗುವುದು’
‘ಬೀದರ್‌ ನಗರ ಸೇರಿದಂತೆ ಎಲ್ಲ ಪ್ರಮುಖ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಒಂದು ವಾರದೊಳಗೆ ಮುಚ್ಚಬೇಕು. ಇಲ್ಲವಾದರೆ ಆ ಗುಂಡಿಗಳಲ್ಲಿ ಗಿಡಗಳನ್ನು ನೆಡುವುದರ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಲಾಗುವುದು’ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸೋಮನಾಥ ಪಾಟೀಲ ಎಚ್ಚರಿಕೆ ನೀಡಿದರು. ಅತಿವೃಷ್ಟಿಯಿಂದ ರೈತರ ಬೆಳೆ ಹಾಳಾಗಿದ್ದು, ಕೂಡಲೇ ಪರಿಹಾರ ಕೊಡಬೇಕು. ವಿಧಾನ ಪರಿಷತ್‌ ಸದಸ್ಯ ಡಾ. ಚಂದ್ರಶೇಖರ ಪಾಟೀಲ ಅವರು ಬಿಜೆಪಿ ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ ಅವರ ನಾಲಿಗೆ ಕಟ್‌ ಮಾಡುತ್ತೇನೆ ಎಂದು ಹೇಳಿದ್ದರೂ ಅವರ ವಿರುದ್ಧ ಪ್ರಕರಣ ದಾಖಲಿಸಿಲ್ಲ. ಆದರೆ, ಆಡಿಯೋ ಆಧರಿಸಿ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಬಂಧಿಸಲಾಗಿದೆ. ಇದು ನಾಚಿಕೆಗೇಡು ಎಂದು ಖಂಡಿಸಿದರು.
‘ದಲಿತರೇಕೆ ಬೀದಿಗಿಳಿಯುತ್ತಿಲ್ಲ’
‘ಮೀಸಲಾತಿ ಕುರಿತಂತೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಆಡಿರುವ ಮಾತುಗಳನ್ನು ವಿರೋಧಿಸಿ ದಲಿತರೇಕೆ ಬೀದಿಗಿಳಿಯುತ್ತಿಲ್ಲ. ದಲಿತರು ಬೀದಿಗಿಳಿದು ಹೋರಾಟ ನಡೆಸಿ, ಖಂಡಿಸಬೇಕು’ ಎಂದು ಬೀದರ್‌ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ಹೇಳಿದರು. ರಾಹುಲ್‌ ಗಾಂಧಿಯವರು ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಸಂವಿಧಾನದ ಪ್ರತಿ ಹಿಡಿದು ಅದರ ರಕ್ಷಣೆಯ ಮಾತುಗಳನ್ನು ಆಡಿದ್ದರು. ಆದರೆ, ವಿದೇಶದ ನೆಲದಲ್ಲಿ ಅದಕ್ಕೆ ವ್ಯತಿರಿಕ್ತವಾಗಿ ಮಾತನಾಡಿದ್ದಾರೆ. ಅದನ್ನು ಪ್ರತಿಭಟಿಸಬೇಕಾದುದು ಎಲ್ಲರ ಕರ್ತವ್ಯ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT