`ಬಸವಕಲ್ಯಾಣಕ್ಕೆ ಸಮೀಪವೇ ಇರುವ ಚುಳಕಿನಾಲಾ ಜಲಾಶಯದ ಸಮೀಪದ ಹೊಲಗಳಲ್ಲಿ ನೂರಾರು ಕೃಷ್ಣಮೃಗಗಳಿವೆ. ಅವು ಆಗಾಗ ಗ್ರಾಮಗಳಿಗೆ ಹಾಗೂ ರಸ್ತೆಗಳಿಗೆ ಬಂದು ಗಾಯಗೊಳ್ಳುತ್ತಿವೆ. ಆಸ್ಪತ್ರೆಗೆ ನುಗ್ಗಿದ್ದ ಕೃಷ್ಣಮೃಗ ಅಷ್ಟೇನು ಅಪಾಯದ ಸ್ಥಿತಿಯಲ್ಲಿ ಇರಲಿಲ್ಲ. ಆದರೂ, ಚಿಕಿತ್ಸೆ ನೀಡಿ ಅರಣ್ಯಕ್ಕೆ ಸಾಗಿಸಲಾಯಿತು’ ಎಂದು ಸಹಾಯಕ ಅರಣ್ಯಾಧಿಕಾರಿ ಸೈಯದ್ ಮುರ್ತುಜಾ ಖಾದ್ರಿ ತಿಳಿಸಿದ್ದಾರೆ.