ಬೀದರ್: ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸಂಸ್ಥೆ ಹಾಗೂ ಶರಣ ತತ್ವ ಪ್ರಸಾರ ಮತ್ತು ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ ಆಶ್ರಯದಲ್ಲಿ ನೌಬಾದ್ನ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ರಕ್ತದಾನ ಶಿಬಿರ ನಡೆಯಿತು.
ಚಿಂತಕಿ ಮಂಗಲಾ ಭಾಗವತ ಉದ್ಘಾಟಿಸಿದರು. ಪರಿಶಿಷ್ಠ ಪಂಗಡ ಇಲಾಖೆಯ ಉಪ ನಿರ್ದೇಶಕ ಪ್ರೇಮಸಾಗರ ದಾಂಡೆಕರ್,ಜಿಲ್ಲಾ ಕ್ಷಯ ರೋಗ ಮತ್ತು ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಕಾರ್ಯಕ್ರಮಾಧಿಕಾರಿ ಡಾ.ಶರಣಯ್ಯಾ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.
ಬಾಲಕರ ವಸತಿ ನಿಲಯದ ಮೇಲ್ವಿಚಾರಕ ಗೌತಮ, ಜಿಲ್ಲಾ ರಕ್ತ ಶೇಖರಣೆಯ ಕೆಂದ್ರದ ಡಾ.ಸತೀಶ, ಶರಣ ತತ್ವ ಸಂಸ್ಥೆಯ ಟಿ.ಐ ಕಾರ್ಯಕ್ರಮ ನಿರ್ದೇಶಕ ಬಸವರಾಜ ಸಿ, ಪ್ರದೀಪ ನಾಟೆಕರ್ ಪಾಲ್ಗೊಂಡಿದ್ದರು.
ಶಿವಕುಮಾರ ಬಿ ನಿರೂಪಿಸಿದರು. ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಮೇಲ್ವಿಚಾರಕ ಸೂರ್ಯಕಾಂತ ವಂದಿಸಿದರು.