<p><strong>ಔರಾದ್</strong>: ಇಲ್ಲಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸೇವಾ ಕೇಂದ್ರ ರಾಷ್ಟ್ರೀಯ ಕಿಸಾನ್ ದಿವಸ್ ಅಂಗವಾಗಿ ಶನಿವಾರ ಆಯೋಜಿಸಿದ ಶಿಬಿರದಲ್ಲಿ ಮಹಿಳೆಯರು ಸೇರಿದಂತೆ 68 ಜನ ರಕ್ತದಾನ ಮಾಡಿದ್ದಾರೆ.</p>.<p>ಸೇವಾ ಕೇಂದ್ರದ ಬಿ.ಕೆ. ರಾಜಯೋಗಿನಿ ಸುಹಾಸಿನಿ ಬಹೆನಜೀ, ಶಾಂತಾ ಬಹೆನಜೀ ಹಾಗೂ ಅಗ್ನಿಶಾಮಕ ಠಾಣೆಯ ನಾಲ್ವರು ಸಿಬ್ಬಂದಿ ಸೇರಿದಂತೆ 68 ಜನ ರಕ್ತದಾನ ಮಾಡುವ ಮೂಲಕ ಇತರರಿಗೆ ಪ್ರೇರಣೆಯಾಗಿದ್ದಾರೆ.</p>.<p>ಈಶ್ವರೀಯ ವಿಶ್ವವಿದ್ಯಾಲಯ ಸೇವಾ ಕೇಂದ್ರದ ಗಂಗಾರೆಡ್ಡಿ, ಶ್ರೀನಿವಾಸರೆಡ್ಡಿ, ದಿಲೀಪ ಔರಾದಕರ್, ಶಿವಕುಮಾರ ಗಿರಣೆ, ಸಂಗಪ್ಪ ಘಾಟೆ, ಅಮರರೆಡ್ಡಿ, ಮಹಾದೇವ ಅವರು ರಕ್ತದಾನ ಮಾಡಿದ್ದಾರೆ. </p>.<p>ಈ ದೇಶ ಕಾಪಾಡುವುದು ಸೈನಿಕ. ಹಾಗೆಯೇ ಈ ದೇಶಕ್ಕೆ ಅನ್ನ ಕೊಡುವವರು ರೈತರು. ಹೀಗಾಗಿ ನಾವು ಪ್ರತಿ ವರ್ಷ ಕಿಸಾನ್ ದಿವಸ್ ಆಚರಿಸುತ್ತೇವೆ. ಈ ಬಾರಿ ನಮ್ಮ ಸೇವಾ ಕೇಂದ್ರಕ್ಕೆ ಬರುವವರೆಲ್ಲರೂ ಸ್ವಯಂ ಪ್ರೇರಣೆಯಿಂದ ಬಂದು ರಕ್ತದಾನ ಮಾಡಿದ್ದು ಖುಷಿ ಕೊಟ್ಟಿದೆ ಎಂದು ಬಿ.ಕೆ. ರಾಜಯೋಗಿನಿ ಸುಹಾಸಿನಿ ಬಹೆನಜೀ ಹೇಳಿದರು.</p>.<p>ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ರೈತರನ್ನು ಗುರುತಿಸಿ ಅವರಿಗೆ ನಮ್ಮ ಆಶ್ರಮದ ವಹಿತಿಯಿಂದ ಸತ್ಕರಿಸಲಾಗುತ್ತದೆ ಎಂದು ಅವರು ತಿಳಿಸಿದರು. <br /><br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಔರಾದ್</strong>: ಇಲ್ಲಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸೇವಾ ಕೇಂದ್ರ ರಾಷ್ಟ್ರೀಯ ಕಿಸಾನ್ ದಿವಸ್ ಅಂಗವಾಗಿ ಶನಿವಾರ ಆಯೋಜಿಸಿದ ಶಿಬಿರದಲ್ಲಿ ಮಹಿಳೆಯರು ಸೇರಿದಂತೆ 68 ಜನ ರಕ್ತದಾನ ಮಾಡಿದ್ದಾರೆ.</p>.<p>ಸೇವಾ ಕೇಂದ್ರದ ಬಿ.ಕೆ. ರಾಜಯೋಗಿನಿ ಸುಹಾಸಿನಿ ಬಹೆನಜೀ, ಶಾಂತಾ ಬಹೆನಜೀ ಹಾಗೂ ಅಗ್ನಿಶಾಮಕ ಠಾಣೆಯ ನಾಲ್ವರು ಸಿಬ್ಬಂದಿ ಸೇರಿದಂತೆ 68 ಜನ ರಕ್ತದಾನ ಮಾಡುವ ಮೂಲಕ ಇತರರಿಗೆ ಪ್ರೇರಣೆಯಾಗಿದ್ದಾರೆ.</p>.<p>ಈಶ್ವರೀಯ ವಿಶ್ವವಿದ್ಯಾಲಯ ಸೇವಾ ಕೇಂದ್ರದ ಗಂಗಾರೆಡ್ಡಿ, ಶ್ರೀನಿವಾಸರೆಡ್ಡಿ, ದಿಲೀಪ ಔರಾದಕರ್, ಶಿವಕುಮಾರ ಗಿರಣೆ, ಸಂಗಪ್ಪ ಘಾಟೆ, ಅಮರರೆಡ್ಡಿ, ಮಹಾದೇವ ಅವರು ರಕ್ತದಾನ ಮಾಡಿದ್ದಾರೆ. </p>.<p>ಈ ದೇಶ ಕಾಪಾಡುವುದು ಸೈನಿಕ. ಹಾಗೆಯೇ ಈ ದೇಶಕ್ಕೆ ಅನ್ನ ಕೊಡುವವರು ರೈತರು. ಹೀಗಾಗಿ ನಾವು ಪ್ರತಿ ವರ್ಷ ಕಿಸಾನ್ ದಿವಸ್ ಆಚರಿಸುತ್ತೇವೆ. ಈ ಬಾರಿ ನಮ್ಮ ಸೇವಾ ಕೇಂದ್ರಕ್ಕೆ ಬರುವವರೆಲ್ಲರೂ ಸ್ವಯಂ ಪ್ರೇರಣೆಯಿಂದ ಬಂದು ರಕ್ತದಾನ ಮಾಡಿದ್ದು ಖುಷಿ ಕೊಟ್ಟಿದೆ ಎಂದು ಬಿ.ಕೆ. ರಾಜಯೋಗಿನಿ ಸುಹಾಸಿನಿ ಬಹೆನಜೀ ಹೇಳಿದರು.</p>.<p>ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ರೈತರನ್ನು ಗುರುತಿಸಿ ಅವರಿಗೆ ನಮ್ಮ ಆಶ್ರಮದ ವಹಿತಿಯಿಂದ ಸತ್ಕರಿಸಲಾಗುತ್ತದೆ ಎಂದು ಅವರು ತಿಳಿಸಿದರು. <br /><br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>