ಹುಮನಾಬಾದ್: ಮಳೆಗೆ ಸೇತುವೆ ಹಾನಿ, ಪರಿಶೀಲನೆ

ಹುಮನಾಬಾದ್: ಶನಿವಾರ ರಾತ್ರಿ ಸುರಿದ ಮಳೆಗೆ ತಾಲ್ಲೂಕಿನ ಹುಡಗಿ ಹಾಗೂ ಬೋತಗಿ ಗ್ರಾಮಗಳಲ್ಲಿ ರಸ್ತೆ, ಸೇತುವೆ ಹಾನಿ ಆಗಿರುವ ಸ್ಥಳಕ್ಕೆ ಶಾಸಕ ರಾಜಶೇಖರ ಪಾಟೀಲ ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು. ‘ತಾಲ್ಲೂಕಿನಲ್ಲಿ ಮಳೆಯಿಂದ ಹಾನಿ ಆಗಿರುವ ಮನೆ, ರೈತರ ಬೆಳೆ, ರಸ್ತೆ ಬಗ್ಗೆ ಶೀಘ್ರವಾಗಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ’ ಅಧಿಕಾರಿಗಳಿಗೆ ಸೂಚಿಸಿದರು.
ಹಳ್ಳಿಖೇಡ (ಬಿ) ಪುರಸಭೆ ಅಧ್ಯಕ್ಷ ಮಹಾಂತಯ್ಯ ತೀರ್ಥ, ಪ್ರಮುಖರಾದ ಶಿವರಾಜ ಗಂಗಶೆಟ್ಟಿ, ತಹಶೀಲ್ದಾರ್ ನಾಗಯ್ಯ ಹಿರೇಮಠ, ತಾ.ಪಂ. ಇಒ ಡಾ.ಗೋವಿಂದ, ಪಿಡಬ್ಲ್ಯುಡಿ ಎಇಇ ಶಶಿಧರ ಪಾಟೀಲ, ಜಿ.ಪಂ ಎಇಇ ವಾಮನರಾವ ಜಾಧವ, ಜೆಇಗಳಾದ ಶಿವಕುಮಾರ ಕೌಟಗೆ, ರಾಜಕುಮಾರ ಕಲಬುರ್ಗಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.