ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ನ ಬಿಎಸ್‌ಎಫ್ ಯೋಧ ಬಸವರಾಜ ಗಣಪತಿ ಆತ್ಮಹತ್ಯೆ

Last Updated 7 ಜುಲೈ 2021, 15:20 IST
ಅಕ್ಷರ ಗಾತ್ರ

ಔರಾದ್: ಭಾರತ-ಪಾಕಿಸ್ತಾನ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಔರಾದ್ ತಾಲ್ಲೂಕಿನ ಆಲೂರ (ಬಿ) ಗ್ರಾಮದ ಯೋಧ ಬಸವರಾಜ ಗಣಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಜುಲೈ 6ರಂದು ಸಂಜೆ 5.40ಕ್ಕೆ ತಮ್ಮ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತಕ್ಷಣ ಅವರನ್ನು ಪಂಜಾಬ್‌ನ ಫಜಿಲ್ಕಾ ಸೇನಾ ಆಸ್ಪತ್ರೆಗೆ ದಾಖಲಿಸಲಾಯಿತು. ಅಷ್ಟರಲ್ಲಿ ಕೊನೆಯುಸಿರೆಳೆದಿದ್ದರು ಎಂದು ಬಿಎಸ್‌ಎಫ್ ಡೆಪ್ಯುಟಿ ಕಮಾಂಡೆಂಟ್‌ ಸುರಿಂದರ್‌ಕುಮಾರ ಅವರು ಬೀದರ್‌ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಸಂದೇಶ ಕಳಿಸಿದ್ದಾರೆ.

ಯೋಧನ ಶವ ವಿಮಾನದ ಮೂಲಕ ಬೆಳಿಗ್ಗೆ ದೆಹಲಿಯಿಂದ ಹೈದರಾಬಾದ್‌ಗೆ ಬರಲಿದೆ. ಅಲ್ಲಿಂದ ಸೇನಾ ವಾಹನದಲ್ಲಿ
ಆಲೂರ್ (ಬಿ) ಗ್ರಾಮಕ್ಕೆ ಬರಲಿದೆ ಎಂದು ಸಂತಪುರ ಪಿಎಸ್‍ಐ ಸಿದ್ದಲಿಂಗ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT