ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಬಿಜೆಪಿ ಗೆದ್ದರೆ ಸಂವಿಧಾನ ಬದಲಾವಣೆ: ಸಚಿವ ಈಶ್ವರ ಬಿ. ಖಂಡ್ರೆ

Published : 29 ಏಪ್ರಿಲ್ 2024, 16:34 IST
Last Updated : 29 ಏಪ್ರಿಲ್ 2024, 16:34 IST
ಫಾಲೋ ಮಾಡಿ
Comments
‘ಕ್ರೈಸ್ತರ ಸೇವೆ ದೊಡ್ಡದು’
‘ಕ್ರೈಸ್ತರ ಸಮಾಜ ಸೇವೆ ಮತ್ತು ಜನಸೇವೆ ಅತ್ಯಂತ ದೊಡ್ಡದು’ ಎಂದು ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು. ಬೀದರ್ ಮಂಗಲಪೇಟ್‌ನ ಮೆಥೋಡಿಸ್ಟ್ ಚರ್ಚ್‌ಗೆ ಸೋಮವಾರ ಭೇಟಿ ನೀಡಿ ಪಾದ್ರಿ ಬಿಷಪ್ ಕರ್ಕರೆ ಹಾಗೂ ಅಲ್ಲಿ ಸೇರಿದವರೊಂದಿಗೆ ಮಾತನಾಡಿದ ಅವರು ‘ಆಸ್ಪತ್ರೆಗಳಲ್ಲಿ ಶುಶ್ರೂಷಕರಾಗಿ ಕೆಲಸ ಮಾಡುವ ಕ್ರೈಸ್ತ ಧರ್ಮೀಯ ನರ್ಸ್‌ಗಳು ರೋಗಿಗಳಿಗೆ ಮಾಡುತ್ತಿರುವ ಸೇವೆ ಅನುಪಮವಾದದ್ದು. ಅದೇ ರೀತಿ ನೂರಾರು ಕ್ರೈಸ್ತ ಮಿಷನರಿಗಳು ಈ ಸಮಾಜದ ಏಳಿಗೆಗೆ ಉತ್ತಮ ಕೊಡುಗೆ ನೀಡಿವೆ. ಜನಸೇವೆಯ ಮೂಲಕ ಸಾರ್ಥಕತೆ ಪಡೆದಿವೆ. ಮದರ್ ತೆರೇಸಾ ಅವರು ಈ ನಿಟ್ಟಿನಲ್ಲಿ ನಮ್ಮೆಲ್ಲರಿಗೂ ಆದರ್ಶಪ್ರಾಯವಾಗಿದ್ದಾರೆ. ಕನ್ನಡದ ಮೊಟ್ಟ ಮೊದಲ ನಿಘಂಟು ರಚಿಸಿದ ಫಾದರ್‌ ರೆವರೆಂಡ್ ಕಿಟೆಲ್‌ ಅವರು ಸಾಹಿತ್ಯ ಲೋಕಕ್ಕೆ ನೀಡಿರುವ ಕೊಡುಗೆ ಅವಿಸ್ಮರಣೀಯ. ಸೇವಾ ಮನೋಭಾವದಿಂದ ಕೆಲಸ ಮಾಡುವ ಈ ಸಮಾಜದ ಜನರು ಬೀದರ್‌ನಲ್ಲಿ ಸಹೋದರರಂತೆ ಬಾಳುತ್ತಿದ್ದಾರೆ’ ಎಂದರು. ಸಚಿವ ರಹೀಂ ಖಾನ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT