ಬೀದರ್: ಆರ್ಬಿಟ್ ಸಂಸ್ಥೆ ಹಾಗೂ ಸೀಮೋನ್ಡ್ಸ್ ಮೆಮೊರಿಯಲ್ ಎಜುಕೇಶನಲ್ ಸೊಸೈಟಿ ಫಾರ್ ರೂರಲ್ ಡೆವಲಪ್ಮೆಂಟ್ ವತಿಯಿಂದ ನಗರದ ಮಂಗಲಪೇಟೆಯಲ್ಲಿ ಕೋವಿಡ್ ಲಸಿಕಾಕರಣ ಹಾಗೂ ಆಹಾರಧಾನ್ಯ ಕಿಟ್ ವಿತರಣೆ ಕಾರ್ಯಕ್ರಮ ನಡೆಯಿತು.
ನಗರಸಭೆ ಸದಸ್ಯ ಎಂ.ಡಿ. ಗೌಸ್ ಲಸಿಕೆ ಪಡೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಿರ್ಗತಿಕರು, ಕೂಲಿ ಕಾರ್ಮಿಕರು ಹಾಗೂ ಬಡವರಿಗೆ ಆಹಾರಧಾನ್ಯ ಕಿಟ್ ವಿತರಿಸಲಾಯಿತು.
ಮುಖಂಡರಾದ ಫಿಲೋಮನ್ರಾಜ್ ಪ್ರಸಾದ್, ಜೋಷ್ವಾ ಜೋಸೆಫ್, ಅಭಿ ಕಾಳೆ, ಸೀಮೋನ್ಡ್ಸ್ ಮೆಮೊರಿಯಲ್ ಎಜುಕೇಶನಲ್ ಸೊಸೈಟಿ ಫಾರ್ ರೂರಲ್ ಡೆವಲಪ್ಮೆಂಟ್ ಅಧ್ಯಕ್ಷರಾದ ಶಿರೋಮಣಿ, ನಿರ್ದೇಶಕ ಹೆನ್ರಿ ಹನೋಕ್, ಸ್ನೇಹಾ ಕಲ್ಚರಲ್ ಟ್ರಸ್ಟ್ ಅಧ್ಯಕ್ಷ ಶ್ರೀಮಂತ ಸಪಾಟೆ, ವೀರೇಶ ಸ್ವಾಮಿ ಇದ್ದರು.