<p><strong>ಕಮಲನಗರ</strong>: ‘ಪಟ್ಟಣಕ್ಕೆ ಹೊರ ಜಿಲ್ಲೆಗಳಿಂದ ಮತ್ತು ಹೊರ ರಾಜ್ಯಗಳಿಂದ ಬರುವವರ ಮೇಲೆ ತೀವ್ರ ನಿಗಾವಹಿಸಲು ಚೆಕ್ಪೋಸ್ಟ್ಗಳನ್ನು ಸ್ಥಾಪಿಸಲಾಗಿದೆ’ ಎಂದು ಭಾಲ್ಕಿ ಡಿವೈಎಸ್ಪಿ ಡಾ.ದೇವರಾಜ ಹೇಳಿದರು.</p>.<p>ತಾಲ್ಲೂಕಿನ ಮಹಾರಾಷ್ಟ್ರ ಗಡಿ ಸಮೀಪ ಸ್ಥಾಪಿಸಿರುವ ಚೆಕ್ಪೋಸ್ಟ್ಗೆ ಭಾನುವಾರ ಭೇಟಿ ನೀಡಿ ಪರಿಶೀಲಿಸಿ, ಅವರು ಮಾತನಾಡಿದರು.</p>.<p>‘ಕೋವಿಡ್ ಎರಡನೇ ಅಲೆ ವೈರಸ್ ಸೋಂಕು ವೇಗವಾಗಿ ಹರಡುತ್ತಿದೆ. ಕಮಲನಗರ ಪಟ್ಟಣ ಪ್ರವೇಶಿಸುವ ವಾಹನ, ವ್ಯಕ್ತಿಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಆರೋಗ್ಯ ಪರಿಸ್ಥಿತಿ ಆಧರಿಸಿ ಹೋಂ ಕ್ವಾರಂಟೈನ್ ಅಥವಾ ಸಾಂಸ್ಥಿಕ ಕ್ವಾರಂಟೈನ್ ಕಳುಹಿಸುವುದು ಅನಿವಾರ್ಯವಾಗಿದೆ’ ಎಂದು ತಿಳಿಸಿದರು.</p>.<p>ಮುಂಬೈ, ಪುಣೆ, ಲಾತೂರು, ಉದಗೀರ, ದೇವಣಿ ದೇಗಲೂರು ಕಡೆಯಿಂದ ಬೀದರ್ಗೆ ಬರುವ ವಾಹನ ಸವಾರರು ಕಮಲನಗರ, ಮುರ್ಕಿ ಮತ್ತು ಚಿಕ್ಲಿ (ಯು), ಎಕಂಬಾ, ಲಖ್ಖಣಗಾಂವ್, ನಾರಾಯಣಪುರ ಚೆಕ್ಪೋಸ್ಟ್ಗಳ ಮೂಲಕ ಬರಬೇಕು.</p>.<p>ಕಮಲನಗರ ಚೆಕ್ಪೋಸ್ಟ್ ಮೂಲಕ ಭಾನುವಾರ ಸಂಜೆವರೆಗೂ 60ಕ್ಕೂ ಅಧಿಕ ಜನ ಹೊರರಾಜ್ಯದಿಂದ ಮರಳಿದ್ದು ಹೋಂ ಕ್ವಾರಂಟೈನ್ ಇರುವಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಸೂಚಿಸಿದ್ದಾರೆ.</p>.<p>ಸಿಪಿಐ ಪಾಲಕ್ಷಯ್ಯ ಹಿರೇಮಠ, ಪಿಎಸ್ಐ ನಂದಿನಿ ಎಸ್., ಅಜಯಸಿಂಗ್ ಠಾಕೋರ್, ಸ್ವಾಮಿ, ಆರೋಗ್ಯ ಕೇಂದ್ರ ಸಿಬ್ಬಂದಿ ಲಹು, ಚಿಕ್ಲಿ ಚೆಕ್ಪೋಸ್ಟ್ನಲ್ಲಿ ಹೋಕರ್ಣಾ ಪಿಎಸ್ಐ ರಮೇಶ ಟೋಕರೆ, ಎಎಸ್ಐ ಮಲ್ಲಿಕಾರ್ಜುನ ಬಿರಾದಾರ, ಎಎಸ್ಐ ಗುರುನಾಥ, ಕಾನ್ಸ್ಟೆಬಲ್ ಪರಶುರಾಮ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಮಲನಗರ</strong>: ‘ಪಟ್ಟಣಕ್ಕೆ ಹೊರ ಜಿಲ್ಲೆಗಳಿಂದ ಮತ್ತು ಹೊರ ರಾಜ್ಯಗಳಿಂದ ಬರುವವರ ಮೇಲೆ ತೀವ್ರ ನಿಗಾವಹಿಸಲು ಚೆಕ್ಪೋಸ್ಟ್ಗಳನ್ನು ಸ್ಥಾಪಿಸಲಾಗಿದೆ’ ಎಂದು ಭಾಲ್ಕಿ ಡಿವೈಎಸ್ಪಿ ಡಾ.ದೇವರಾಜ ಹೇಳಿದರು.</p>.<p>ತಾಲ್ಲೂಕಿನ ಮಹಾರಾಷ್ಟ್ರ ಗಡಿ ಸಮೀಪ ಸ್ಥಾಪಿಸಿರುವ ಚೆಕ್ಪೋಸ್ಟ್ಗೆ ಭಾನುವಾರ ಭೇಟಿ ನೀಡಿ ಪರಿಶೀಲಿಸಿ, ಅವರು ಮಾತನಾಡಿದರು.</p>.<p>‘ಕೋವಿಡ್ ಎರಡನೇ ಅಲೆ ವೈರಸ್ ಸೋಂಕು ವೇಗವಾಗಿ ಹರಡುತ್ತಿದೆ. ಕಮಲನಗರ ಪಟ್ಟಣ ಪ್ರವೇಶಿಸುವ ವಾಹನ, ವ್ಯಕ್ತಿಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಆರೋಗ್ಯ ಪರಿಸ್ಥಿತಿ ಆಧರಿಸಿ ಹೋಂ ಕ್ವಾರಂಟೈನ್ ಅಥವಾ ಸಾಂಸ್ಥಿಕ ಕ್ವಾರಂಟೈನ್ ಕಳುಹಿಸುವುದು ಅನಿವಾರ್ಯವಾಗಿದೆ’ ಎಂದು ತಿಳಿಸಿದರು.</p>.<p>ಮುಂಬೈ, ಪುಣೆ, ಲಾತೂರು, ಉದಗೀರ, ದೇವಣಿ ದೇಗಲೂರು ಕಡೆಯಿಂದ ಬೀದರ್ಗೆ ಬರುವ ವಾಹನ ಸವಾರರು ಕಮಲನಗರ, ಮುರ್ಕಿ ಮತ್ತು ಚಿಕ್ಲಿ (ಯು), ಎಕಂಬಾ, ಲಖ್ಖಣಗಾಂವ್, ನಾರಾಯಣಪುರ ಚೆಕ್ಪೋಸ್ಟ್ಗಳ ಮೂಲಕ ಬರಬೇಕು.</p>.<p>ಕಮಲನಗರ ಚೆಕ್ಪೋಸ್ಟ್ ಮೂಲಕ ಭಾನುವಾರ ಸಂಜೆವರೆಗೂ 60ಕ್ಕೂ ಅಧಿಕ ಜನ ಹೊರರಾಜ್ಯದಿಂದ ಮರಳಿದ್ದು ಹೋಂ ಕ್ವಾರಂಟೈನ್ ಇರುವಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಸೂಚಿಸಿದ್ದಾರೆ.</p>.<p>ಸಿಪಿಐ ಪಾಲಕ್ಷಯ್ಯ ಹಿರೇಮಠ, ಪಿಎಸ್ಐ ನಂದಿನಿ ಎಸ್., ಅಜಯಸಿಂಗ್ ಠಾಕೋರ್, ಸ್ವಾಮಿ, ಆರೋಗ್ಯ ಕೇಂದ್ರ ಸಿಬ್ಬಂದಿ ಲಹು, ಚಿಕ್ಲಿ ಚೆಕ್ಪೋಸ್ಟ್ನಲ್ಲಿ ಹೋಕರ್ಣಾ ಪಿಎಸ್ಐ ರಮೇಶ ಟೋಕರೆ, ಎಎಸ್ಐ ಮಲ್ಲಿಕಾರ್ಜುನ ಬಿರಾದಾರ, ಎಎಸ್ಐ ಗುರುನಾಥ, ಕಾನ್ಸ್ಟೆಬಲ್ ಪರಶುರಾಮ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>