‘ಮದುವೆ ಮಾಡುವವರು ಅನುಮತಿ ಪಡೆಯುವಾಗ ಕಡ್ಡಾಯ ವಾಗಿ ಮಾಸ್ಕ್ ಬಳಕೆ, ಸುರಕ್ಷಿತ ಅಂತರ ಕಾಪಾಡುವುದು ಹಾಗೂ ಸೀಮಿತ ಜನರಿಗೆ ಅವಕಾಶವೆಂದು ಲಿಖಿತ ರೂಪದಲ್ಲಿ ತಿಳಿಸಲಾಗುತ್ತದೆ. ಆದರೆ, ಅದು ಆದೇಶಕ್ಕೆ ಸೀಮಿತವಾಗುತ್ತಿದೆ. ಸಾರ್ವಜನಿಕರು ಯಾವುದೇ ನಿಯಮಗಳನ್ನು ಪಾಲಿಸದಿರುವುದು ಸೋಂಕು ಹೆಚ್ಚಳಕ್ಕೆ ಕಾರಣವಾಗಬಹುದು’ ಎಂದು ಹಿರಿಯರಾದ ಸತ್ತಾರ್ ಷಾ ಅನುಮಾನ ವ್ಯಕ್ತಪಡಿಸಿದ್ದಾರೆ.