ಬೀದರ್: ನಗರದ ಹಾರೂರಗೇರಿಯಲ್ಲಿ ಸೂರ್ಯಕಾಂತ ನಾಗಮಾರಪಳ್ಳಿ ಅಭಿಮಾನಿಗಳ ಸಂಘದಿಂದ ಕೋವಿಡ್ ಪ್ರಯುಕ್ತ 200 ಜನ ಬಡ ಕಲಾವಿದರು ಹಾಗೂ ಕೂಲಿ ಕಾರ್ಮಿಕರಿಗೆ ಆಹಾರಧಾನ್ಯ ಕಿಟ್ ವಿತರಿಸಲಾಯಿತು.
ಸಂಘದ ಅಧ್ಯಕ್ಷ ಬಕ್ಕಪ್ಪ ತಾರೆ, ಪ್ರಧಾನ ಕಾರ್ಯದರ್ಶಿ ಎಸ್.ಬಿ. ಕುಚಬಾಳ, ಪ್ರಶಾಂತ ಸ್ವಾರಳ್ಳಿಕರ್, ಮಲ್ಲಿಕಾರ್ಜುನ ಹೂಗಾರ ಇದ್ದರು.