ಭಾಲ್ಕಿ ಆರ್.ಟಿ.ಒ. ಮಹಮ್ಮದ್ ಜಾಫರ್ ಸಾದಿಕ್ ಮಾತನಾಡಿ, ಪ್ರತಿವರ್ಷ ನವೆಂಬರ್ ಮಾಸದಲ್ಲಿ ಈ ಅಭಿಯಾನ ನಡೆಸಲಾಗುತ್ತದೆ. ಬೀದರ್ ಜಿಲ್ಲೆಯ ಸಾರಿಗೆ ಇಲಾಖೆಯ ಕಚೇರಿಗಳಲ್ಲಿ ಹೊಸ ವಾಹನ ನೋಂದಣಿ ಹಾಗೂ ವಾಹನ ಚಾಲನಾ ಪತ್ರ ಪಡೆಯಲು ಬರುವ ಎಲ್ಲ ಅರ್ಜಿದಾರರಿಗೆ ಉಚಿತವಾಗಿ ಕದಂಬ, ಅರಳಿ, ಬಸವನಪಾದ, ಸಿಲ್ವರ್ ಓಕ್, ಹಲಸು ಮತ್ತು ಇತರೆ ಮರಗಳ ಸಸಿಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಇದುವರೆಗೆ ಸುಮಾರು 8 ಸಾವಿರ ಸಸಿಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.