ಬೀದರ್: ನಗರದ ಗಾಂಧಿ ಗಂಜ್ ಹಿರಿಯ ವ್ಯಾಪಾರಸ್ಥ ಕಲ್ಯಾಣಪ್ಪ ಐನಾಪುರ ಹಾಗೂ ಅವರ ಮಗ ಸುದೇಶಬಾಬು ಒಂದೇ ದಿನ ಮೃತಪಟ್ಟಿದ್ದಾರೆ.
ಕಲ್ಯಾಣಪ್ಪ ಐನಾಪುರ (91) ಅವರ ಮಗ ಸುದೇಶಬಾಬು (56) ಮಂಗಳವಾರ ನಸುಕಿನ ಜಾವ ಹೃದಯಾಘಾತದಿಂದ ನಿಧನರಾದರು. ಮೃತರಿಗೆ ಪತ್ನಿ, ಇಬ್ಬರು ಪುತ್ರಿಯರು, ಒಬ್ಬ ಪುತ್ರ ಇದ್ದಾನೆ. ಕಳೆದ ಕೆಲವು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕಲ್ಯಾಣಪ್ಪ ಅವರು ಸಂಜೆ ನಿಧನ ಹೊಂದಿದರು.
ಕಲ್ಯಾಣಪ್ಪ ಅವರ ಪತ್ನಿ ಈ ಹಿಂದೆಯೇ ನಿಧನರಾಗಿದ್ದಾರೆ. ಮೃತರಿಗೆ ಮೂರು ಜನ ಪುತ್ರರು, ಇಬ್ಬರು ಪುತ್ರಿಯರಿದ್ದಾರೆ. ತಾಲ್ಲೂಕಿನ ಯದಲಾಪುರದಲ್ಲಿ ಮಂಗಳವಾರ ರಾತ್ರಿ ಅಂತ್ಯಕ್ರಿಯೆ ನೆರವೇರಿತು ಎಂದು ಕುಟುಂಬ ಮೂಲಗಳು ತಿಳಿಸಿವೆ. ಒಂದೇ ದಿನ ಕುಟುಂಬದ ಇಬ್ಬರು ಸದಸ್ಯರನ್ನು ಕಳೆದುಕೊಂಡಿರುವ ಐನಾಪುರ ಪರಿವಾರದವರಿಗೆ ಬರಸಿಡಿಲು ಬಡಿದಂತಾಗಿದೆ.