<p><strong>ಖಟಕಚಿಂಚೋಳಿ (ಬೀದರ್ ಜಿಲ್ಲೆ): </strong>ಅಪ್ಪ ಅಂದ್ರೆ ಆಕಾಶ. ಸರ್ವಸ್ವ ಕೂಡ. ಆದರೆ, ನನ್ನ ಜೀವನದಲ್ಲಿ ಅಪ್ಪ ಅನ್ನೋ ಎರಡಕ್ಷರದ ಪದವೇ ಕಣ್ಮರೆ ಆಯಿತು. ಆ ದೇವರು ತಂದೆ ಇಲ್ಲದ ಮಕ್ಕಳೆಂಬ ಪಟ್ಟ ಕಟ್ಟಿದ.</p>.<p>ಏಪ್ರಿಲ್ನಲ್ಲಿ ತಂದೆ ಮಲ್ಲಿಕಾರ್ಜುನ ಪಾಟೀಲ (43) ಹೃದಯಾಘಾತ ದಿಂದ ನಿಧನರಾದರು. ತಾಯಿ, ತಂಗಿ ಹಾಗೂ ತಮ್ಮ ಮೂವರೂ ಅಜ್ಜನ ಮನೆಯಲ್ಲಿ ಇದ್ದೇವೆ. ಪ್ರತಿ ವರ್ಷ ಅಪ್ಪನ ದಿನವನ್ನು ಭರ್ಜರಿಯಾಗಿ ಆಚರಿಸುತ್ತಿದ್ದೇವು. ಆದರೆ, ಈ ವರ್ಷ ಅದು ನೆನಪು ಮಾತ್ರ.</p>.<p>ಅಪ್ಪ ನನ್ನನ್ನು ಮುದ್ದು ಮಾಡಿ ಶಾಲೆಗೆ ಕಳಿಸುತ್ತಿದ್ದ ಆ ದಿನಗಳು ಕಣ್ಣೆದುರಿಗೆ ಬರುತ್ತಿವೆ. ಸ್ವಾತಮ್ಮ ನನ್ನ ಮುದ್ದು ಮಗಳೇ ಎಂದು ಕರೆಯುತ್ತಿದ್ದ ಅವರ ಧ್ವನಿ ಕಿವಿಯಲ್ಲಿ ಗೊಂಯ್ಗೊಡುತ್ತಿದೆ.</p>.<p>ನನ್ನ ಅಜ್ಜ, ಅಜ್ಜಿ ಮೃದು ಸ್ವಭಾವದವರು.ಮಾತೃ ಹೃದಯ ಉಳ್ಳವರು. ನನ್ನ ಇಬ್ಬರು ಚಿಕ್ಕಪ್ಪಂದಿರು ಉದ್ಯಮಿಗಳು. ಪ್ರೀತಿ, ವಾತ್ಸಲ್ಯಕ್ಕೆ ಕೊರತೆ ಇಲ್ಲ. ಆದರೆ, ಅಪ್ಪನ ಸ್ಥಾನ ತುಂಬಲಾಗದು. ಅಪ್ಪ ಕಲಿಸಿದ ಶಿಸ್ತಿನ ಪಾಠ, ಧೈರ್ಯ ಹೇಗೆ ಮರೆಯೋಕೆ ಸಾಧ್ಯ?</p>.<p>ನನ್ನ ಗೆಳತಿಯರು ತಮ್ಮ ಅಪ್ಪಂದಿರ ಬಗ್ಗೆ ಪ್ರೀತಿಯಿಂದ ಹೇಳುವಾಗ, ನನ್ನ ಕಣ್ಣಲ್ಲಿ ಅಪ್ಪನ ನೆನಪುಗಳು ತುಂಬಿ ಕೊಳ್ಳುತ್ತವೆ.</p>.<p><strong>–ಸ್ವಾತಿ ಪಾಟೀಲ, <span class="Designate">9ನೇ ತರಗತಿ, ತೇಗಂಪುರ, ಭಾಲ್ಕಿ ತಾಲ್ಲೂಕು, ಬೀದರ್ ಜಿಲ್ಲೆ</span></strong></p>.<p><strong>ನಿರೂಪಣೆ: ಗಿರಿರಾಜ ವಾಲೆ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಖಟಕಚಿಂಚೋಳಿ (ಬೀದರ್ ಜಿಲ್ಲೆ): </strong>ಅಪ್ಪ ಅಂದ್ರೆ ಆಕಾಶ. ಸರ್ವಸ್ವ ಕೂಡ. ಆದರೆ, ನನ್ನ ಜೀವನದಲ್ಲಿ ಅಪ್ಪ ಅನ್ನೋ ಎರಡಕ್ಷರದ ಪದವೇ ಕಣ್ಮರೆ ಆಯಿತು. ಆ ದೇವರು ತಂದೆ ಇಲ್ಲದ ಮಕ್ಕಳೆಂಬ ಪಟ್ಟ ಕಟ್ಟಿದ.</p>.<p>ಏಪ್ರಿಲ್ನಲ್ಲಿ ತಂದೆ ಮಲ್ಲಿಕಾರ್ಜುನ ಪಾಟೀಲ (43) ಹೃದಯಾಘಾತ ದಿಂದ ನಿಧನರಾದರು. ತಾಯಿ, ತಂಗಿ ಹಾಗೂ ತಮ್ಮ ಮೂವರೂ ಅಜ್ಜನ ಮನೆಯಲ್ಲಿ ಇದ್ದೇವೆ. ಪ್ರತಿ ವರ್ಷ ಅಪ್ಪನ ದಿನವನ್ನು ಭರ್ಜರಿಯಾಗಿ ಆಚರಿಸುತ್ತಿದ್ದೇವು. ಆದರೆ, ಈ ವರ್ಷ ಅದು ನೆನಪು ಮಾತ್ರ.</p>.<p>ಅಪ್ಪ ನನ್ನನ್ನು ಮುದ್ದು ಮಾಡಿ ಶಾಲೆಗೆ ಕಳಿಸುತ್ತಿದ್ದ ಆ ದಿನಗಳು ಕಣ್ಣೆದುರಿಗೆ ಬರುತ್ತಿವೆ. ಸ್ವಾತಮ್ಮ ನನ್ನ ಮುದ್ದು ಮಗಳೇ ಎಂದು ಕರೆಯುತ್ತಿದ್ದ ಅವರ ಧ್ವನಿ ಕಿವಿಯಲ್ಲಿ ಗೊಂಯ್ಗೊಡುತ್ತಿದೆ.</p>.<p>ನನ್ನ ಅಜ್ಜ, ಅಜ್ಜಿ ಮೃದು ಸ್ವಭಾವದವರು.ಮಾತೃ ಹೃದಯ ಉಳ್ಳವರು. ನನ್ನ ಇಬ್ಬರು ಚಿಕ್ಕಪ್ಪಂದಿರು ಉದ್ಯಮಿಗಳು. ಪ್ರೀತಿ, ವಾತ್ಸಲ್ಯಕ್ಕೆ ಕೊರತೆ ಇಲ್ಲ. ಆದರೆ, ಅಪ್ಪನ ಸ್ಥಾನ ತುಂಬಲಾಗದು. ಅಪ್ಪ ಕಲಿಸಿದ ಶಿಸ್ತಿನ ಪಾಠ, ಧೈರ್ಯ ಹೇಗೆ ಮರೆಯೋಕೆ ಸಾಧ್ಯ?</p>.<p>ನನ್ನ ಗೆಳತಿಯರು ತಮ್ಮ ಅಪ್ಪಂದಿರ ಬಗ್ಗೆ ಪ್ರೀತಿಯಿಂದ ಹೇಳುವಾಗ, ನನ್ನ ಕಣ್ಣಲ್ಲಿ ಅಪ್ಪನ ನೆನಪುಗಳು ತುಂಬಿ ಕೊಳ್ಳುತ್ತವೆ.</p>.<p><strong>–ಸ್ವಾತಿ ಪಾಟೀಲ, <span class="Designate">9ನೇ ತರಗತಿ, ತೇಗಂಪುರ, ಭಾಲ್ಕಿ ತಾಲ್ಲೂಕು, ಬೀದರ್ ಜಿಲ್ಲೆ</span></strong></p>.<p><strong>ನಿರೂಪಣೆ: ಗಿರಿರಾಜ ವಾಲೆ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>