<p><strong>ಕಮಲನಗರ: </strong>ಪಟ್ಟಣದ ರೈಲ್ವೆ ನಿಲ್ದಾಣದಿಂದ ಹಾದು ಹೋಗುವ ಪ್ರತಿಯೊಂದು ಎಕ್ಸ್ಪ್ರೆಸ್ ರೈಲು ನಿಲುಗಡೆ ಮಾಡಬೇಕು ಎಂದು ನಾಗರಿಕ ಸೇವಾ ಸಮಿತಿ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.</p>.<p>ಮಂಗಳವಾರ ಈ ಕುರಿತು ಸಿಖಂದರಾಬಾದ್ ವಿಭಾಗೀಯ ರೈಲ್ವೆ ಅಧಿಕಾರಿಗೆ ಬರೆದ ಮನವಿ ಪತ್ರವನ್ನು ಭಾಲ್ಕಿ ರೈಲ್ವೆ ಸೆಕ್ಷನ್ ಅಧಿಕಾರಿ ರವಿಕುಮಾರ ಗುಪ್ತಾ ಅವರ ಮೂಲಕ ಸಲ್ಲಿಸಿದರು.</p>.<p>ಅಲ್ಲಮ ಪ್ರಭು ವೃತ್ತದಿಂದ ರೈಲು ನಿಲ್ದಾಣದವರೆಗೆ ನಾಗರಿಕ ಸೇವಾ ಸಮಿತಿ ಅಧ್ಯಕ್ಷ ದಿಲೀಪ ಮುಧಾಳೆ ನೇತೃತ್ವದಲ್ಲಿ ರ್ಯಾಲಿ ನಡೆಸಿದ ಪದಾಧಿಕಾರಿಗಳು, ರ್ಯಾಲಿಯಲ್ಲಿ ಕತ್ತೆಗಳ ಮುಂದೆ ಕೊಳಲು ಊದುವ ಮೂಲಕ ಗಮನ ಸೆಳೆದರು.</p>.<p>ದಿಲೀಪ ಮುಧಾಳೆ ಮಾತನಾಡಿ, ‘ಕಮಲನಗರವು ಔರಾದ್ ತಾಲ್ಲೂಕಿನ ಗಡಿಭಾಗದ ಏಕೈಕ ರೈಲು ನಿಲ್ದಾಣ ಆಗಿದೆ. ಈ ನಿಲ್ದಾಣದ ಮೂಲಕ ಹಾದು ಹೋಗುವ ಪ್ರತಿ ಎಕ್ಸ್ಪ್ರೆಸ್ ರೈಲು ನಿಲ್ಲಿಸಬೇಕು’ ಎಂದು ಒತ್ತಾಯಿಸಿದರು.</p>.<p>‘ಕೋವಿಡ್-19 ಹಿನ್ನಲೆಯಲ್ಲಿ ಕೆಲ ತಿಂಗಳು ರೈಲು ಸಂಚಾರ ಸ್ಥಗಿತಗೊಂಡಿತ್ತು. ಇದೀಗ ರೈಲುಗಳ ಸಂಚಾರ ಮತ್ತೆ ಆರಂಭಗೊಂಡಿದೆ. ಕಮಲನಗರಕ್ಕೆ ಉದಗೀರ 20 ಕಿ.ಮೀ ದೂರ ಇದೆ. ಉದಗೀರದಿಂದ 20 ಕಿ.ಮೀ ದೂರದಲ್ಲಿ 4 ಸ್ಥಳದಲ್ಲಿ ರೈಲುಗಳು ನಿಲುಗಡೆಯಾಗುತ್ತವೆ. ಆದರೆ, ಕಮಲನಗರದಲ್ಲಿ ಯಾಕೆ ರೈಲುಗಳು ನಿಲುಗಡೆ ಇಲ್ಲ’ ಎಂದು ಪ್ರಶ್ನಿಸಿದರು.</p>.<p>ಈ ಕುರಿತು ಸಿಖಂದರಾಬಾದ್ ವಿಭಾಗೀಯ ಅಧಿಕಾರಿಗೆ ಕರೆ ಮಾಡಿದ ರವಿಕುಮಾರ ಗುಪ್ತಾ ಅವರು, ‘ಸದ್ಯ ಶಿರೋಬೆಸ್ ಮಿಟಿಂಗ್ನಲ್ಲಿ ಪ್ರಸ್ತಾವ ಇಡಲಾಗಿದೆ. ಏಪ್ರಿಲ್ 1ರವರೆಗೆ ಬೇಡಿಕೆ ಈಡೇರಿಸುವುದಾಗಿ’ ಭರವಸೆ ನೀಡಿದರು.</p>.<p>ಅದಕ್ಕೆ ಒಪ್ಪದ ಪ್ರತಿಭಟನಾಕಾರರು ತಕ್ಷಣವೇ ನಾಂದೇಡ್-ಬೆಂಗಳೂರು, ಮುಂಬೈ-ಬೀದರ್, ಔರಾಂಗಾಬಾದ್, ಹೈದ್ರಾಬಾದ್, ಪುಣೆ-ಹೈದ್ರಾಬಾದ್-ಔರಂಗಾಬಾದ್-ರೇಣಿಗುಂಟಾ ಮತ್ತು ಮುಂಬೈ-ಬೀದರ್ ರೈಲುಗಳು ನಿಲುಗಡೆಯಾಗಬೇಕು. ಈ ಎಲ್ಲ ಸಾರ್ವಜನಿಕರ ನ್ಯಾಯಯುತ ಬೇಡಿಕೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ತಾಲ್ಲೂಕಿನ ವಿವಿಧ ಸಂಘಟನೆ ನೇತೃತ್ವದಲ್ಲಿ ರೈಲ್ವೆ ಹಳಿಯ ಮೇಲೆ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.</p>.<p>ಶ್ರೀರಾಮ ಮಿನ್ನರ್, ಸಂತೋಷ ಚಿಗಲೆ, ಎನ್.ಎಸ್. ಜನಗೌಡ್, ಎಸ್.ಕೆ.ಮೀನಾರ, ವಿ.ಎಸ್.ಥೋರೆ, ಚಿದಾನಂದ ಮಠ, ರಾಜಕುಮಾರ ಚಿಕ್ಲೆ, ಶಿವಾನಂದ ರಾಠೋಡ್, ಜಿ.ಎನ್.ದಾಬಕೆಕರ್ ಭೇಟಿ ನೀಡಿದರು.</p>.<p>ರೈತ ಸಂಘ ತಾಲ್ಲೂಕು ಘಟಕದ ಅಧ್ಯಕ್ಷ ಪ್ರವೀಣ ಕುಲಕರ್ಣಿ, ಭೀಮರಾವ ಕಣಜಿ, ಶಾಂತಕುಮಾರ ಬಿರಾದಾರ, ಜನಾರ್ದನ ಸಾವರ್ಗೆಕರ್, ಗಣಪತಿ ಆರ್.ಡಿ, ವೈಜನಾಥ ವಡ್ಡೆ, ಸಿದ್ರಾಮೇಶ್ವರ, ಖತಗಾಂವ್ ವಿಶ್ವನಾಥ, ವಿಠ್ಠಲರಾವ, ಸುಭಾಷ ಇದ್ದರು.</p>.<p>ಕತ್ತೆಗಳ ಬೃಹತ್ ಪ್ರತಿಭಟನಾ ರ್ಯಾಲಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸಿಪಿಐ ಪಾಲಕ್ಷಯ್ಯ ಹಿರೇಮಠ ಮಾರ್ಗದರ್ಶನದಲ್ಲಿ ಪಿಎಸ್ಐ ನಂದಿನಿ ಎಸ್. ಅವರ ನೇತೃತ್ವದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಮಲನಗರ: </strong>ಪಟ್ಟಣದ ರೈಲ್ವೆ ನಿಲ್ದಾಣದಿಂದ ಹಾದು ಹೋಗುವ ಪ್ರತಿಯೊಂದು ಎಕ್ಸ್ಪ್ರೆಸ್ ರೈಲು ನಿಲುಗಡೆ ಮಾಡಬೇಕು ಎಂದು ನಾಗರಿಕ ಸೇವಾ ಸಮಿತಿ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.</p>.<p>ಮಂಗಳವಾರ ಈ ಕುರಿತು ಸಿಖಂದರಾಬಾದ್ ವಿಭಾಗೀಯ ರೈಲ್ವೆ ಅಧಿಕಾರಿಗೆ ಬರೆದ ಮನವಿ ಪತ್ರವನ್ನು ಭಾಲ್ಕಿ ರೈಲ್ವೆ ಸೆಕ್ಷನ್ ಅಧಿಕಾರಿ ರವಿಕುಮಾರ ಗುಪ್ತಾ ಅವರ ಮೂಲಕ ಸಲ್ಲಿಸಿದರು.</p>.<p>ಅಲ್ಲಮ ಪ್ರಭು ವೃತ್ತದಿಂದ ರೈಲು ನಿಲ್ದಾಣದವರೆಗೆ ನಾಗರಿಕ ಸೇವಾ ಸಮಿತಿ ಅಧ್ಯಕ್ಷ ದಿಲೀಪ ಮುಧಾಳೆ ನೇತೃತ್ವದಲ್ಲಿ ರ್ಯಾಲಿ ನಡೆಸಿದ ಪದಾಧಿಕಾರಿಗಳು, ರ್ಯಾಲಿಯಲ್ಲಿ ಕತ್ತೆಗಳ ಮುಂದೆ ಕೊಳಲು ಊದುವ ಮೂಲಕ ಗಮನ ಸೆಳೆದರು.</p>.<p>ದಿಲೀಪ ಮುಧಾಳೆ ಮಾತನಾಡಿ, ‘ಕಮಲನಗರವು ಔರಾದ್ ತಾಲ್ಲೂಕಿನ ಗಡಿಭಾಗದ ಏಕೈಕ ರೈಲು ನಿಲ್ದಾಣ ಆಗಿದೆ. ಈ ನಿಲ್ದಾಣದ ಮೂಲಕ ಹಾದು ಹೋಗುವ ಪ್ರತಿ ಎಕ್ಸ್ಪ್ರೆಸ್ ರೈಲು ನಿಲ್ಲಿಸಬೇಕು’ ಎಂದು ಒತ್ತಾಯಿಸಿದರು.</p>.<p>‘ಕೋವಿಡ್-19 ಹಿನ್ನಲೆಯಲ್ಲಿ ಕೆಲ ತಿಂಗಳು ರೈಲು ಸಂಚಾರ ಸ್ಥಗಿತಗೊಂಡಿತ್ತು. ಇದೀಗ ರೈಲುಗಳ ಸಂಚಾರ ಮತ್ತೆ ಆರಂಭಗೊಂಡಿದೆ. ಕಮಲನಗರಕ್ಕೆ ಉದಗೀರ 20 ಕಿ.ಮೀ ದೂರ ಇದೆ. ಉದಗೀರದಿಂದ 20 ಕಿ.ಮೀ ದೂರದಲ್ಲಿ 4 ಸ್ಥಳದಲ್ಲಿ ರೈಲುಗಳು ನಿಲುಗಡೆಯಾಗುತ್ತವೆ. ಆದರೆ, ಕಮಲನಗರದಲ್ಲಿ ಯಾಕೆ ರೈಲುಗಳು ನಿಲುಗಡೆ ಇಲ್ಲ’ ಎಂದು ಪ್ರಶ್ನಿಸಿದರು.</p>.<p>ಈ ಕುರಿತು ಸಿಖಂದರಾಬಾದ್ ವಿಭಾಗೀಯ ಅಧಿಕಾರಿಗೆ ಕರೆ ಮಾಡಿದ ರವಿಕುಮಾರ ಗುಪ್ತಾ ಅವರು, ‘ಸದ್ಯ ಶಿರೋಬೆಸ್ ಮಿಟಿಂಗ್ನಲ್ಲಿ ಪ್ರಸ್ತಾವ ಇಡಲಾಗಿದೆ. ಏಪ್ರಿಲ್ 1ರವರೆಗೆ ಬೇಡಿಕೆ ಈಡೇರಿಸುವುದಾಗಿ’ ಭರವಸೆ ನೀಡಿದರು.</p>.<p>ಅದಕ್ಕೆ ಒಪ್ಪದ ಪ್ರತಿಭಟನಾಕಾರರು ತಕ್ಷಣವೇ ನಾಂದೇಡ್-ಬೆಂಗಳೂರು, ಮುಂಬೈ-ಬೀದರ್, ಔರಾಂಗಾಬಾದ್, ಹೈದ್ರಾಬಾದ್, ಪುಣೆ-ಹೈದ್ರಾಬಾದ್-ಔರಂಗಾಬಾದ್-ರೇಣಿಗುಂಟಾ ಮತ್ತು ಮುಂಬೈ-ಬೀದರ್ ರೈಲುಗಳು ನಿಲುಗಡೆಯಾಗಬೇಕು. ಈ ಎಲ್ಲ ಸಾರ್ವಜನಿಕರ ನ್ಯಾಯಯುತ ಬೇಡಿಕೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ತಾಲ್ಲೂಕಿನ ವಿವಿಧ ಸಂಘಟನೆ ನೇತೃತ್ವದಲ್ಲಿ ರೈಲ್ವೆ ಹಳಿಯ ಮೇಲೆ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.</p>.<p>ಶ್ರೀರಾಮ ಮಿನ್ನರ್, ಸಂತೋಷ ಚಿಗಲೆ, ಎನ್.ಎಸ್. ಜನಗೌಡ್, ಎಸ್.ಕೆ.ಮೀನಾರ, ವಿ.ಎಸ್.ಥೋರೆ, ಚಿದಾನಂದ ಮಠ, ರಾಜಕುಮಾರ ಚಿಕ್ಲೆ, ಶಿವಾನಂದ ರಾಠೋಡ್, ಜಿ.ಎನ್.ದಾಬಕೆಕರ್ ಭೇಟಿ ನೀಡಿದರು.</p>.<p>ರೈತ ಸಂಘ ತಾಲ್ಲೂಕು ಘಟಕದ ಅಧ್ಯಕ್ಷ ಪ್ರವೀಣ ಕುಲಕರ್ಣಿ, ಭೀಮರಾವ ಕಣಜಿ, ಶಾಂತಕುಮಾರ ಬಿರಾದಾರ, ಜನಾರ್ದನ ಸಾವರ್ಗೆಕರ್, ಗಣಪತಿ ಆರ್.ಡಿ, ವೈಜನಾಥ ವಡ್ಡೆ, ಸಿದ್ರಾಮೇಶ್ವರ, ಖತಗಾಂವ್ ವಿಶ್ವನಾಥ, ವಿಠ್ಠಲರಾವ, ಸುಭಾಷ ಇದ್ದರು.</p>.<p>ಕತ್ತೆಗಳ ಬೃಹತ್ ಪ್ರತಿಭಟನಾ ರ್ಯಾಲಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸಿಪಿಐ ಪಾಲಕ್ಷಯ್ಯ ಹಿರೇಮಠ ಮಾರ್ಗದರ್ಶನದಲ್ಲಿ ಪಿಎಸ್ಐ ನಂದಿನಿ ಎಸ್. ಅವರ ನೇತೃತ್ವದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>