ಭಾಲ್ಕಿ ಹಿರೇಮಠ ಸಂಸ್ಥಾನದ ಡಾ. ಬಸವಲಿಂಗ ಪಟ್ಟದ್ದೇವರು ನೇತೃತ್ವ ವಹಿಸುವರು. ಹುಲಸೂರಿನ ಶಿವಾನಂದ ಸ್ವಾಮೀಜಿ, ಖಾನಾಪುರ ಆನಂದ ಆಶ್ರಮದ ಜಗದೀಶ್ವರಿ ಮಾತೆ, ಹಲಬರ್ಗಾದ ಹಾವಗಿಲಿಂಗೇಶ್ವರ ಶಿವಾಚಾರ್ಯ, ಮೈಲಾರ ಮಲ್ಲಣ್ಣ ದೇವಸ್ಥಾನದ ಅರ್ಚಕ ಬಸಪ್ಪ ಎಂ. ಹಿರಿವಗ್ಗೆ, ಗೋರಚಿಂಚೋಳಿಯ ಸಿದ್ಧರಾಮೇಶ್ವರ ಪಟ್ಟದ್ದೇವರು, ಖಟಕಚಿಂಚೋಳಿಯ ಬಸವಲಿಂಗ ಸ್ವಾಮೀಜಿ, ಬೀದರ್ನ ಗುರುದ್ವಾರದ ಗ್ಯಾನಿ ದರ್ಬಾರಾಸಿಂಗ್, ಆಣದೂರಿನ ಭಂತೆ ಜ್ಞಾನಸಾಗರ ಥೆರೋ, ಹಲಬರ್ಗಾದ ಅನುಗ್ರಹ ಶಾಲೆಯ ಪ್ರಸನ್ನಕುಮಾರ, ಬೀದರ್ನ ಸೂಫಿ ಸೈಯದ್ ಸಾಜಿದ್ ಅಲಿ ಷಾ ಅಲ್ ಹುಸೈನಿ ಸಮ್ಮುಖ ವಹಿಸುವರು.