<p><strong>ಬೀದರ್</strong>: ಗಣೇಶ ಮೂರ್ತಿಗಳ ಮೆರವಣಿಗೆ ವೇಳೆ ಡಿ.ಜೆ ಅನ್ನು ಬಂದ್ ಮಾಡಿಸಿದ ಪೊಲೀಸರ ಕ್ರಮವನ್ನು ವಿರೋಧಿಸಿ ವಿವಿಧ ಗಣೇಶ ಮಂಡಳಿಯ ಕಾರ್ಯಕರ್ತರು ಗಣೇಶನ ಮೂರ್ತಿಗಳ ಮೆರವಣಿಗೆ ನಿಲ್ಲಿಸಿ, ಬುಧವಾರ ಮಧ್ಯರಾತ್ರಿ ನಡುರಸ್ತೆಯಲ್ಲೇ ಕುಳಿತು ಧರಣಿ ನಡೆಸಿದರು.</p>.<p>ರಾತ್ರಿ 12 ಗಂಟೆ ಕಳೆದಂತೆ ಪೊಲೀಸರು ಆಯಾ ಗಣೇಶ ಮಂಡಳಿಯವರ ಗಣೇಶನ ಮೂರ್ತಿಗಳ ಜೊತೆಗಿದ್ದ ಡಿ.ಜೆಗಳನ್ನು ಬಂದ್ ಮಾಡಿಸಿದ್ದರು.</p>.<p>ಪೊಲೀಸರ ಈ ನಡೆ ವಿರುದ್ಧ ಕೆರಳಿದ ಮಂಡಳಿಯ ಕಾರ್ಯಕರ್ತರು ಮೆರವಣಿಗೆ ಅರ್ಧದಲ್ಲಿಯೇ ಕೈಬಿಟ್ಟು, ವಾಹನಗಳನ್ನು ಬಂದ್ ಮಾಡಿಸಿ ನಡುರಸ್ತೆಯಲ್ಲೇ ಧರಣಿ ಕುಳಿತರು. ಪೊಲೀಸರ ವಿರುದ್ಧ ಘೋಷಣೆಗಳನ್ನೂ ಕೂಗಿದರು. ‘ಜೈಶ್ರೀರಾಮ’ ಎಂದು ಘೋಷಣೆ ಹಾಕಿದರು. ಶ್ರೀರಾಮನ ಭಜನೆ ಮಾಡಿದರು.</p>.<p>ಪರಿಸ್ಥಿತಿಯನ್ನು ಗಮನಿಸಿ ಸ್ಥಳಕ್ಕೆ ಧಾವಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು, ಗಣೇಶ ಮಹಾ ಮಂಡಳಿಯ ಪ್ರಮುಖರ ಜೊತೆಗೆ ನಡೆಸಿದ ಸಂಧಾನ ಫಲಿಸಲಿಲ್ಲ. ಪೊಲೀಸರು ಕೂಡ ಪಟ್ಟು ಸಡಿಲಿಸಲಿಲ್ಲ. ಹೀಗಾಗಿ, ತಡರಾತ್ರಿ 3ರವರೆಗೆ ಅನಿಶ್ಚಿತ ವಾತಾವರಣ ಮುಂದುವರಿಯಿತು.</p>.<p>ಆ ನಂತರ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಯಿತು. ಬಳಿಕ ಒಂದೊಂದೆ ಗಣೇಶ ಮಂಡಳಿಯ ಡಿ.ಜೆಗಳನ್ನು ಸ್ಥಳದಿಂದ ಕಳಿಸಿ, ಮೂರ್ತಿಗಳನ್ನು ವಿಸರ್ಜನೆಗೆ ಕೊಂಡೊಯ್ಯಬೇಕು ಎಂದು ಪೊಲೀಸರು ಸೂಚಿಸಿದರು.</p>.<p>ಇದರಿಂದ ಬೇಸರಗೊಂಡ ಗಣೇಶ ಮಂಡಳಿಯವರು ಅಲ್ಲಿಂದ ನಿರ್ಗಮಿಸಿದರು. ನಸುಕಿನ ಜಾವ 4 ಗಂಟೆಗೆ ವಾತಾವರಣ ಸಂಪೂರ್ಣ ತಿಳಿಯಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್</strong>: ಗಣೇಶ ಮೂರ್ತಿಗಳ ಮೆರವಣಿಗೆ ವೇಳೆ ಡಿ.ಜೆ ಅನ್ನು ಬಂದ್ ಮಾಡಿಸಿದ ಪೊಲೀಸರ ಕ್ರಮವನ್ನು ವಿರೋಧಿಸಿ ವಿವಿಧ ಗಣೇಶ ಮಂಡಳಿಯ ಕಾರ್ಯಕರ್ತರು ಗಣೇಶನ ಮೂರ್ತಿಗಳ ಮೆರವಣಿಗೆ ನಿಲ್ಲಿಸಿ, ಬುಧವಾರ ಮಧ್ಯರಾತ್ರಿ ನಡುರಸ್ತೆಯಲ್ಲೇ ಕುಳಿತು ಧರಣಿ ನಡೆಸಿದರು.</p>.<p>ರಾತ್ರಿ 12 ಗಂಟೆ ಕಳೆದಂತೆ ಪೊಲೀಸರು ಆಯಾ ಗಣೇಶ ಮಂಡಳಿಯವರ ಗಣೇಶನ ಮೂರ್ತಿಗಳ ಜೊತೆಗಿದ್ದ ಡಿ.ಜೆಗಳನ್ನು ಬಂದ್ ಮಾಡಿಸಿದ್ದರು.</p>.<p>ಪೊಲೀಸರ ಈ ನಡೆ ವಿರುದ್ಧ ಕೆರಳಿದ ಮಂಡಳಿಯ ಕಾರ್ಯಕರ್ತರು ಮೆರವಣಿಗೆ ಅರ್ಧದಲ್ಲಿಯೇ ಕೈಬಿಟ್ಟು, ವಾಹನಗಳನ್ನು ಬಂದ್ ಮಾಡಿಸಿ ನಡುರಸ್ತೆಯಲ್ಲೇ ಧರಣಿ ಕುಳಿತರು. ಪೊಲೀಸರ ವಿರುದ್ಧ ಘೋಷಣೆಗಳನ್ನೂ ಕೂಗಿದರು. ‘ಜೈಶ್ರೀರಾಮ’ ಎಂದು ಘೋಷಣೆ ಹಾಕಿದರು. ಶ್ರೀರಾಮನ ಭಜನೆ ಮಾಡಿದರು.</p>.<p>ಪರಿಸ್ಥಿತಿಯನ್ನು ಗಮನಿಸಿ ಸ್ಥಳಕ್ಕೆ ಧಾವಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು, ಗಣೇಶ ಮಹಾ ಮಂಡಳಿಯ ಪ್ರಮುಖರ ಜೊತೆಗೆ ನಡೆಸಿದ ಸಂಧಾನ ಫಲಿಸಲಿಲ್ಲ. ಪೊಲೀಸರು ಕೂಡ ಪಟ್ಟು ಸಡಿಲಿಸಲಿಲ್ಲ. ಹೀಗಾಗಿ, ತಡರಾತ್ರಿ 3ರವರೆಗೆ ಅನಿಶ್ಚಿತ ವಾತಾವರಣ ಮುಂದುವರಿಯಿತು.</p>.<p>ಆ ನಂತರ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಯಿತು. ಬಳಿಕ ಒಂದೊಂದೆ ಗಣೇಶ ಮಂಡಳಿಯ ಡಿ.ಜೆಗಳನ್ನು ಸ್ಥಳದಿಂದ ಕಳಿಸಿ, ಮೂರ್ತಿಗಳನ್ನು ವಿಸರ್ಜನೆಗೆ ಕೊಂಡೊಯ್ಯಬೇಕು ಎಂದು ಪೊಲೀಸರು ಸೂಚಿಸಿದರು.</p>.<p>ಇದರಿಂದ ಬೇಸರಗೊಂಡ ಗಣೇಶ ಮಂಡಳಿಯವರು ಅಲ್ಲಿಂದ ನಿರ್ಗಮಿಸಿದರು. ನಸುಕಿನ ಜಾವ 4 ಗಂಟೆಗೆ ವಾತಾವರಣ ಸಂಪೂರ್ಣ ತಿಳಿಯಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>