ದೇಗುಲಗಳಿಗೆ ಬಂದ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಇತ್ತು. ಬಹುತೇಕ ಕಡೆ ಅನ್ನ ಸಂತರ್ಪಣೆ ನಡೆಯಿತು. ಗ್ರಾಮೀಣ ಭಾಗಗಳಲ್ಲಿಯೂ ಹನುಮ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ದೇಗುಲಗಳನ್ನು ಸಿಂಗರಿಸಿ, ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಮಂಗಲಗಿ, ಮಿನಕೇರಾ, ಮುತ್ತಂಗಿ, ಕುಡಂಬಲ್, ವಳಖಿಂಡಿ, ಇಟಗಾ ಗ್ರಾಮಗಳಲ್ಲಿಯ ಹನುಮ ದೇಗುಲಗಳಲ್ಲಿ ವಿಶೇಷ ಪೂಜೆ, ಅಭಿಷೇಕ, ಅನ್ನ ಸಂತರ್ಪಣೆ ಇತರ ಸೇವೆಗಳು ನಡೆದವು.