ದೊಡ್ಡ ದೊಡ್ಡ ಪಾತ್ರೆಗಳಲ್ಲಿ ವಿವಿಧ ಕಾಳು, ತರಕಾರಿ ಸೊಪ್ಪು ಬೆರೆಸಿದ ಭಜ್ಜಿ ಸಿದ್ಧಪಡಿಸಲಾಗಿತ್ತು. ಹಸಿ ಈರುಳ್ಳಿ, ಮೆಣಸಿನಕಾಯಿ, ಎಳ್ಳು ಮಿಶ್ರಣ ಮಾಡಿ ಕುಟ್ಟಿದ್ದ ಭರತಾ, ಹುಗ್ಗಿ, ಅನ್ನ, ಸಜ್ಜಿ, ಜೋಳದ ಕಡಕ್ ರೊಟ್ಟಿಗಳನ್ನು ಊಟಕ್ಕೆ ಬಡಿಸಲಾಯಿತು. ಸಂಜೆಯ ಆಹ್ಲಾದಕರ ವಾತಾವರಣದಲ್ಲಿ ವಿದ್ಯುತ್ ದೀಪದ ಬೆಳಕಿನಲ್ಲಿ ಊಟ ಮಾಡಲಾಯಿತು. ದೂರದೂರದ ಗ್ರಾಮದವರು ಹಾಜರಿದ್ದು ಊಟ ಸವಿದರು. ಮಠಾಧಿಪತಿ ಡಾ.ಚನ್ನವೀರ ಶಿವಾಚಾರ್ಯರು ಸ್ವತಃ ಊಟ ಬಡಿಸಿ ಉದ್ಘಾಟಿಸಿದರು. ಮುಖಂಡರಾದ ಬಾಬು ಹೊನ್ನಾನಾಯಕ್, ಸಿದ್ರಾಮಪ್ಪ ಗುದಗೆ ಮುಂತಾದವರು ಪಾಲ್ಗೊಂಡಿದ್ದರು.