<p><strong>ಬೀದರ್:</strong> ಕಳೆದ ಎರಡ್ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.</p>.<p>ದೀಪಾವಳಿ ಹಬ್ಬ ಆಚರಿಸಿದ ಜನ ಇನ್ನೇನು ಮಳೆಗಾಲ ಮುಗಿಯಿತು ಎಂದು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಆದರೆ, ಪುನಃ ಮಳೆ ಶುರುವಾದ ಕಾರಣ ಜನರ ದೈನಂದಿನ ಕೆಲಸಗಳಿಗೆ ತೊಡಕಾಗಿದೆ.</p>.<p>ಬೆಳಿಗ್ಗೆ ಕಚೇರಿ ಕೆಲಸ, ಶಾಲಾ ಕಾಲೇಜಿಗೆ ಹೋಗುವಾಗಲೂ ಸಮಸ್ಯೆ ಎದುರಿಸಿದ ಜನ ಹಾಗೂ ವಿದ್ಯಾರ್ಥಿಗಳು, ಸಂಜೆ ಪುನಃ ಮನೆ ಸೇರುವಾಗಲೂ ಸಮಸ್ಯೆ ಎದುರಿಸಿದರು.</p>.<p>ಮಂಗಳವಾರ ಸಂಜೆ ಆರಂಭಗೊಂಡ ಮಳೆ ಬುಧವಾರ ದಿನವಿಡೀ ಸುರಿಯಿತು. ಕೆಲವೊಮ್ಮೆ ಜಿಟಿಜಿಟಿ, ಕೆಲವು ಸಲ ಜೋರಾಗಿ ಮಳೆ ಆಯಿತು. ಬೀದರ್ ನಗರ ಸೇರಿದಂತೆ ತಾಲ್ಲೂಕಿನ ಚಿಟ್ಟಾ, ಘೋಡಂಪಳ್ಳಿ, ಶಹಾಪುರ, ಅಮಲಾಪೂರ, ಬೆಳ್ಳೂರ ಸೇರಿದಂತೆ ಹಲವೆಡೆ ಮಳೆಯಾಗಿದೆ.</p>.<p>ಜಿಲ್ಲೆಯ ಔರಾದ್, ಕಮಲನಗರ, ಭಾಲ್ಕಿ, ಹುಲಸೂರ, ಹುಮನಾಬಾದ್ನಲ್ಲೂ ಮಳೆಯಾಗಿದೆ. ಸತತ ಮಳೆಗೆ ಹಿಂಗಾರು ಕೃಷಿ ಚಟುವಟಿಕೆಗಳಿಗೆ ತೊಡಕಾಗಿದೆ. ಗುರುವಾರವೂ ಜಿಲ್ಲೆಯ ಹೆಚ್ಚಿನ ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್:</strong> ಕಳೆದ ಎರಡ್ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.</p>.<p>ದೀಪಾವಳಿ ಹಬ್ಬ ಆಚರಿಸಿದ ಜನ ಇನ್ನೇನು ಮಳೆಗಾಲ ಮುಗಿಯಿತು ಎಂದು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಆದರೆ, ಪುನಃ ಮಳೆ ಶುರುವಾದ ಕಾರಣ ಜನರ ದೈನಂದಿನ ಕೆಲಸಗಳಿಗೆ ತೊಡಕಾಗಿದೆ.</p>.<p>ಬೆಳಿಗ್ಗೆ ಕಚೇರಿ ಕೆಲಸ, ಶಾಲಾ ಕಾಲೇಜಿಗೆ ಹೋಗುವಾಗಲೂ ಸಮಸ್ಯೆ ಎದುರಿಸಿದ ಜನ ಹಾಗೂ ವಿದ್ಯಾರ್ಥಿಗಳು, ಸಂಜೆ ಪುನಃ ಮನೆ ಸೇರುವಾಗಲೂ ಸಮಸ್ಯೆ ಎದುರಿಸಿದರು.</p>.<p>ಮಂಗಳವಾರ ಸಂಜೆ ಆರಂಭಗೊಂಡ ಮಳೆ ಬುಧವಾರ ದಿನವಿಡೀ ಸುರಿಯಿತು. ಕೆಲವೊಮ್ಮೆ ಜಿಟಿಜಿಟಿ, ಕೆಲವು ಸಲ ಜೋರಾಗಿ ಮಳೆ ಆಯಿತು. ಬೀದರ್ ನಗರ ಸೇರಿದಂತೆ ತಾಲ್ಲೂಕಿನ ಚಿಟ್ಟಾ, ಘೋಡಂಪಳ್ಳಿ, ಶಹಾಪುರ, ಅಮಲಾಪೂರ, ಬೆಳ್ಳೂರ ಸೇರಿದಂತೆ ಹಲವೆಡೆ ಮಳೆಯಾಗಿದೆ.</p>.<p>ಜಿಲ್ಲೆಯ ಔರಾದ್, ಕಮಲನಗರ, ಭಾಲ್ಕಿ, ಹುಲಸೂರ, ಹುಮನಾಬಾದ್ನಲ್ಲೂ ಮಳೆಯಾಗಿದೆ. ಸತತ ಮಳೆಗೆ ಹಿಂಗಾರು ಕೃಷಿ ಚಟುವಟಿಕೆಗಳಿಗೆ ತೊಡಕಾಗಿದೆ. ಗುರುವಾರವೂ ಜಿಲ್ಲೆಯ ಹೆಚ್ಚಿನ ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>