<p><strong>ಚಿಟಗುಪ್ಪ: </strong>ಲಾಕ್ಡೌನ್ ಸಡಿಲ ಮಾಡಿದ ನಂತರ ಹೋಟೆಲ್ಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಆದರೂ ಜನರು ಹೋಟೆಲ್ಗಳತ್ತ ಸುಳಿಯುತ್ತಿಲ್ಲ.</p>.<p>ಪಟ್ಟಣ ಸೇರಿ ತಾಲ್ಲೂಕಿನಾದ್ಯಂತ ನಿರ್ಣಾ, ಮನ್ನಾಎಖ್ಖೇಳಿ, ಬೇಮಳಖೇಡಾ, ಚಾಂಗಲೇರಾ ಸೇರು ವಿವಿಧೆಡೆ ಹೋಟೆಲ್ಗಳನ್ನು ಆರಂಭಿಸಲಾಗಿದೆ. ಆದರೆ, ಗ್ರಾಹಕರ ಸಂಖ್ಯೆ ಮಾತ್ರ ನಿರೀಕ್ಷಿಸಿದಷ್ಟು ಇಲ್ಲ. ಹೀಗಾಗಿ ಹೋಟೆಲ್ಗಳಲ್ಲಿ ಮೊದಲಿನಂತೆ ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ತಯಾರಿಸುತ್ತಿಲ್ಲ.</p>.<p>‘ಹೋಟೆಲ್ಗಳಲ್ಲಿ ಕುಳಿತು ಊಟ, ಉಪಾಹಾರ ಮಾಡಲು ಸರ್ಕಾರ ಅನುಮತಿ ನೀಡಿದೆ. ಆದರೆ, ಜನರಲ್ಲಿ ಇನ್ನೂ ಕೊರೊನಾ ಸೋಂಕಿನ ಭಯ ನಿವಾರಣೆ ಆಗಿಲ್ಲ. ಸದ್ಯ ದಿನಕ್ಕೆ 40–50 ಗ್ರಾಹಕರು ಮಾತ್ರ ಬರುತ್ತಿದ್ದಾರೆ’ ಎಂದು ರೇವಣಸಿದ್ದೇಶ್ವರ ಹೋಟೆಲ್ ಮಾಲೀಕ ಪ್ರಭಾಕರ್ ತಿಳಿಸಿದರು.</p>.<p>ಶಾಲಾ–ಕಾಲೇಜುಗಳೂ ಇನ್ನು ಪ್ರಾರಂಭವಾಗಿಲ್ಲ. ಸರ್ಕಾರಿ ನೌಕರರು, ಬ್ಯಾಂಕ್, ಅಂಚೆ ಕಚೇರಿಯ ಉದ್ಯೋಗಿಗಳು ಮಾತ್ರ ಕಚೇರಿಗಳಿಗೆ ಬರುತ್ತಿದ್ದಾರೆ. ಅವರೂ ತಮ್ಮ ಜತೆಯಲ್ಲಿ ಮನೆಯಿಂದ ಊಟ ತರುತ್ತಿದ್ದಾರೆ. ಹೀಗಾಗಿ ಮಧ್ಯಾಹ್ನದ ವೇಳೆ ಹೋಟೆಲ್ಗಳು ಬಿಕೋ ಎನ್ನುತ್ತಿವೆ.</p>.<p>ಕೊರೊನಾ ವೈರಸ್ ನಿಯಂತ್ರಣಕ್ಕೆ ಅನಗತ್ಯವಾಗಿ ಮನೆಯಿಂದ ಹೊರಗೆ ಬಾರದಂತೆ ಸಲಹೆ ನೀಡಲಾಗುತ್ತಿದೆ. ಅದರಲ್ಲೂ ಲಾಕ್ಡೌನ್ ಅವಧಿಯಲ್ಲಿ ಬಹುತೇಕ ಮಂದಿ ಮನೆಯ ಆಹಾರಕ್ಕೆ ಒಗ್ಗಿಕೊಂಡಿದ್ದಾರೆ. ಹೀಗಾಗಿ ಹೋಟೆಲ್ ಆಹಾರದ ಗೋಜಿಗೆ ಹೋಗುತ್ತಿಲ್ಲ.<br />ಅದಾಗ್ಯೂ ಹೋಟೆಲ್ ತಿಂಡಿ ಬೇಕಾದವರು ಪಾರ್ಸೆಲ್ ಮಾತ್ರ ತೆಗೆದುಕೊಂಡು ಹೋಗುತ್ತಿದ್ದಾರೆ.</p>.<p>‘ಲಾಕ್ಡೌನ್ ಅವಧಿಯಲ್ಲಿ ನನ್ನ ಆಹಾರ ಪದ್ಧತಿ ಬದಲಿಸಿಕೊಂಡಿದ್ದೇನೆ. ಇದೀಗ ಹೋಟೆಲ್ಗಳು ಆರಂಭವಾಗಿದ್ದರೂ, ಮನೆಯ ಊಟವೇ ಉತ್ತಮ ಎನಿಸುತ್ತಿದೆ. ಮನೆಯಲ್ಲಿಯೇ ಬಗೆ ಬಗೆಯ ತಿಂಡಿ, ತಿನಿಸುಗಳನ್ನು ಮಾಡಿಕೊಂಡು ತಿನ್ನುವ ಅಭ್ಯಾಸ ಮೈಗೂಡಿಸಿಕೊಂಡಿದ್ದರಿಂದ ಹೋಟೆಲ್ಗೆ ಹೋಗುತ್ತಿಲ್ಲ’ ಎಂದು ಖಾಸಗಿ ಉದ್ಯೋಗಿ ಪ್ರಕಾಶ್ ತಿಳಿಸಿದರು.</p>.<p>ಕೊರೊನಾ ಭೀತಿಯ ನಡುವೆಯೂ ಹೋಟೆಲ್ಗಳನ್ನು ಆರಂಭಿಸಲಾಗಿದೆ. ಸುರಕ್ಷತೆ ದೃಷ್ಟಿಯಿಂದ ಸರ್ಕಾರ ನಿಗದಿಪಡಿಸಿರುವ ಮಾರ್ಗಸೂಚಿಗಳನ್ನು ಹೋಟೆಲ್ಗಳಲ್ಲಿ ಕಡ್ಡಾಯವಾಗಿ ಪಾಲಿಸಬೇಕು. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಗ್ರಾಹಕರಾದ ಮಲ್ಲಿಕಾರ್ಜುನ ಪಾಟೀಲ ಒತ್ತಾಯಿಸಿದರು.</p>.<p>ಪಾಲನೆಯಾಗದ ನಿಯಮ: ಕೊರೊನಾ ವೈರಸ್ ಭೀತಿ ಇದ್ದರೂ ತಾಲ್ಲೂಕು, ಹೋಬಳಿ, ಗ್ರಾಮೀಣ ಪ್ರದೇಶಗಳಲ್ಲಿ ಹೋಟೆಲ್ಗಳ ಮಾಲಿಕರು ಹೋಟೆಲ್ಗಳಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ.</p>.<p>ಗ್ರಾಹಕರಿಗೆ ಕೈ ತೊಳೆಯಲು ಸ್ಯಾನಿಟೈಸರ್, ಸಾಬೂನು ನೀಡುತ್ತಿಲ್ಲ. ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಯಾವುದೇ ವ್ಯವಸ್ಥೆ ಮಾಡಿಲ್ಲ ಎಂಬುದು ಗ್ರಾಹಕರ ದೂರು.</p>.<p>ಕೊರೊನಾ ಭೀತಿ ಹಿನ್ನೆಲೆಯಲ್ಲಿ ಗ್ರಾಹಕರು ಸ್ಟೀಲ್ ತಟ್ಟೆ, ಲೋಟಗಳನ್ನು ಬಳಸಲು ಹಿಂಜರಿಯುತ್ತಿದ್ದಾರೆ. ಹೀಗಾಗಿ ಕೆಲವು ಹೋಟೆಲ್ಗಳಲ್ಲಿ ಪೇಪರ್ ತಟ್ಟೆ, ಲೋಟ ಬಳಸಲಾಗುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಟಗುಪ್ಪ: </strong>ಲಾಕ್ಡೌನ್ ಸಡಿಲ ಮಾಡಿದ ನಂತರ ಹೋಟೆಲ್ಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಆದರೂ ಜನರು ಹೋಟೆಲ್ಗಳತ್ತ ಸುಳಿಯುತ್ತಿಲ್ಲ.</p>.<p>ಪಟ್ಟಣ ಸೇರಿ ತಾಲ್ಲೂಕಿನಾದ್ಯಂತ ನಿರ್ಣಾ, ಮನ್ನಾಎಖ್ಖೇಳಿ, ಬೇಮಳಖೇಡಾ, ಚಾಂಗಲೇರಾ ಸೇರು ವಿವಿಧೆಡೆ ಹೋಟೆಲ್ಗಳನ್ನು ಆರಂಭಿಸಲಾಗಿದೆ. ಆದರೆ, ಗ್ರಾಹಕರ ಸಂಖ್ಯೆ ಮಾತ್ರ ನಿರೀಕ್ಷಿಸಿದಷ್ಟು ಇಲ್ಲ. ಹೀಗಾಗಿ ಹೋಟೆಲ್ಗಳಲ್ಲಿ ಮೊದಲಿನಂತೆ ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ತಯಾರಿಸುತ್ತಿಲ್ಲ.</p>.<p>‘ಹೋಟೆಲ್ಗಳಲ್ಲಿ ಕುಳಿತು ಊಟ, ಉಪಾಹಾರ ಮಾಡಲು ಸರ್ಕಾರ ಅನುಮತಿ ನೀಡಿದೆ. ಆದರೆ, ಜನರಲ್ಲಿ ಇನ್ನೂ ಕೊರೊನಾ ಸೋಂಕಿನ ಭಯ ನಿವಾರಣೆ ಆಗಿಲ್ಲ. ಸದ್ಯ ದಿನಕ್ಕೆ 40–50 ಗ್ರಾಹಕರು ಮಾತ್ರ ಬರುತ್ತಿದ್ದಾರೆ’ ಎಂದು ರೇವಣಸಿದ್ದೇಶ್ವರ ಹೋಟೆಲ್ ಮಾಲೀಕ ಪ್ರಭಾಕರ್ ತಿಳಿಸಿದರು.</p>.<p>ಶಾಲಾ–ಕಾಲೇಜುಗಳೂ ಇನ್ನು ಪ್ರಾರಂಭವಾಗಿಲ್ಲ. ಸರ್ಕಾರಿ ನೌಕರರು, ಬ್ಯಾಂಕ್, ಅಂಚೆ ಕಚೇರಿಯ ಉದ್ಯೋಗಿಗಳು ಮಾತ್ರ ಕಚೇರಿಗಳಿಗೆ ಬರುತ್ತಿದ್ದಾರೆ. ಅವರೂ ತಮ್ಮ ಜತೆಯಲ್ಲಿ ಮನೆಯಿಂದ ಊಟ ತರುತ್ತಿದ್ದಾರೆ. ಹೀಗಾಗಿ ಮಧ್ಯಾಹ್ನದ ವೇಳೆ ಹೋಟೆಲ್ಗಳು ಬಿಕೋ ಎನ್ನುತ್ತಿವೆ.</p>.<p>ಕೊರೊನಾ ವೈರಸ್ ನಿಯಂತ್ರಣಕ್ಕೆ ಅನಗತ್ಯವಾಗಿ ಮನೆಯಿಂದ ಹೊರಗೆ ಬಾರದಂತೆ ಸಲಹೆ ನೀಡಲಾಗುತ್ತಿದೆ. ಅದರಲ್ಲೂ ಲಾಕ್ಡೌನ್ ಅವಧಿಯಲ್ಲಿ ಬಹುತೇಕ ಮಂದಿ ಮನೆಯ ಆಹಾರಕ್ಕೆ ಒಗ್ಗಿಕೊಂಡಿದ್ದಾರೆ. ಹೀಗಾಗಿ ಹೋಟೆಲ್ ಆಹಾರದ ಗೋಜಿಗೆ ಹೋಗುತ್ತಿಲ್ಲ.<br />ಅದಾಗ್ಯೂ ಹೋಟೆಲ್ ತಿಂಡಿ ಬೇಕಾದವರು ಪಾರ್ಸೆಲ್ ಮಾತ್ರ ತೆಗೆದುಕೊಂಡು ಹೋಗುತ್ತಿದ್ದಾರೆ.</p>.<p>‘ಲಾಕ್ಡೌನ್ ಅವಧಿಯಲ್ಲಿ ನನ್ನ ಆಹಾರ ಪದ್ಧತಿ ಬದಲಿಸಿಕೊಂಡಿದ್ದೇನೆ. ಇದೀಗ ಹೋಟೆಲ್ಗಳು ಆರಂಭವಾಗಿದ್ದರೂ, ಮನೆಯ ಊಟವೇ ಉತ್ತಮ ಎನಿಸುತ್ತಿದೆ. ಮನೆಯಲ್ಲಿಯೇ ಬಗೆ ಬಗೆಯ ತಿಂಡಿ, ತಿನಿಸುಗಳನ್ನು ಮಾಡಿಕೊಂಡು ತಿನ್ನುವ ಅಭ್ಯಾಸ ಮೈಗೂಡಿಸಿಕೊಂಡಿದ್ದರಿಂದ ಹೋಟೆಲ್ಗೆ ಹೋಗುತ್ತಿಲ್ಲ’ ಎಂದು ಖಾಸಗಿ ಉದ್ಯೋಗಿ ಪ್ರಕಾಶ್ ತಿಳಿಸಿದರು.</p>.<p>ಕೊರೊನಾ ಭೀತಿಯ ನಡುವೆಯೂ ಹೋಟೆಲ್ಗಳನ್ನು ಆರಂಭಿಸಲಾಗಿದೆ. ಸುರಕ್ಷತೆ ದೃಷ್ಟಿಯಿಂದ ಸರ್ಕಾರ ನಿಗದಿಪಡಿಸಿರುವ ಮಾರ್ಗಸೂಚಿಗಳನ್ನು ಹೋಟೆಲ್ಗಳಲ್ಲಿ ಕಡ್ಡಾಯವಾಗಿ ಪಾಲಿಸಬೇಕು. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಗ್ರಾಹಕರಾದ ಮಲ್ಲಿಕಾರ್ಜುನ ಪಾಟೀಲ ಒತ್ತಾಯಿಸಿದರು.</p>.<p>ಪಾಲನೆಯಾಗದ ನಿಯಮ: ಕೊರೊನಾ ವೈರಸ್ ಭೀತಿ ಇದ್ದರೂ ತಾಲ್ಲೂಕು, ಹೋಬಳಿ, ಗ್ರಾಮೀಣ ಪ್ರದೇಶಗಳಲ್ಲಿ ಹೋಟೆಲ್ಗಳ ಮಾಲಿಕರು ಹೋಟೆಲ್ಗಳಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ.</p>.<p>ಗ್ರಾಹಕರಿಗೆ ಕೈ ತೊಳೆಯಲು ಸ್ಯಾನಿಟೈಸರ್, ಸಾಬೂನು ನೀಡುತ್ತಿಲ್ಲ. ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಯಾವುದೇ ವ್ಯವಸ್ಥೆ ಮಾಡಿಲ್ಲ ಎಂಬುದು ಗ್ರಾಹಕರ ದೂರು.</p>.<p>ಕೊರೊನಾ ಭೀತಿ ಹಿನ್ನೆಲೆಯಲ್ಲಿ ಗ್ರಾಹಕರು ಸ್ಟೀಲ್ ತಟ್ಟೆ, ಲೋಟಗಳನ್ನು ಬಳಸಲು ಹಿಂಜರಿಯುತ್ತಿದ್ದಾರೆ. ಹೀಗಾಗಿ ಕೆಲವು ಹೋಟೆಲ್ಗಳಲ್ಲಿ ಪೇಪರ್ ತಟ್ಟೆ, ಲೋಟ ಬಳಸಲಾಗುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>