ವಿದ್ಯಾರ್ಥಿಗಳಾದ ಮಹಾದೇವ ಕೌಟಾ 559, ಕೇದಾರ ಬಾಬು 1001, ಅಂಬಿಕಾ ಪಾಂಡಪ್ಪ 1005, ಪ್ರೇಮಕುಮಾರ ಶಿವಕುಮಾರ 2122, ಮಂಜುನಾಥ ಸುಭಾಷ 2131, ಶ್ರೀಧರ ರೆಡ್ಡಿ 2421, ವಿನೋದ ಸಜ್ಜನ್ 5514, ನಾಗರಾಜ ಹಾಲಿಮನಿ, 7777, ರೋನಕ್ ರಾಜಶೇಖರ 8388 ರ್ಯಾಂಕ್ ಪಡೆದು ಭಾರತದ ಪ್ರತಿಷ್ಠಿತ ಐಐಟಿ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಅರ್ಹತೆಯನ್ನು ಗಿಟ್ಟಿಸಿದ್ದಾರೆ. ರಾಷ್ಟ್ರಮಟ್ಟದಲ್ಲಿ 28ನೇ ರ್ಯಾಂಕ್ ಪಡೆದ ಚೇತನ ಮಲ್ಲಿಕಾರ್ಜುನ ತಾಲ್ಲೂಕಿನ ಕುರುಬಖೇಳಗಿ ಗ್ರಾಮದವರಾಗಿದ್ದು, ಈ ಮುಂಚೆ ನಡೆದ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ 21ನೇ ರ್ಯಾಂಕ್ ಪಡೆದಿದ್ದಾರೆ.