<p><strong>ಬೀದರ್:</strong> ಬಹು ಸಂಸ್ಕೃತಿಯ ನೆಲದಲ್ಲಿ ಧರ್ಮ ಸಮನ್ವಯತೆ ನಮ್ಮ ಬದುಕಿನ ಅಂತಃಶಕ್ತಿಯಾಗಬೇಕು ಎಂದು ಸಾಹಿತಿ ಶಾಂತಮ್ಮ ಬಲ್ಲೂರ ನುಡಿದರು.</p>.<p>ಜಿಲ್ಲಾ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಇಲ್ಲಿಯ ಶಾಂತಮ್ಮ ಬಲ್ಲೂರ ಅವರ ಮನೆಯಲ್ಲಿ ನಡೆದ ಮನೆಯಂಗಳದಲ್ಲಿ ಮಾತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ದೇಸಿ ಸೊಗಡಿನಲ್ಲಿ ಬೆಳೆದ ಕಾರಣ ಜಾನಪದ ಕಥೆ, ಕಾವ್ಯ ಮೊದಲಾದವು ತಮ್ಮ ಮೇಲೆ ದಟ್ಟ ಪ್ರಭಾವ ಬೀರಿದವು. ಅವೇ ತಮ್ಮ ಸಾಹಿತ್ಯದ ಬೆಳವಣಿಗೆಗೆ ಕಾರಣವಾದವು ಎಂದು ತಿಳಿಸಿದರು.</p>.<p>ಯಶೋದಮ್ಮ ಸಿದ್ದಬಟ್ಟೆ ಕಾವ್ಯ ರಚನೆಗೆ ಪ್ರೋತ್ಸಾಹಿಸಿದರು. ಹಂಶ ಕವಿ ಸಾಹಿತ್ಯ ಪ್ರಕಟಣೆಗೆ ನೆರವಾದರು. ಸಹೋದರರು ಹಾಗೂ ಗಂಡನ ಮನೆಯವರು ತಮ್ಮ ಬೆಳವಣಿಗೆ ಹಿಂದೆ ಬೆಳಕಾಗಿ ನಿಂತರು ಎಂದು ಹೇಳಿದರು.</p>.<p>ಕಸಾಪ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಡಾ. ಬಸವರಾಜ ಬಲ್ಲೂರ ಮಾತನಾಡಿ, ಆಧುನಿಕತೆ ಕಾರಣ ಕೌಟುಂಬಿಕ ವಿಘಟನೆಗಳು ಹೆಚ್ಚಾಗುತ್ತಿವೆ. ಎಲ್ಲರನ್ನು ಒಂದುಗೂಡಿಸುವ ಶಕ್ತಿ ಸಾಹಿತ್ಯಕ್ಕೆ ಇದೆ. ಸಾಹಿತ್ಯ ಜೀವನ ಪ್ರೀತಿ ಕಲಿಸಿಕೊಡುತ್ತದೆ ಎಂದು ಅಭಿಪ್ರಾಯಪಟ್ಟರು.</p>.<p>ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಸುಮತಿ ಎಸ್. ರುದ್ರಾ ಕಾರ್ಯಕ್ರಮ ಉದ್ಘಾಟಿಸಿದರು. ಸಾಹಿತಿ ಡಾ. ಅರುಣಾ ಸುಲ್ತಾನಪುರೆ ಹಾಗೂ ಕಾವ್ಯನಂದಿನಿ ಸಿಂಧೆ ಸಂವಾದ ನಡೆಸಿಕೊಟ್ಟರು. ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್. ಮನೋಹರ ಅಧ್ಯಕ್ಷತೆ ವಹಿಸಿದ್ದರು.</p>.<p>ಸಾಹಿತಿಗಳಾದ ಡಾ. ಈಶ್ವರಯ್ಯ ಕೋಡಂಬಲ, ಶಿರೋಮಣಿ ತಾರೆ, ಮಲ್ಲಮ್ಮ ಉದಯಗಿರಿ, ವಿದ್ಯಾವತಿ ಬಲ್ಲೂರ ಉಪಸ್ಥಿತರಿದ್ದರು. ಶಿಕ್ಷಕ ಪ್ರಕಾಶ ಜನಪದ ಗೀತೆಗಳನ್ನು ಹಾಡಿದರು. ಟಿ.ಎಂ. ಮಚ್ಚೆ ಸ್ವಾಗತಿಸಿದರು. ಕಸ್ತೂರಿ ಪಟಪಳ್ಳಿ ನಿರೂಪಿಸಿದರು. ಪ್ರೊ. ಜಗನ್ನಾಥ ಕಮಲಾಪುರೆ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್:</strong> ಬಹು ಸಂಸ್ಕೃತಿಯ ನೆಲದಲ್ಲಿ ಧರ್ಮ ಸಮನ್ವಯತೆ ನಮ್ಮ ಬದುಕಿನ ಅಂತಃಶಕ್ತಿಯಾಗಬೇಕು ಎಂದು ಸಾಹಿತಿ ಶಾಂತಮ್ಮ ಬಲ್ಲೂರ ನುಡಿದರು.</p>.<p>ಜಿಲ್ಲಾ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಇಲ್ಲಿಯ ಶಾಂತಮ್ಮ ಬಲ್ಲೂರ ಅವರ ಮನೆಯಲ್ಲಿ ನಡೆದ ಮನೆಯಂಗಳದಲ್ಲಿ ಮಾತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ದೇಸಿ ಸೊಗಡಿನಲ್ಲಿ ಬೆಳೆದ ಕಾರಣ ಜಾನಪದ ಕಥೆ, ಕಾವ್ಯ ಮೊದಲಾದವು ತಮ್ಮ ಮೇಲೆ ದಟ್ಟ ಪ್ರಭಾವ ಬೀರಿದವು. ಅವೇ ತಮ್ಮ ಸಾಹಿತ್ಯದ ಬೆಳವಣಿಗೆಗೆ ಕಾರಣವಾದವು ಎಂದು ತಿಳಿಸಿದರು.</p>.<p>ಯಶೋದಮ್ಮ ಸಿದ್ದಬಟ್ಟೆ ಕಾವ್ಯ ರಚನೆಗೆ ಪ್ರೋತ್ಸಾಹಿಸಿದರು. ಹಂಶ ಕವಿ ಸಾಹಿತ್ಯ ಪ್ರಕಟಣೆಗೆ ನೆರವಾದರು. ಸಹೋದರರು ಹಾಗೂ ಗಂಡನ ಮನೆಯವರು ತಮ್ಮ ಬೆಳವಣಿಗೆ ಹಿಂದೆ ಬೆಳಕಾಗಿ ನಿಂತರು ಎಂದು ಹೇಳಿದರು.</p>.<p>ಕಸಾಪ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಡಾ. ಬಸವರಾಜ ಬಲ್ಲೂರ ಮಾತನಾಡಿ, ಆಧುನಿಕತೆ ಕಾರಣ ಕೌಟುಂಬಿಕ ವಿಘಟನೆಗಳು ಹೆಚ್ಚಾಗುತ್ತಿವೆ. ಎಲ್ಲರನ್ನು ಒಂದುಗೂಡಿಸುವ ಶಕ್ತಿ ಸಾಹಿತ್ಯಕ್ಕೆ ಇದೆ. ಸಾಹಿತ್ಯ ಜೀವನ ಪ್ರೀತಿ ಕಲಿಸಿಕೊಡುತ್ತದೆ ಎಂದು ಅಭಿಪ್ರಾಯಪಟ್ಟರು.</p>.<p>ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಸುಮತಿ ಎಸ್. ರುದ್ರಾ ಕಾರ್ಯಕ್ರಮ ಉದ್ಘಾಟಿಸಿದರು. ಸಾಹಿತಿ ಡಾ. ಅರುಣಾ ಸುಲ್ತಾನಪುರೆ ಹಾಗೂ ಕಾವ್ಯನಂದಿನಿ ಸಿಂಧೆ ಸಂವಾದ ನಡೆಸಿಕೊಟ್ಟರು. ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್. ಮನೋಹರ ಅಧ್ಯಕ್ಷತೆ ವಹಿಸಿದ್ದರು.</p>.<p>ಸಾಹಿತಿಗಳಾದ ಡಾ. ಈಶ್ವರಯ್ಯ ಕೋಡಂಬಲ, ಶಿರೋಮಣಿ ತಾರೆ, ಮಲ್ಲಮ್ಮ ಉದಯಗಿರಿ, ವಿದ್ಯಾವತಿ ಬಲ್ಲೂರ ಉಪಸ್ಥಿತರಿದ್ದರು. ಶಿಕ್ಷಕ ಪ್ರಕಾಶ ಜನಪದ ಗೀತೆಗಳನ್ನು ಹಾಡಿದರು. ಟಿ.ಎಂ. ಮಚ್ಚೆ ಸ್ವಾಗತಿಸಿದರು. ಕಸ್ತೂರಿ ಪಟಪಳ್ಳಿ ನಿರೂಪಿಸಿದರು. ಪ್ರೊ. ಜಗನ್ನಾಥ ಕಮಲಾಪುರೆ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>