<p><strong>ಬೀದರ್:</strong> ಒಗ್ಗಟ್ಟಿನ ಮೂಲಕ ಹತ್ತಾರು ಜನರಿಗೆ ಸಂದಿಗ್ಧತೆ ಸಂದರ್ಭದಲ್ಲಿ ಸಹಕರಿಸುವುದೇ ಸಹಕಾರ ಆಗಿದೆ ಎಂದು ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕ ಗುರುನಾಥ್ ಜಾಂತಿಕರ್ ತಿಳಿಸಿದರು.</p>.<p>ನಗರದಲಿ ನಡೆದ ವಚನ ಸೌಹಾರ್ದ ಸಹಕಾರ ಸಂಘದ ಶೇರು ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಸಹಕಾರದ ಮೂಲ ಆಶಯ ಸಹಕಾರಿಗಳ ಅಭಿವೃದ್ಧಿ ಜೊತೆಗೆ ಸಮಾಜ ಪರಿವರ್ತನೆಗೊಳಿಸುವಿಕೆ. ಶೋಷಣೆ ಮುಕ್ತ ಸಮಾಜ ನಿರ್ಮಾಣಗೊಂಡಾಗ ಬಸವಣ್ಣನವರ ಆಶಯ ಪೂರೈಸಿದಂತಾಗುತ್ತದೆ’ ಎಂದರು.</p>.<p>ಡಿಸಿಸಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ವಿಠಲ್ ರೆಡ್ಡಿ ಯಡಮಲೆ ಮಾತನಾಡಿ, ‘ನಮ್ಮ ಜಿಲ್ಲೆ ಸಹಕಾರ ಕ್ಷೇತ್ರದಲ್ಲಿಯ ಆರ್ಥಿಕ ಕ್ರಾಂತಿಗೆ ಹೆಸರುವಾಸಿಯಾಗಿದೆ. ಸ್ವ-ಸಹಾಯ ಸಂಘಗಳು ಇಂದು ದೊಡ್ಡ ಕ್ರಾಂತಿ ಮಾಡಿವೆ. ಸಂಘವು ಸಬಲಗೊಂಡರೆ ಇಡಿ ಶೇರುದಾರರಿಗೆ ಅದರ ಗೌರವ ಸಲ್ಲುತ್ತದೆ. ನಮ್ಮ ಬ್ಯಾಂಕಿನಿಂದ ಬೇಕಾಗುವ ಸಹಕಾರ ನೀಡುತ್ತೇವೆ’ ಎಂದು ಭರವಸೆ ನೀಡಿದರು.</p>.<p>ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಪ್ರಕಾಶ್ ಗಂದಿಗುಡಿ, ರಾಜೇಂದ್ರಕುಮಾರ್ ಗಂದಗೆ, ಶಿವಕುಮಾರ್ ಸಾಲಿ, ಸಿದ್ಧರಾಮೇಶ್ವರ ಸ್ವಾಮೀಜಿ, ವೈಜಿನಾಥ ಸಜ್ಜನಶಟ್ಟಿ, ಸುರೇಶ್ ಪಾಟೀಲ, ಪ್ರಕಾಶ್ ಮಠಪತಿ , ಶಿವಶಂಕರ್ ಟೋಕರೆ, ಜಗನ್ನಾಥ್ ಸೋರಳ್ಳಿ, ಸಂಜೀವ್ ಕುಮಾರ್ ಪಾಟೀಲ, ವೀರಶೆಟ್ಟಿ ಕಾಮಣ್ಣ, ಅಮೃತ ಹೊಸಮನಿ, ಅಲ್ಲಮಪ್ರಭು ನಾವದಗೇರೆ, ಮಲ್ಲಿಕಾರ್ಜುನ ಸ್ವಾಮಿ, ಸಂಜೀವಕುಮಾರ ಬಿರಾದಾರ್ ಸೇರಿದಂತೆ ಇತರರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್:</strong> ಒಗ್ಗಟ್ಟಿನ ಮೂಲಕ ಹತ್ತಾರು ಜನರಿಗೆ ಸಂದಿಗ್ಧತೆ ಸಂದರ್ಭದಲ್ಲಿ ಸಹಕರಿಸುವುದೇ ಸಹಕಾರ ಆಗಿದೆ ಎಂದು ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕ ಗುರುನಾಥ್ ಜಾಂತಿಕರ್ ತಿಳಿಸಿದರು.</p>.<p>ನಗರದಲಿ ನಡೆದ ವಚನ ಸೌಹಾರ್ದ ಸಹಕಾರ ಸಂಘದ ಶೇರು ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಸಹಕಾರದ ಮೂಲ ಆಶಯ ಸಹಕಾರಿಗಳ ಅಭಿವೃದ್ಧಿ ಜೊತೆಗೆ ಸಮಾಜ ಪರಿವರ್ತನೆಗೊಳಿಸುವಿಕೆ. ಶೋಷಣೆ ಮುಕ್ತ ಸಮಾಜ ನಿರ್ಮಾಣಗೊಂಡಾಗ ಬಸವಣ್ಣನವರ ಆಶಯ ಪೂರೈಸಿದಂತಾಗುತ್ತದೆ’ ಎಂದರು.</p>.<p>ಡಿಸಿಸಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ವಿಠಲ್ ರೆಡ್ಡಿ ಯಡಮಲೆ ಮಾತನಾಡಿ, ‘ನಮ್ಮ ಜಿಲ್ಲೆ ಸಹಕಾರ ಕ್ಷೇತ್ರದಲ್ಲಿಯ ಆರ್ಥಿಕ ಕ್ರಾಂತಿಗೆ ಹೆಸರುವಾಸಿಯಾಗಿದೆ. ಸ್ವ-ಸಹಾಯ ಸಂಘಗಳು ಇಂದು ದೊಡ್ಡ ಕ್ರಾಂತಿ ಮಾಡಿವೆ. ಸಂಘವು ಸಬಲಗೊಂಡರೆ ಇಡಿ ಶೇರುದಾರರಿಗೆ ಅದರ ಗೌರವ ಸಲ್ಲುತ್ತದೆ. ನಮ್ಮ ಬ್ಯಾಂಕಿನಿಂದ ಬೇಕಾಗುವ ಸಹಕಾರ ನೀಡುತ್ತೇವೆ’ ಎಂದು ಭರವಸೆ ನೀಡಿದರು.</p>.<p>ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಪ್ರಕಾಶ್ ಗಂದಿಗುಡಿ, ರಾಜೇಂದ್ರಕುಮಾರ್ ಗಂದಗೆ, ಶಿವಕುಮಾರ್ ಸಾಲಿ, ಸಿದ್ಧರಾಮೇಶ್ವರ ಸ್ವಾಮೀಜಿ, ವೈಜಿನಾಥ ಸಜ್ಜನಶಟ್ಟಿ, ಸುರೇಶ್ ಪಾಟೀಲ, ಪ್ರಕಾಶ್ ಮಠಪತಿ , ಶಿವಶಂಕರ್ ಟೋಕರೆ, ಜಗನ್ನಾಥ್ ಸೋರಳ್ಳಿ, ಸಂಜೀವ್ ಕುಮಾರ್ ಪಾಟೀಲ, ವೀರಶೆಟ್ಟಿ ಕಾಮಣ್ಣ, ಅಮೃತ ಹೊಸಮನಿ, ಅಲ್ಲಮಪ್ರಭು ನಾವದಗೇರೆ, ಮಲ್ಲಿಕಾರ್ಜುನ ಸ್ವಾಮಿ, ಸಂಜೀವಕುಮಾರ ಬಿರಾದಾರ್ ಸೇರಿದಂತೆ ಇತರರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>