<p><strong>ಬೀದರ್</strong>: ಮನುಷ್ಯನ ಜೀವನ ಸಕಾರಾತ್ಮವಾಗಿ ಎತ್ತರಕ್ಕೆ ಬೆಳೆಯಬೇಕಾದರೆ ಓದುವ ಹವ್ಯಾಸ ಬೆಳೆಸಿಕೊಳ್ಳುವುದು ಮುಖ್ಯ. ಒಳ್ಳೆಯ ಗ್ರಂಥಗಳು ನಮ್ಮಲ್ಲಿ ಸದ್ಗುಣ ಮೂಡಿಸುತ್ತವೆ. ಮನಸ್ಸು ಭಾವ ಹೃದಯ ಸಂಸ್ಕಾರವಂತರನ್ನಾಗಿ ಮಾಡುತ್ತವೆ. ವಿಶಾಲಭಾವ ಬೆಳೆಸುತ್ತವೆ. ಜ್ಞಾನದ ನಿಧಿ ಹೆಚ್ಚಾಗಿಸುತ್ತದೆ.</p>.<p>‘ಮೈಯಲ್ಲಿ ಹರಕು ಬಟ್ಟೆ ಇದ್ದರೂ ಚಿಂತೆಯಿಲ್ಲ, ಕೈಯಲ್ಲಿ ಒಂದು ಪುಸ್ತಕವಿರಬೇಕು’ ಎಂದು ಮಹಾತ್ಮರು ಹೇಳುತ್ತಾರೆ. ಇದರರ್ಥ ನಾವು ಬಹಿರಂಗವಾಗಿ ಶೃಂಗಾರ ಮಾಡುವುಕ್ಕಿಂತಲೂ ಆಂತರಿಕವಾಗಿ ಸೌಂದರ್ಯವಂತರಾಗಬೇಕು. ಪುಸ್ತಗಕಗಳು ನಮ್ಮ ಅಂತರಂಗ ಸುಂದರ ಮಾಡುತ್ತವೆ.</p>.<p>‘ಪುಸ್ತಕಗಳು ಜಗತ್ತನ್ನೇ ಆಳುತ್ತವೆ’ ಎಂಬ ಒಂದು ಮಾತು ಇದೆ. ಪುಸ್ತಕವೆಂದರೆ, ಬರೀ ಹಾಳೆ ಅಲ್ಲ. ಅದು ಜ್ಞಾನಸಂಪತ್ತನ್ನು ಒಳಗೊಂಡಿರುವ ಅಮೂಲ್ಯ ನಿಧಿ. ಈ ಜಗತ್ತನ್ನು ಪ್ರೀತಿ, ಮೈತ್ರಿ, ವಿಶ್ವಾಸದಿಂದ ಗೆಲ್ಲಬೇಕಾದರೆ ನಾವು ಜ್ಞಾನ ಸಂಪಾದಿಸಬೇಕು. ಜ್ಞಾನ ಸಂಪಾದನೆಯಲ್ಲಿ ನಮಗೆ ಸಹಾಯ ಮಾಡುವ ಉತ್ತಮ ಗೆಳೆಯ ಎಂದರೆ ಪುಸ್ತಕ. ಗ್ರಂಥ ನಮ್ಮ ಬದುಕು ಬದಲಾಯಿಸುವ ಸಾಮರ್ಥ್ಯ ಹೊಂದಿದೆ. ಓದುವ ಹವ್ಯಾಸ ಬೆಳೆಸಿಕೊಳ್ಳೋಣ. ಉತ್ತಮ ಪುಸ್ತಕ ಓದೋಣ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್</strong>: ಮನುಷ್ಯನ ಜೀವನ ಸಕಾರಾತ್ಮವಾಗಿ ಎತ್ತರಕ್ಕೆ ಬೆಳೆಯಬೇಕಾದರೆ ಓದುವ ಹವ್ಯಾಸ ಬೆಳೆಸಿಕೊಳ್ಳುವುದು ಮುಖ್ಯ. ಒಳ್ಳೆಯ ಗ್ರಂಥಗಳು ನಮ್ಮಲ್ಲಿ ಸದ್ಗುಣ ಮೂಡಿಸುತ್ತವೆ. ಮನಸ್ಸು ಭಾವ ಹೃದಯ ಸಂಸ್ಕಾರವಂತರನ್ನಾಗಿ ಮಾಡುತ್ತವೆ. ವಿಶಾಲಭಾವ ಬೆಳೆಸುತ್ತವೆ. ಜ್ಞಾನದ ನಿಧಿ ಹೆಚ್ಚಾಗಿಸುತ್ತದೆ.</p>.<p>‘ಮೈಯಲ್ಲಿ ಹರಕು ಬಟ್ಟೆ ಇದ್ದರೂ ಚಿಂತೆಯಿಲ್ಲ, ಕೈಯಲ್ಲಿ ಒಂದು ಪುಸ್ತಕವಿರಬೇಕು’ ಎಂದು ಮಹಾತ್ಮರು ಹೇಳುತ್ತಾರೆ. ಇದರರ್ಥ ನಾವು ಬಹಿರಂಗವಾಗಿ ಶೃಂಗಾರ ಮಾಡುವುಕ್ಕಿಂತಲೂ ಆಂತರಿಕವಾಗಿ ಸೌಂದರ್ಯವಂತರಾಗಬೇಕು. ಪುಸ್ತಗಕಗಳು ನಮ್ಮ ಅಂತರಂಗ ಸುಂದರ ಮಾಡುತ್ತವೆ.</p>.<p>‘ಪುಸ್ತಕಗಳು ಜಗತ್ತನ್ನೇ ಆಳುತ್ತವೆ’ ಎಂಬ ಒಂದು ಮಾತು ಇದೆ. ಪುಸ್ತಕವೆಂದರೆ, ಬರೀ ಹಾಳೆ ಅಲ್ಲ. ಅದು ಜ್ಞಾನಸಂಪತ್ತನ್ನು ಒಳಗೊಂಡಿರುವ ಅಮೂಲ್ಯ ನಿಧಿ. ಈ ಜಗತ್ತನ್ನು ಪ್ರೀತಿ, ಮೈತ್ರಿ, ವಿಶ್ವಾಸದಿಂದ ಗೆಲ್ಲಬೇಕಾದರೆ ನಾವು ಜ್ಞಾನ ಸಂಪಾದಿಸಬೇಕು. ಜ್ಞಾನ ಸಂಪಾದನೆಯಲ್ಲಿ ನಮಗೆ ಸಹಾಯ ಮಾಡುವ ಉತ್ತಮ ಗೆಳೆಯ ಎಂದರೆ ಪುಸ್ತಕ. ಗ್ರಂಥ ನಮ್ಮ ಬದುಕು ಬದಲಾಯಿಸುವ ಸಾಮರ್ಥ್ಯ ಹೊಂದಿದೆ. ಓದುವ ಹವ್ಯಾಸ ಬೆಳೆಸಿಕೊಳ್ಳೋಣ. ಉತ್ತಮ ಪುಸ್ತಕ ಓದೋಣ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>