<p><strong>ಬೀದರ್:</strong> ಇಲ್ಲಿನ ಓಲ್ಡ್ ಸಿಟಿಯಲ್ಕಿ ಬೆಳಗಿನ ಜಾವ ವ್ಯಕ್ತಿಯೊಬ್ಬ ತಲವಾರ್ ಹಿಡಿದುಕೊಂಡು ಪೊಲೀಸರನ್ನು ಅಟ್ಟಾಡಿಸಿ ಓಡಿಸಿದ ಘಟನೆ ನಡೆದಿದೆ.</p>.<p>ರಸ್ತೆ ಮೇಲೆ ನಿಂತಿದ್ದ ವ್ಯಕ್ತಿಗೆ ಗಸ್ತಿನಲ್ಲಿದ್ದ ಪೊಲೀಸರು ಮನೆಗೆ ತೆರಳುವಂತೆ ಸೂಚಿಸಿದ್ದಾರೆ. ಅದಕ್ಕೆ ತೀವ್ರ ವಿರೋಧ ವ್ಯಕ್ತ ಪಡಿಸಿದ ವ್ಯಕ್ತಿ ತನ್ನ ದ್ವಿಚಕ್ರ ವಾಹನದಲ್ಕಿ ಇಟ್ಟಿದ್ದ ಹಲವಾರು ತೆಗೆದು ಹೊಡೆಯಲು ಬೆನ್ನಟ್ಟಿದ.</p>.<p>ಗಾಬರಿಗೊಂಡ ಪೊಲೀಸ್ ಕಾನ್ ಸ್ಟೆಬಲ್ ಹೆದರಿ ಕಿರುಚಾಡಿ ಎಸ್ಪಿ ಕಚೇರಿಯತ್ತ ಓಡಿಹೋದರು.ಕಿರುಚಾಟದ ಶಬ್ದ ಕೇಳಿ ಮನೆಯಿಂದ ಹೊರಗೆ ಬಂದ ಕೆಲವರು ವ್ಯಕ್ತಿಯನ್ನು ಹಿಡಿಯಲು ಯತ್ನಿಸಿದರು. ಆಗ ಅವರ ಮೇಲೂ ಹಲ್ಲೆಗೆ ಯತ್ನಿದ್ದಾನೆ. ಹೀಗಾಗಿ ಜನ ದಿಕ್ಕಾಪಾಲಾಗಿ ಓಡಿದರು.</p>.<p>ಯುವಕರು ಜಿಲ್ಲಾ ಪೊಲೀಸ್ ಅಧಿಕಾರಿಗೆ ನಾಲ್ಕೈದು ಬಾರಿ ಕರೆ ಮಾಡಿದರೂ ಫೋನ್ ರಿಸಿವ್ ಮಾಡಲಿಲ್ಲ. ಜನ ಮತ್ತೆ ಪೊಲೀಸ್ ಠಾಣೆಗೆ ತೆರಳಿದರು. ಟೌನ್ ಪೊಲೀಸರಿಗೂ ಮನವಿ ಮಾಡಿದರು.</p>.<p>ಅಷ್ಟರಲ್ಲಿ ಆತ ಮನೆಗಳ ಮುಂದೆ ನಿಲ್ಕಿಸಿದ್ದ ದ್ವಿಚಕ್ರ ವಾಹನ ಹಾಗೂ ಕಾರಿನ ಗಾಜುಗಳನ್ನು ಒಡೆದು ಹಾಕಿದ. ಇದರಿಂದ ಇನ್ನಷ್ಟು ತ್ವೇಷಮಯ ವಾತಾವರಣ ನಿರ್ಮಾಣವಾಯಿತು.</p>.<p>ಕೊನೆಗೆ ಒಬ್ಬ ಧೈರ್ಯ ಮಾಡಿ ಆತನನ್ನು ಹಿಂಬದಿಯಿಂದ ಹಿಡಿದ ಮೇಲೆ ಅಲ್ಲಿ ಸೇರಿದ ಜನ ಆತನ ಕೈಯಿಂದ ತಲವಾರ ಕಿತ್ತು ಕೊಂಡರು. ನಂತರ ಅಲ್ಲಿಗೆ ಪೊಲೀಸರು ಬಂದು ಆತನನ್ನು ವಶಕ್ಕೆ ತೆಗೆದುಕೊಂಡರು.</p>.<p>ಬಕ್ರೀದ್ ದಿನವೇ ಇಂತಹ ಅಹಿತಕರ ಘಟನೆ ನಡೆದಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್:</strong> ಇಲ್ಲಿನ ಓಲ್ಡ್ ಸಿಟಿಯಲ್ಕಿ ಬೆಳಗಿನ ಜಾವ ವ್ಯಕ್ತಿಯೊಬ್ಬ ತಲವಾರ್ ಹಿಡಿದುಕೊಂಡು ಪೊಲೀಸರನ್ನು ಅಟ್ಟಾಡಿಸಿ ಓಡಿಸಿದ ಘಟನೆ ನಡೆದಿದೆ.</p>.<p>ರಸ್ತೆ ಮೇಲೆ ನಿಂತಿದ್ದ ವ್ಯಕ್ತಿಗೆ ಗಸ್ತಿನಲ್ಲಿದ್ದ ಪೊಲೀಸರು ಮನೆಗೆ ತೆರಳುವಂತೆ ಸೂಚಿಸಿದ್ದಾರೆ. ಅದಕ್ಕೆ ತೀವ್ರ ವಿರೋಧ ವ್ಯಕ್ತ ಪಡಿಸಿದ ವ್ಯಕ್ತಿ ತನ್ನ ದ್ವಿಚಕ್ರ ವಾಹನದಲ್ಕಿ ಇಟ್ಟಿದ್ದ ಹಲವಾರು ತೆಗೆದು ಹೊಡೆಯಲು ಬೆನ್ನಟ್ಟಿದ.</p>.<p>ಗಾಬರಿಗೊಂಡ ಪೊಲೀಸ್ ಕಾನ್ ಸ್ಟೆಬಲ್ ಹೆದರಿ ಕಿರುಚಾಡಿ ಎಸ್ಪಿ ಕಚೇರಿಯತ್ತ ಓಡಿಹೋದರು.ಕಿರುಚಾಟದ ಶಬ್ದ ಕೇಳಿ ಮನೆಯಿಂದ ಹೊರಗೆ ಬಂದ ಕೆಲವರು ವ್ಯಕ್ತಿಯನ್ನು ಹಿಡಿಯಲು ಯತ್ನಿಸಿದರು. ಆಗ ಅವರ ಮೇಲೂ ಹಲ್ಲೆಗೆ ಯತ್ನಿದ್ದಾನೆ. ಹೀಗಾಗಿ ಜನ ದಿಕ್ಕಾಪಾಲಾಗಿ ಓಡಿದರು.</p>.<p>ಯುವಕರು ಜಿಲ್ಲಾ ಪೊಲೀಸ್ ಅಧಿಕಾರಿಗೆ ನಾಲ್ಕೈದು ಬಾರಿ ಕರೆ ಮಾಡಿದರೂ ಫೋನ್ ರಿಸಿವ್ ಮಾಡಲಿಲ್ಲ. ಜನ ಮತ್ತೆ ಪೊಲೀಸ್ ಠಾಣೆಗೆ ತೆರಳಿದರು. ಟೌನ್ ಪೊಲೀಸರಿಗೂ ಮನವಿ ಮಾಡಿದರು.</p>.<p>ಅಷ್ಟರಲ್ಲಿ ಆತ ಮನೆಗಳ ಮುಂದೆ ನಿಲ್ಕಿಸಿದ್ದ ದ್ವಿಚಕ್ರ ವಾಹನ ಹಾಗೂ ಕಾರಿನ ಗಾಜುಗಳನ್ನು ಒಡೆದು ಹಾಕಿದ. ಇದರಿಂದ ಇನ್ನಷ್ಟು ತ್ವೇಷಮಯ ವಾತಾವರಣ ನಿರ್ಮಾಣವಾಯಿತು.</p>.<p>ಕೊನೆಗೆ ಒಬ್ಬ ಧೈರ್ಯ ಮಾಡಿ ಆತನನ್ನು ಹಿಂಬದಿಯಿಂದ ಹಿಡಿದ ಮೇಲೆ ಅಲ್ಲಿ ಸೇರಿದ ಜನ ಆತನ ಕೈಯಿಂದ ತಲವಾರ ಕಿತ್ತು ಕೊಂಡರು. ನಂತರ ಅಲ್ಲಿಗೆ ಪೊಲೀಸರು ಬಂದು ಆತನನ್ನು ವಶಕ್ಕೆ ತೆಗೆದುಕೊಂಡರು.</p>.<p>ಬಕ್ರೀದ್ ದಿನವೇ ಇಂತಹ ಅಹಿತಕರ ಘಟನೆ ನಡೆದಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>