ದೇವಸ್ಥಾನದ ಆಡಳಿತಾಧಿಕಾರಿಯಾದ ಬಸವಕಲ್ಯಾಣ ಉಪ ವಿಭಾಗಾಧಿಕಾರಿ ಅವರು ನಾಲ್ಕು ಭಾನುವಾರ ಅಂದರೆ ಡಿ. 12, 19, 26 ಹಾಗೂ ಜನವರಿ 2 ರ ಜಾತ್ರೆಯನ್ನು ರದ್ದುಪಡಿಸಿದ್ದಾರೆ. ಈ ದಿನಗಳಂದು ದೇವಸ್ಥಾನ ಪರಿಸರದಲ್ಲಿ ಭಕ್ತರ ಪ್ರವೇಶ, ಕಾಯಂ ಅಂಗಡಿ, ತಾತ್ಕಾಲಿಕ ಅಂಗಡಿ ತೆರೆಯುವುದನ್ನು ನಿರ್ಬಂಧಿಸಿದ್ದಾರೆ ಎಂದು ಮೈಲಾರ ಮಲ್ಲಣ್ಣ (ಖಂಡೋಬಾ) ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಂತರಾವ್ ಕುಲಕರ್ಣಿ ತಿಳಿಸಿದ್ದಾರೆ.