<p>ಮಿರ್ಜಾಪುರ(ತಾಜ್)(ಜನವಾಡ): ಬೀದರ್ ತಾಲ್ಲೂಕಿನ ಮಿರ್ಜಾಪುರ(ತಾಜ್) ಗ್ರಾಮದಲ್ಲಿ ‘ಮನೆ ಮನೆಗೆ ಗಂಗೆ’ ಇನ್ನೂ ನಾಮಫಲಕದಲ್ಲೇ ಉಳಿದಿದ್ದಾಳೆ.</p>.<p>ಗ್ರಾಮದಲ್ಲಿ ಜಲ ಜೀವನ ಮಿಷನ್ ಯೋಜನೆ ಕಾಮಗಾರಿ ಆರಂಭಿಸುವಾಗ ಕಾಮಗಾರಿಯ ಮಾಹಿತಿ ಒಳಗೊಂಡಂತೆ ‘ಮನೆ ಮನೆಗೆ ಗಂಗೆ’ ಎಂಬ ನಾಮಫಲಕ ಹಾಕಲಾಗಿದೆ. ಆದರೆ, ಎರಡೂವರೆ ವರ್ಷ ಕಳೆದರೂ ಗಂಗೆ ಮನೆ ಮನೆಗೆ ತಲುಪಿಲ್ಲ.<br> ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ 2023ರ ಅಕ್ಟೋಬರ್ನಲ್ಲೇ ಕಾಮಗಾರಿ ಮುಕ್ತಾಯಗೊಳ್ಳಬೇಕಿತ್ತು. ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ಸಿಗಬೇಕಿತ್ತು.</p>.<p>ರಾಜ್ಯ, ಕೇಂದ್ರದ ಪಾಲು ಹಾಗೂ ಸಮುದಾಯ ವಂತಿಕೆ ಸೇರಿದಂತೆ 300 ಮನೆಗಳಿಗೆ ಕಾರ್ಯಾತ್ಮಕ ನಲ್ಲಿ ಸಂಪರ್ಕ ಕಲ್ಪಿಸುವ ಕಾಮಗಾರಿಯ ಒಟ್ಟು ಮೊತ್ತ ₹1.80 ಕೋಟಿ ಆಗಿದೆ.</p>.<p>‘ಗ್ರಾಮದಲ್ಲಿ 2023ರ ಜನವರಿ 3ರಂದು ಆರಂಭವಾದ ಜಲ ಜೀವನ ಮಿಷನ್ ಯೋಜನೆ ಕಾಮಗಾರಿ ಅರ್ಧದಲ್ಲೇ ನಿಂತಿದೆ’ ಎಂದು ದೂರುತ್ತಾರೆ ಗ್ರಾಮದ ರಾಜಕುಮಾರ ಮೇತ್ರೆ.</p>.<p>ಯೋಜನೆಯಡಿ ನೀರು ಪೂರೈಕೆಗೆ ನೀರು ಸಂಗ್ರಹ ಟ್ಯಾಂಕ್ ನಿರ್ಮಿಸಲಾಗಿದೆ. ತೆರೆದ ಬಾವಿ ತೋಡಲಾಗಿದೆ. ಎರಡು ಕೊಳವೆಬಾವಿ ಕೊರೆಸಲಾಗಿದೆ. ರಸ್ತೆಗಳನ್ನು ಅಗೆದು ಪೈಪ್ಲೈನ್ ಮಾಡಲಾಗಿದೆ. ಮನೆ ಮುಂದೆ ನಲ್ಲಿ ಕೂಡಿಸಲಾಗಿದೆ. ನಲ್ಲಿಗಳಿಗೆ ಎಲ್ಲೆಡೆ ಪೈಪ್ಲೈನ್ ಸಂಪರ್ಕ ಕೊಡಲಾಗಿಲ್ಲ ಎಂದು ಹೇಳುತ್ತಾರೆ.</p>.<p>ಗುಣಮಟ್ಟದ ಪೈಪ್ಗಳನ್ನು ಬಳಸಿಲ್ಲ. ಪೈಪ್ ಅಳವಡಿಸಿದ ನಂತರ ಅಗೆದ ರಸ್ತೆ ಸರಿಯಾಗಿ ಮುಚ್ಚಿಲ್ಲ. ಹೀಗಾಗಿ ಸಾರ್ವಜನಿಕರು ತೊಂದರೆ ಅನುಭವಿಸಬೇಕಾಗಿದೆ ಎಂದು ಅಳಲು ತೋಡಿಕೊಳ್ಳುತ್ತಾರೆ.</p>.<p>ಸದ್ಯ ಗ್ರಾಮಸ್ಥರು ಕುಡಿಯುವ ನೀರಿಗೆ ಗ್ರಾಮ ಪಂಚಾಯಿತಿಯ ನಲ್ಲಿಗಳನ್ನು ಅವಲಂಬಿಸಿದ್ದಾರೆ ಎಂದು ಹೇಳುತ್ತಾರೆ.</p>.<p>ಸಂಬಂಧಪಟ್ಟವರು ಕೂಡಲೇ ಜಲ ಜೀವನ ಮಿಷನ್ ಯೋಜನೆ ಕಾಮಗಾರಿ ಪೂರ್ಣಗೊಳಿಸಿ ಮನೆ ಮನೆಗೆ ನಿರಂತರ ಶುದ್ಧ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಾರೆ ಗ್ರಾಮಸ್ಥರು.</p>.<div><blockquote>ನಿಗದಿತ ಕಾಲಮಿತಿಯಲ್ಲಿ ಜಲ ಜೀವನ ಮಿಷನ್ ಯೋಜನೆ ಕಾಮಗಾರಿ ಪೂರ್ಣಗೊಳ್ಳದಿರುವುದರಿಂದ ಶುದ್ಧ ನೀರು ಪಡೆಯುವ ಗ್ರಾಮಸ್ಥರ ಕನಸು ನನಸಾಗಿಲ್ಲ </blockquote><span class="attribution">ರಾಜಕುಮಾರ ಮೇತ್ರೆ ಮಿರ್ಜಾಪುರ(ತಾಜ್) ಗ್ರಾಮಸ್ಥ</span></div>.<div><blockquote> ಗ್ರಾಮದಲ್ಲಿ ಯೋಜನೆಯ ಶೇ 70 ರಷ್ಟು ಕಾಮಗಾರಿ ಮುಗಿದಿದೆ. ಎರಡು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ </blockquote><span class="attribution">ಬಸವರಾಜ ಪಾಟೀಲ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಇಇ–2</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಿರ್ಜಾಪುರ(ತಾಜ್)(ಜನವಾಡ): ಬೀದರ್ ತಾಲ್ಲೂಕಿನ ಮಿರ್ಜಾಪುರ(ತಾಜ್) ಗ್ರಾಮದಲ್ಲಿ ‘ಮನೆ ಮನೆಗೆ ಗಂಗೆ’ ಇನ್ನೂ ನಾಮಫಲಕದಲ್ಲೇ ಉಳಿದಿದ್ದಾಳೆ.</p>.<p>ಗ್ರಾಮದಲ್ಲಿ ಜಲ ಜೀವನ ಮಿಷನ್ ಯೋಜನೆ ಕಾಮಗಾರಿ ಆರಂಭಿಸುವಾಗ ಕಾಮಗಾರಿಯ ಮಾಹಿತಿ ಒಳಗೊಂಡಂತೆ ‘ಮನೆ ಮನೆಗೆ ಗಂಗೆ’ ಎಂಬ ನಾಮಫಲಕ ಹಾಕಲಾಗಿದೆ. ಆದರೆ, ಎರಡೂವರೆ ವರ್ಷ ಕಳೆದರೂ ಗಂಗೆ ಮನೆ ಮನೆಗೆ ತಲುಪಿಲ್ಲ.<br> ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ 2023ರ ಅಕ್ಟೋಬರ್ನಲ್ಲೇ ಕಾಮಗಾರಿ ಮುಕ್ತಾಯಗೊಳ್ಳಬೇಕಿತ್ತು. ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ಸಿಗಬೇಕಿತ್ತು.</p>.<p>ರಾಜ್ಯ, ಕೇಂದ್ರದ ಪಾಲು ಹಾಗೂ ಸಮುದಾಯ ವಂತಿಕೆ ಸೇರಿದಂತೆ 300 ಮನೆಗಳಿಗೆ ಕಾರ್ಯಾತ್ಮಕ ನಲ್ಲಿ ಸಂಪರ್ಕ ಕಲ್ಪಿಸುವ ಕಾಮಗಾರಿಯ ಒಟ್ಟು ಮೊತ್ತ ₹1.80 ಕೋಟಿ ಆಗಿದೆ.</p>.<p>‘ಗ್ರಾಮದಲ್ಲಿ 2023ರ ಜನವರಿ 3ರಂದು ಆರಂಭವಾದ ಜಲ ಜೀವನ ಮಿಷನ್ ಯೋಜನೆ ಕಾಮಗಾರಿ ಅರ್ಧದಲ್ಲೇ ನಿಂತಿದೆ’ ಎಂದು ದೂರುತ್ತಾರೆ ಗ್ರಾಮದ ರಾಜಕುಮಾರ ಮೇತ್ರೆ.</p>.<p>ಯೋಜನೆಯಡಿ ನೀರು ಪೂರೈಕೆಗೆ ನೀರು ಸಂಗ್ರಹ ಟ್ಯಾಂಕ್ ನಿರ್ಮಿಸಲಾಗಿದೆ. ತೆರೆದ ಬಾವಿ ತೋಡಲಾಗಿದೆ. ಎರಡು ಕೊಳವೆಬಾವಿ ಕೊರೆಸಲಾಗಿದೆ. ರಸ್ತೆಗಳನ್ನು ಅಗೆದು ಪೈಪ್ಲೈನ್ ಮಾಡಲಾಗಿದೆ. ಮನೆ ಮುಂದೆ ನಲ್ಲಿ ಕೂಡಿಸಲಾಗಿದೆ. ನಲ್ಲಿಗಳಿಗೆ ಎಲ್ಲೆಡೆ ಪೈಪ್ಲೈನ್ ಸಂಪರ್ಕ ಕೊಡಲಾಗಿಲ್ಲ ಎಂದು ಹೇಳುತ್ತಾರೆ.</p>.<p>ಗುಣಮಟ್ಟದ ಪೈಪ್ಗಳನ್ನು ಬಳಸಿಲ್ಲ. ಪೈಪ್ ಅಳವಡಿಸಿದ ನಂತರ ಅಗೆದ ರಸ್ತೆ ಸರಿಯಾಗಿ ಮುಚ್ಚಿಲ್ಲ. ಹೀಗಾಗಿ ಸಾರ್ವಜನಿಕರು ತೊಂದರೆ ಅನುಭವಿಸಬೇಕಾಗಿದೆ ಎಂದು ಅಳಲು ತೋಡಿಕೊಳ್ಳುತ್ತಾರೆ.</p>.<p>ಸದ್ಯ ಗ್ರಾಮಸ್ಥರು ಕುಡಿಯುವ ನೀರಿಗೆ ಗ್ರಾಮ ಪಂಚಾಯಿತಿಯ ನಲ್ಲಿಗಳನ್ನು ಅವಲಂಬಿಸಿದ್ದಾರೆ ಎಂದು ಹೇಳುತ್ತಾರೆ.</p>.<p>ಸಂಬಂಧಪಟ್ಟವರು ಕೂಡಲೇ ಜಲ ಜೀವನ ಮಿಷನ್ ಯೋಜನೆ ಕಾಮಗಾರಿ ಪೂರ್ಣಗೊಳಿಸಿ ಮನೆ ಮನೆಗೆ ನಿರಂತರ ಶುದ್ಧ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಾರೆ ಗ್ರಾಮಸ್ಥರು.</p>.<div><blockquote>ನಿಗದಿತ ಕಾಲಮಿತಿಯಲ್ಲಿ ಜಲ ಜೀವನ ಮಿಷನ್ ಯೋಜನೆ ಕಾಮಗಾರಿ ಪೂರ್ಣಗೊಳ್ಳದಿರುವುದರಿಂದ ಶುದ್ಧ ನೀರು ಪಡೆಯುವ ಗ್ರಾಮಸ್ಥರ ಕನಸು ನನಸಾಗಿಲ್ಲ </blockquote><span class="attribution">ರಾಜಕುಮಾರ ಮೇತ್ರೆ ಮಿರ್ಜಾಪುರ(ತಾಜ್) ಗ್ರಾಮಸ್ಥ</span></div>.<div><blockquote> ಗ್ರಾಮದಲ್ಲಿ ಯೋಜನೆಯ ಶೇ 70 ರಷ್ಟು ಕಾಮಗಾರಿ ಮುಗಿದಿದೆ. ಎರಡು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ </blockquote><span class="attribution">ಬಸವರಾಜ ಪಾಟೀಲ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಇಇ–2</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>