<p>ಔರಾದ್: ಶಾಸಕ ಪ್ರಭು ಚವಾಣ್ ಅವರು ಗುರುವಾರ ನಡೆಸಿದ ಗ್ರಾಮ ಸಂಚಾರದ ವೇಳೆ ಮಧ್ಯಾಹ್ನ ನಾಗಮಾರಪಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಕೆಲ ಹತ್ತು ಊಟ ಬಡಿಸಿ ಅವರ ಜತೆ ಕುಳಿತು ಊಟ ಮಾಡಿದರು.</p>.<p>ಶಾಲೆ ಕೊಠಡಿಗಳಿಗೆ ಹಾಗೂ ಊಟದ ಕೋಣೆಗೆ ಹೋಗಿ ಪರಿಶೀಲಿಸಿದರು. ಸ್ವಚ್ಛತೆ ಕಡೆ ಗಮನ ಹರಿಸುವಂತೆ ಅಡುಗೆ ಸಿಬ್ಬಂದಿಗೆ ಸೂಚಿಸಿದರು.</p>.<p>ಗಡಿ ಗ್ರಾಮ ಜಮಗಿ ಸರ್ಕಾರಿ ಪ್ರೌಢ ಶಾಲೆಗೆ ಭೇಟಿ ನೀಡಿ ಈ ವರ್ಷದ ಎಸ್ಎಸ್ಎಲ್ಸಿ ಫಲಿತಾಂಶ ಕಡಿಮೆಯಾಗಿರುವ ಕುರಿತು ಬೇಸರ ವ್ಯಕ್ತಪಡಿಸಿದರು. ಶಿಕ್ಷಕರು ಶಾಲೆ ಮಕ್ಕಳನ್ನು ತಮ್ಮ ಮಕ್ಕಳಂತೆ ನೋಡಿ ಅವರಿಗೆ ಪಾಠ ಮಾಡಬೇಕು ಎಂದು ಸಲಹೆ ನೀಡಿದರು.</p>.<p>ಆಂಗ್ಲ ಮಾಧ್ಯಮ ಶಾಲೆಗಳ ಉದ್ಘಾಟನೆ: ಹಂಗರಗಾ, ವನಮಾರಪಳ್ಳಿ, ಬಾದಲಗಾಂವ, ಯನಗುಂದಾ, ನಾಗಮಾರಪಳ್ಳಿ, ಚಿಂತಾಕಿ ವಡಗಾಂವ, ಜಂಬಗಿ, ಗಡಿಕುಶನೂರ, ಕೌಠಾ(ಬಿ) ಗ್ರಾಮಗಳಲ್ಲಿ ಆರಂಭಿಸಿರುವ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆ ಆರಂಭಕ್ಕೆ ಚಾಲನೆ ನೀಡಿದರು. ಮಮದಾಪುರ, ರಾಯಪಳ್ಳಿ, ಕಂದಗೂಳ, ಕೌಡಗಾಂವ ಸೇರಿದಂತೆ ವಿವಿಧ ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಉದ್ಘಾಟಿಸಿದರು.</p>.<p>ಶಾಲಾ ಕೋಣೆ, ಸುತ್ತುಗೋಡೆ, ನೀರಿನ ಘಟಕ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ರೂ. 5 ಕೋಟಿ ಕಾಮಗಾರಿಗೆ ಚಾಲನೆ ನೀಡಿದರು.</p>.<p>ಮುಖಂಡ ರಾಮಶೆಟ್ಟಿ ಪನ್ನಾಳೆ, ಖಂಡೋಬಾ ಕಂಗಟೆ, ರಾಮರೆಡ್ಡಿ ಪಾಟೀಲ, ರವೀಂದ್ರರೆಡ್ಡಿ, ಪ್ರಕಾಶ ಜೀರ್ಗಾ, ಸಚಿನ್ ಬಿರಾದಾರ, ಶರಣಪ್ಪ ಇಟಗ್ಯಾಳ, ದೀಪಕ ಸಜ್ಜನಶೆಟ್ಟೆ, ಮಾರುತಿರೆಡ್ಡಿ ಪಟ್ನೆ, ಗೋವಿಂದರೆಡ್ಡಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಔರಾದ್: ಶಾಸಕ ಪ್ರಭು ಚವಾಣ್ ಅವರು ಗುರುವಾರ ನಡೆಸಿದ ಗ್ರಾಮ ಸಂಚಾರದ ವೇಳೆ ಮಧ್ಯಾಹ್ನ ನಾಗಮಾರಪಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಕೆಲ ಹತ್ತು ಊಟ ಬಡಿಸಿ ಅವರ ಜತೆ ಕುಳಿತು ಊಟ ಮಾಡಿದರು.</p>.<p>ಶಾಲೆ ಕೊಠಡಿಗಳಿಗೆ ಹಾಗೂ ಊಟದ ಕೋಣೆಗೆ ಹೋಗಿ ಪರಿಶೀಲಿಸಿದರು. ಸ್ವಚ್ಛತೆ ಕಡೆ ಗಮನ ಹರಿಸುವಂತೆ ಅಡುಗೆ ಸಿಬ್ಬಂದಿಗೆ ಸೂಚಿಸಿದರು.</p>.<p>ಗಡಿ ಗ್ರಾಮ ಜಮಗಿ ಸರ್ಕಾರಿ ಪ್ರೌಢ ಶಾಲೆಗೆ ಭೇಟಿ ನೀಡಿ ಈ ವರ್ಷದ ಎಸ್ಎಸ್ಎಲ್ಸಿ ಫಲಿತಾಂಶ ಕಡಿಮೆಯಾಗಿರುವ ಕುರಿತು ಬೇಸರ ವ್ಯಕ್ತಪಡಿಸಿದರು. ಶಿಕ್ಷಕರು ಶಾಲೆ ಮಕ್ಕಳನ್ನು ತಮ್ಮ ಮಕ್ಕಳಂತೆ ನೋಡಿ ಅವರಿಗೆ ಪಾಠ ಮಾಡಬೇಕು ಎಂದು ಸಲಹೆ ನೀಡಿದರು.</p>.<p>ಆಂಗ್ಲ ಮಾಧ್ಯಮ ಶಾಲೆಗಳ ಉದ್ಘಾಟನೆ: ಹಂಗರಗಾ, ವನಮಾರಪಳ್ಳಿ, ಬಾದಲಗಾಂವ, ಯನಗುಂದಾ, ನಾಗಮಾರಪಳ್ಳಿ, ಚಿಂತಾಕಿ ವಡಗಾಂವ, ಜಂಬಗಿ, ಗಡಿಕುಶನೂರ, ಕೌಠಾ(ಬಿ) ಗ್ರಾಮಗಳಲ್ಲಿ ಆರಂಭಿಸಿರುವ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆ ಆರಂಭಕ್ಕೆ ಚಾಲನೆ ನೀಡಿದರು. ಮಮದಾಪುರ, ರಾಯಪಳ್ಳಿ, ಕಂದಗೂಳ, ಕೌಡಗಾಂವ ಸೇರಿದಂತೆ ವಿವಿಧ ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಉದ್ಘಾಟಿಸಿದರು.</p>.<p>ಶಾಲಾ ಕೋಣೆ, ಸುತ್ತುಗೋಡೆ, ನೀರಿನ ಘಟಕ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ರೂ. 5 ಕೋಟಿ ಕಾಮಗಾರಿಗೆ ಚಾಲನೆ ನೀಡಿದರು.</p>.<p>ಮುಖಂಡ ರಾಮಶೆಟ್ಟಿ ಪನ್ನಾಳೆ, ಖಂಡೋಬಾ ಕಂಗಟೆ, ರಾಮರೆಡ್ಡಿ ಪಾಟೀಲ, ರವೀಂದ್ರರೆಡ್ಡಿ, ಪ್ರಕಾಶ ಜೀರ್ಗಾ, ಸಚಿನ್ ಬಿರಾದಾರ, ಶರಣಪ್ಪ ಇಟಗ್ಯಾಳ, ದೀಪಕ ಸಜ್ಜನಶೆಟ್ಟೆ, ಮಾರುತಿರೆಡ್ಡಿ ಪಟ್ನೆ, ಗೋವಿಂದರೆಡ್ಡಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>