<p><strong>ಬೀದರ್:</strong> ‘ನನ್ನ ಜೀವನದ ಉಸಿರು ಹಾಗೂ ರಕ್ತ ಬಸವ ತತ್ವಕ್ಕೆ ಸಮರ್ಪಿತವಾಗಿದೆ. ಕೊನೆಯ ಉಸಿರಿನವರೆಗೆ ಬಸವ ತತ್ವ ಪ್ರಸಾರದ ಸೇವೆ ಗೈಯುವೆ’ ಎಂದು ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣ ಹೇಳಿದರು.</p>.<p>ಆರು ತಿಂಗಳ ನಂತರ ಗುಣಮುಖರಾಗಿ ನಗರಕ್ಕೆ ಬಂದ ಅವರಿಗೆ ಅಕ್ಕನ ಅರಿವಿನ ಬಳಗದ ವತಿಯಿಂದ ನಗರದ ಸ್ವಾಮಿ ಸಮರ್ಥ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಗುರುದರ್ಶನ ಸಮಾರಂಭದಲ್ಲಿ ಭಕ್ತರಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.</p>.<p>‘ಜೀವನದಲ್ಲಿ ಬರುವ ಕಷ್ಟಗಳೆಲ್ಲವೂ ಮಾನವನಿಂದ ಮಹಾದೇವನಡೆಗೆ ಒಯ್ಯುವ ದೇವನ ಪರೀಕ್ಷೆಗಳಾಗಿವೆ. ಈ ರೋಗವೆಂಬ ಯುದ್ಧವನ್ನು ಗೆದ್ದು ಬರಲು ಗುರುಬಸವಣ್ಣನವರ ಕರುಣೆ, ಸರ್ವ ಸ್ವಾಮೀಜಿಗಳ ಶುಭ ಹಾರೈಕೆ ಮತ್ತು ಶರಣ ಬಳಗದ ಪ್ರಾರ್ಥನೆಗಳು ಕಾರಣವಾಗಿವೆ’ ಎಂದು ಕೃತಜ್ಞತೆ ಹೇಳಿದರು.</p>.<p>‘ಕರ್ಮವನ್ನು ಗುರು ಕಾರುಣ್ಯದಿಂದ ಗೆಲ್ಲಬಹುದು. ಮೊದಲಿನಿಂದಲು ಗುರುಶಕ್ತಿ ಮತ್ತು ದೇವಶಕ್ತಿಗಳು ಜತೆಗಿವೆ ಎಂಬ ಆತ್ಮವಿಶ್ವಾಸ ನನಗಿತ್ತು’ ಎಂದು ತಿಳಿಸಿದರು.</p>.<p>ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು, ಹುಲಸೂರಿನ ಗುರುಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ, ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು, ಪ್ರಭುಶ್ರೀ ತಾಯಿ ಹಾಗೂ ಪ್ರಭುದೇವರು ಮಾತನಾಡಿದರು.</p>.<p>ಬಸವಕೇಂದ್ರದ ಅಧ್ಯಕ್ಷ ಶರಣಪ್ಪ ಮಿಠಾರೆ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಬಿ.ಜಿ.ಶೆಟಗಾರ, ಶಕುಂತಲಾ ಬೆಲ್ದಾಳೆ ಸೇರಿದಂತೆ ಪ್ರಮುಖರು ಇದ್ದರು. ಕಲಬುರ್ಗಿ, ಜೇವರ್ಗಿ, ಚಿಂಚೋಳಿ, ಹುಮನಾಬಾದ್, ಜಹೀರಾಬಾದ್ನ ಭಕ್ತರು ಪಾಲ್ಗೊಂಡಿದ್ದರು.</p>.<p>ರಮೇಶ ಮಠಪತಿಯವರು ಮಾತನಾಡಿದರು. ಮಾಣಿಕಪ್ಪ ಗೊರನಾಳೆ ಸ್ವಾಗತಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್:</strong> ‘ನನ್ನ ಜೀವನದ ಉಸಿರು ಹಾಗೂ ರಕ್ತ ಬಸವ ತತ್ವಕ್ಕೆ ಸಮರ್ಪಿತವಾಗಿದೆ. ಕೊನೆಯ ಉಸಿರಿನವರೆಗೆ ಬಸವ ತತ್ವ ಪ್ರಸಾರದ ಸೇವೆ ಗೈಯುವೆ’ ಎಂದು ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣ ಹೇಳಿದರು.</p>.<p>ಆರು ತಿಂಗಳ ನಂತರ ಗುಣಮುಖರಾಗಿ ನಗರಕ್ಕೆ ಬಂದ ಅವರಿಗೆ ಅಕ್ಕನ ಅರಿವಿನ ಬಳಗದ ವತಿಯಿಂದ ನಗರದ ಸ್ವಾಮಿ ಸಮರ್ಥ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಗುರುದರ್ಶನ ಸಮಾರಂಭದಲ್ಲಿ ಭಕ್ತರಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.</p>.<p>‘ಜೀವನದಲ್ಲಿ ಬರುವ ಕಷ್ಟಗಳೆಲ್ಲವೂ ಮಾನವನಿಂದ ಮಹಾದೇವನಡೆಗೆ ಒಯ್ಯುವ ದೇವನ ಪರೀಕ್ಷೆಗಳಾಗಿವೆ. ಈ ರೋಗವೆಂಬ ಯುದ್ಧವನ್ನು ಗೆದ್ದು ಬರಲು ಗುರುಬಸವಣ್ಣನವರ ಕರುಣೆ, ಸರ್ವ ಸ್ವಾಮೀಜಿಗಳ ಶುಭ ಹಾರೈಕೆ ಮತ್ತು ಶರಣ ಬಳಗದ ಪ್ರಾರ್ಥನೆಗಳು ಕಾರಣವಾಗಿವೆ’ ಎಂದು ಕೃತಜ್ಞತೆ ಹೇಳಿದರು.</p>.<p>‘ಕರ್ಮವನ್ನು ಗುರು ಕಾರುಣ್ಯದಿಂದ ಗೆಲ್ಲಬಹುದು. ಮೊದಲಿನಿಂದಲು ಗುರುಶಕ್ತಿ ಮತ್ತು ದೇವಶಕ್ತಿಗಳು ಜತೆಗಿವೆ ಎಂಬ ಆತ್ಮವಿಶ್ವಾಸ ನನಗಿತ್ತು’ ಎಂದು ತಿಳಿಸಿದರು.</p>.<p>ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು, ಹುಲಸೂರಿನ ಗುರುಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ, ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು, ಪ್ರಭುಶ್ರೀ ತಾಯಿ ಹಾಗೂ ಪ್ರಭುದೇವರು ಮಾತನಾಡಿದರು.</p>.<p>ಬಸವಕೇಂದ್ರದ ಅಧ್ಯಕ್ಷ ಶರಣಪ್ಪ ಮಿಠಾರೆ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಬಿ.ಜಿ.ಶೆಟಗಾರ, ಶಕುಂತಲಾ ಬೆಲ್ದಾಳೆ ಸೇರಿದಂತೆ ಪ್ರಮುಖರು ಇದ್ದರು. ಕಲಬುರ್ಗಿ, ಜೇವರ್ಗಿ, ಚಿಂಚೋಳಿ, ಹುಮನಾಬಾದ್, ಜಹೀರಾಬಾದ್ನ ಭಕ್ತರು ಪಾಲ್ಗೊಂಡಿದ್ದರು.</p>.<p>ರಮೇಶ ಮಠಪತಿಯವರು ಮಾತನಾಡಿದರು. ಮಾಣಿಕಪ್ಪ ಗೊರನಾಳೆ ಸ್ವಾಗತಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>