ಮಂಜೂರಾತಿ ಪತ್ರ ವಿತರಣೆ: ಸೂರ್ಯಕಾಂತ ನಾಗಮಾರಪಳ್ಳಿ ಅವರು ಅರ್ಹ ಫಲಾನುಭವಿಗಳಿಗೆ ಸರ್ಕಾರದ ಮಂಜೂರಾತಿ ಪತ್ರಗಳನ್ನು ವಿತರಿಸಿದರು. ಚಿಮಕೋಡ್, ಬಸಂತಪುರ, ಮಿರ್ಜಾಪುರ, ಖಾಜಾಪುರ, ಹಮಿಲಾಪುರದಲ್ಲಿ 35 ಜನರಿಗೆ ಮಾಸಾಶನ ಮಂಜೂರಾತಿ ಪತ್ರ ನೀಡಲಾಯಿತು. ಮುಖಂಡ ಫರ್ನಾಂಡಿಸ್ ಹಿಪ್ಪಳಗಾಂವ್, ತರುಣ್ ಸೂರ್ಯಕಾಂತ ನಾಗಮಾರಪಳ್ಳಿ, ಗ್ರಾಮ ಪಂಚಾಯಿತಿ ಸದಸ್ಯ ಪ್ರಕಾಶ ಕಮಠಾಣೆ, ದಿಲೀಪ್ ಕಲಬುರ್ಕೆ, ಪಿಕೆಪಿಎಸ್ ಸದಸ್ಯ ಭದ್ರೇಶ, ರಾಜಕುಮಾರ ಕಾಳೆ, ಯಲ್ಲಪ್ಪ ಮೇತ್ರೆ ಹಾಗೂ ವಿಲ್ಸನ್ ಚಿಲ್ಲರ್ಗಿ ಇದ್ದರು.