ಶಿಕ್ಷಕ ಅನೀಲಕುಮಾರ ಸಿರಮುಂಡಿ ಮಾತನಾಡಿ,‘ಹೆಚ್ಚಾಗಿ ಬಾಣಂತಿಯರಿಗೆ ಮೊದಲ ಮೂರು ತಿಂಗಳು ಪಥ್ಯದ ಅವಧಿಯಲ್ಲಿ ಕೇವಲ ಅನ್ನ ನೀಡಲಾಗುತ್ತದೆ. ಬೇಳೆ–ಕಾಳು, ಕಾಯಿಪಲ್ಲೆಗಳ ಸೇವನೆ ನಿರ್ಬಂಧಿಸಲಾಗುತ್ತದೆ. ಪಾಲಿಷ್ ಮಾಡಿದ ಅಕ್ಕಿಯ ಅನ್ನವನ್ನು ಊಟಕ್ಕೆ ಬಳಸುವ ತಾಯಂದಿರ ಎದೆಹಾಲಿನಲ್ಲಿ ವಿಟಮಿನ್ ಬಿ1 ಕೊರತೆಯಾಗಿ, ಶಿಶು ಸಮಸ್ಯೆ ಎದುರಿಸುತ್ತದೆ. ಪಾಲಿಷ್ ಮಾಡದ ಅಕ್ಕಿಯ ಅನ್ನದ ಜತೆಗೆ ಬೇಳೆ ಕಾಳು ಹಾಗೂ ತರಕಾರಿಯನ್ನೊಳಗೊಂಡ ಊಟ ಒದಗಿಸಿದಲ್ಲಿ ಈ ರೀತಿಯ ಸಮಸ್ಯೆ ಆಗುವುದಿಲ್ಲ ಎಂದು ಹೇಳಿದರು.